ಕಲಬುರ್ಗಿ : ಇಂದು ಕಲ್ಬುರ್ಗಿಯಲ್ಲಿ ಬೆಳ್ಳಂ ಬೆಳಿಗ್ಗೆ ಭೀಕರವಾದಂತಹ ಮರ್ಡರ್ ನಡೆದಿದ್ದು, ಕಬ್ಬಿಣದ ರಾಡ್ ನಿಂದ ಹೊಡೆದು ರೌಡಿಶೀಟರ್ ಓರ್ವನನ್ನು ಕೊಲೆ ಮಾಡಲಾಗಿದೆ.
ಈ ಒಂದು ಘಟನೆ ಕಲಬುರ್ಗಿಯ ಕಾಕಡೆ ಚೌಕ್ ಬಳಿ ಲಂಗರ್ ಹನುಮಾನ್ ದೇವಸ್ಥಾನದ ಸಮೀಪ ವೀರೇಶ್ ಸಾರಥಿ(40) ಎನ್ನುವ ರೌಡಿ ಶೀಟರ್ ನನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದಾರೆ.
ಕೊಲೆಯಾದ ರೌಡಿಶೀಟರ್ ಕಲಬುರಗಿ ಭವಾನಿ ನಗರದ ನಿವಾಸಿಯಾಗಿದ್ದಾನೆ ಎಂದು ತಿಳಿದುಬಂದಿದ್ದು, ಕೊಲೆಗೂ ಮುನ್ನ ದುಷ್ಕರ್ಮಿಗಳು ದೇಗುಲದ ಬಳಿ ಕರೆಸಿಕೊಂಡು ಕೊಲೆ ಮಾಡಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಉಪನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.