ಬೆಂಗಳೂರು : ದುಬೈ ನಿಂದ ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿ ಆರ್ ಐ ಕಸ್ಟಡಿಯಲ್ಲಿದ್ದ ನಟಿ ರನ್ಯಾರಾವ್ ಇಂದು ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಮತ್ತೆ ಅಧಿಕಾರಿಗಳು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಿದ್ದಾರೆ.
ಕೋರ್ಟ್ ನಲ್ಲಿ ನಟಿ ರನ್ಯಾರಾವ್ ಹಾಜರಾದ ಬಳಿಕ ಕಣ್ಣೀರು ಹಾಕಿದರು. ಈ ವೇಳೆ ಹಲ್ಲೆ ಮಾಡಿದ್ರ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದಾಗ, ಕೋರ್ಟ್ನಲ್ಲೇ ನಟಿ ರನ್ಯರಾವ್ ಅತ್ತಿದ್ದಾರೆ. ನಾನು ಎಮೋಷನಲ್ ಬ್ರೋಕನ್ ಆಗಿದ್ದೇನೆ. ಕೆಟ್ಟದಾಗಿ ನನಗೆ ಬೈದಿದ್ದಾರೆ. ತಲೆಗೆ ಸುತ್ತಿಗಿಯಲ್ಲಿ ಹೊಡೆದಂತೆ ಪ್ರಶ್ನೆ ಮಾಡಿದ್ದಾರೆ. ಮಾನಸಿಕವಾಗಿ ನಾನು ಕುಗ್ಗಿದ್ದೇನೆ ಎಂದು ರನ್ಯಾ ಜಡ್ಜ್ ಮುಂದೆ ಹೇಳಿದರು.
ಕೆಟ್ಟ ಪದ ಬಳಸಿದ್ದಾರೆ. ದೈಹಿಕವಾಗಿ ಹಲ್ಲೆ ಮಾಡಿಲ್ಲ. ಹೇಳಿಲ್ಲ ಅಂದರೆ ಏನಾಗುತ್ತೆ ಅನ್ನೋದು ಗೊತ್ತಲ್ಲ. ಒಂದು ಬೆದರಿಕ ರೀತಿಯಲ್ಲಿ ಅಧಿಕಾರಿಗಳು ಮಾತನಾಡಿದ್ದಾರೆ ಎಂದು ಜಡ್ಜ್ ಜಜ್ ಮುಂದೆ ನಟಿ ರನ್ಯಾರಾವ್ ತಿಳಿಸಿದ್ದಾರೆ.
ಇದೆ ವೇಳೆ ಈ ವೇಳೆ ನ್ಯಾಯಾಧೀಶರು ಡಿ ಆರ್ ಐ ಅಧಿಕಾರಿಗಳಿಗೆ ಉತ್ತರ ನೀಡುವಂತೆ ಸೂಚನೆ ನೀಡಿದರು. ಬಳಿಕ ಸಾಕ್ಷಿಗಳನ್ನು ಮುಂದೆ ಇಟ್ಟು ಕೇಳಿದ್ದೇವೆ. ರನ್ಯಾ ರಾವ್ ಗೆ ಯಾವುದೇ ಹಲ್ಲೆ ಮಾಡಿಲ್ಲ ಎಂದು ಕೋರ್ಟಿಗೆ ಡಿ ಆರ್ ಐ ಅಧಿಕಾರಿಗಳು ಮಾಹಿತಿ ನೀಡಿದರು.