Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ವಿಶ್ವದ ನಂಬರ್ 1 ಆಟಗಾರ್ತಿ ‘ಸಬಲೆಂಕಾ’ ಮಣಿಸಿ ಚೊಚ್ಚಲ ‘ಫ್ರೆಂಚ್ ಓಪನ್ ಕಿರೀಟ’ ಗೆದ್ದ ‘ಕೊಕೊ ಗೌಫ್’

07/06/2025 9:58 PM

Good News : ಆಪರೇಷನ್ ಸಿಂಧೂರ್ ರೀಚಾರ್ಜ್ ಆಫರ್ ; ‘ಕ್ಯಾಶ್ ಬ್ಯಾಕ್’ ಜೊತೆಗೆ ‘ರಾಷ್ಟ್ರ ಸೇವೆ’ ಸೌಭಾಗ್ಯ

07/06/2025 9:34 PM

BREAKING: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ ಪ್ರಕರಣ: ಪರಿಹಾರದ ಮೊತ್ತ 25 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

07/06/2025 9:21 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ರಾಜ್ಯ ಸರ್ಕಾರದಿಂದ ‘ಡಿಫೈನ್ಡ್ ಪಿಂಚಣಿ ಯೋಜನೆ’ಗೆ ಒಳಪಟ್ಟ ‘ಸರ್ಕಾರಿ ನೌಕರ’ರಿಗೆ ಮಹತ್ವದ ಮಾಹಿತಿ
KARNATAKA

BIG NEWS: ರಾಜ್ಯ ಸರ್ಕಾರದಿಂದ ‘ಡಿಫೈನ್ಡ್ ಪಿಂಚಣಿ ಯೋಜನೆ’ಗೆ ಒಳಪಟ್ಟ ‘ಸರ್ಕಾರಿ ನೌಕರ’ರಿಗೆ ಮಹತ್ವದ ಮಾಹಿತಿ

By kannadanewsnow0920/02/2025 6:33 AM
vidhana soudha
vidhana soudha

ಬೆಂಗಳೂರು: ರಾಜ್ಯ ಸರ್ಕಾರದಿಂದ ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಡಿಫೈನ್ಡ್ ಪಿಂಚಣಿ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುವಂತ ಸರ್ಕಾರಿ ನೌಕರರ ಎನ್ ಪಿ ಎಸ್ ಪ್ರಾನ್ ಖಾತೆಯಲ್ಲಿನ ಮೊತ್ತವನ್ನು ಹಿಂಪಡೆಯುವ ಕೂರಿತಂತೆ ಮಾರ್ಗಸೂಚಿಯನ್ನು ಹೊರಡಿಸಿದೆ.

ಈ ಸಂಬಂಧ ರಾಜ್ಯ ಸರ್ಕಾರದಿಂದ ನಡವಳಿಯನ್ನು ಹೊರಡಿಸಲಾಗಿದ್ದು, ದಿನಾಂಕ: 01.04.2006 ರಂದು ಹಾಗೂ ತದನಂತರ ಸರ್ಕಾರಿ ಸೇವೆಗೆ ಸೇರಿದ ಎಲ್ಲಾ ಸರ್ಕಾರಿ ನೌಕರರಿಗೆ ನೂತನ ಅಂಶದಾಯಿ ಕೊಡುಗೆ ಯೋಜನೆಯನ್ನು (ರಾಷ್ಟ್ರೀಯ ಪಿಂಚಣಿ ಯೋಜನೆ) ಕಡ್ಡಾಯವಾಗಿ ಜಾರಿಗೊಳಿಸಲಾಗಿದೆ ಎಂದು ತಿಳಿಸಿದೆ.

ಓದಲಾದ ಕ್ರಮ ಸಂಖ್ಯೆ (2)ರ ಸರ್ಕಾರಿ ಆದೇಶದಲ್ಲಿನ ಸೂಚನೆಗಳನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವ ಮಾರ್ಗಸೂಚಿಯನ್ನು ರೂಪಿಸುವುದರೊಂದಿಗೆ ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ ಎಂದಿದೆ.

ಓದಲಾದ ಕ್ರಮ ಸಂಖ್ಯೆ (3)ರ ಸರ್ಕಾರಿ ಆದೇಶದನ್ವಯ ದಿನಾಂಕ: 01.04.2006ರ ಪೂರ್ವದಲ್ಲಿನ ನೇಮಕಾತಿ ಅಧಿಸೂಚನೆಗಳ ಮೂಲಕ ಆಯ್ಕೆ ಹೊಂದಿ ಆ ದಿನಾಂಕದಂದು ಅಥವಾ ತದನಂತರದಲ್ಲಿ ರಾಜ್ಯ ಸರ್ಕಾರದ ಸೇವೆಗೆ ಸೇರಿದ ನೌಕರರನ್ನು ಒಂದು ಬಾರಿಯ ಕ್ರಮವಾಗಿ ಡಿಫೈನ್ಸ್ ಪಿಂಚಣಿ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಸರ್ಕಾರವು ಒಪ್ಪಿಗೆಯನ್ನು ನೀಡಿರುತ್ತದೆ.

ಪ್ರಸ್ತುತ ಮೇಲಿನ ದಿನಾಂಕ: 24.01.2024ರ ಸರ್ಕಾರಿ ಆದೇಶದನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಡಿಫೈನ್ ಪಿಂಚಿಣಿ ಯೋಜನೆಯ ವ್ಯಾಪ್ತಿಗೊಳಪಡುವ ಸರ್ಕಾರಿ ಅಧಿಕಾರಿ/ನೌಕರರ ಎನ್.ಪಿ.ಎಸ್. ಪ್ರಾನ್ ಖಾತೆಯಲ್ಲಿನ ನೌಕರರ ಮತ್ತು ಸರ್ಕಾರದ ವಂತಿಗೆಯನ್ನು ಹಿಂಪಡೆಯುವ ಕುರಿತು ಹಾಗೂ ಸಂಬಂಧಿತ ಸರ್ಕಾರಿ ನೌಕರರಿಗೆ ಜಿ.ಪಿ.ಎಫ್.ಖಾತೆಯನ್ನು ತೆರೆಯುವುದು ಮುಂತಾದ ವಿಷಯಗಳ ಬಗ್ಗೆ ಮಾರ್ಗಸೂಚಿಯನ್ನು ಹೊರಡಿಸಲು ಸರ್ಕಾರ ತೀರ್ಮಾನಿಸಿದೆ. ಅದರಂತೆ ಈ ಆದೇಶ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಿನಾಂಕ: 24.01.2024ರ ಸರ್ಕಾರಿ ಆದೇಶ ಸಂಖ್ಯೆ: ಆಇ-ಪಿಇಎನ್/99/2023ರನ್ವಯ ರಾಷ್ಟ್ರೀಯ ಪಿಂಚಣಿ ಯೋಜನೆಯಿಂದ ಡಿಫೈನ್ ಪಿಂಚಣಿ ಯೋಜನೆಯ ವ್ಯಾಪ್ತಿಗೊಳಪಡುವ ಸೇವೆಯಲ್ಲಿರುವ/ನಿವೃತ್ತಿ ಹೊಂದಿದ/ಮರಣ ಹೊಂದಿದ ಅರ್ಹ ಸರ್ಕಾರಿ ಅಧಿಕಾರಿ/ನೌಕರರ ಪ್ರಾನ್ ಖಾತೆಯಲ್ಲಿರುವ ಮೊತ್ತವನ್ನು ಹಿಂಪಡೆಯಬೇಕಾಗಿರುವುದರಿಂದ ಈ ಕುರಿತು ವಿವಿಧ ಹಂತಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಮತ್ತು ಸಂಬಂಧಪಟ್ಟವರ ಜವಾಬ್ದಾರಿಗಳನ್ನು ಈ ಕೆಳಕಂಡಂತೆ ನಿಗಧಿಪಡಿಸಿದೆ.

1. ಇಲಾಖಾ ಮುಖ್ಯಸ್ಥರುಗಳ ಜವಾಬ್ದಾರಿಗಳು

a. ಸರ್ಕಾರಿ ಅಧಿಕಾರಿ/ನೌಕರರು ಎನ್.ಪಿ.ಎಸ್. ಯೋಜನೆಗೆ ಒಳಪಡುವುದಿಲ್ಲ ಎಂದು ಅನುಬಂಧದಲ್ಲಿನ ನಮೂನೆ-1ರಲ್ಲಿ ದೃಢೀಕರಣವನ್ನು ನೀಡುವುದು ಮತ್ತು ಅದರ ಪ್ರತಿಯನ್ನು ಸಂಬಂಧಪಟ್ಟ ಡಿಡಿಒಗೆ ಕಳುಹಿಸುವುದು.
b. ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿ/ನೌಕರರ ವೇತನದಿಂದ ಕಟಾವಣೆಯಾಗುವ ಎನ್.ಪಿ.ಎಸ್. ವಂತಿಗೆಯನ್ನು ಹೆಚ್.ಆರ್.ಎಂ.ಎಸ್. ನಲ್ಲಿ ಸ್ಥಗಿತಗೂಳಿಸುವುದು ಮತ್ತು ಅದರ ಮಾಹಿತಿಯನ್ನು ಖಜಾನ ಆಯುಕ್ತಾಲಯದ ರಾಷ್ಟ್ರೀಯ ಪಿಂಚಣಿ ಯೋಜನೆ ಘಟಕಕ್ಕೆ ನೀಡುವುದು.
C. ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿ/ನೌಕರರ ಭವಿಷ್ಯ ನಿಧಿ ಖಾತೆಯನ್ನು ತೆರೆಯಲು ಸಾಮಾನ್ಯ ಭವಿಷ್ಯ ನಿಧಿ ಯೋಜನೆಯಡಿಯಲ್ಲಿನ ನಮೂನೆ-1 ಹಾಗೂ ನಾಮನಿರ್ದೇಶನವನ್ನು ನಮೂನೆ-2 ರಲ್ಲಿ ಪಡೆದು ಮಹಾಲೇಖಪಾಲರಿಗೆ ಕಳುಹಿಸಿಕೊಡುವುದು.
2. ಹಣ ಸೆಳೆಯುವ ಮತ್ತು ಬಟವಾಡೆ ಅಧಿಕಾರಿಗಳ (ಡಿಡಿಒ) ಜವಾಬ್ದಾರಿಗಳು
ಡಿಡಿಒಗಳು ಈ ಕೆಳಕಂಡ ಪ್ರಕರಣಗಳಲ್ಲಿ ನಿರ್ದಿಷ್ಟವಡಿಸಿದ ದಾಖಲೆಗಳನ್ನು ಸಂಬಂಧಪಟ್ಟ, ಖಜಾನೆಯ ಮೂಲಕ ಎನ್.ಪಿ.ಎಸ್. ಘಟಕಕ್ಕೆ ನೀಡುವುದು:-
೩. ಸೇವೆಯಲ್ಲಿರುವ ಸರ್ಕಾರಿ ಅಧಿಕಾರಿ/ನೌಕರರ ಪ್ರಕರಣಗಳು
i. ಇಲಾಖಾ ಮುಖ್ಯಸ್ಥರು ದೃಢೀಕರಿಸಿರುವ ನಮೂನೆ-1.
i. ಪ್ರಾನ್ ಖಾತೆಗೆ ಸಂಬಂಧಿಸಿದಂತೆ ವೇತನದಿಂದ ಕಡಿತಗೊಳಿಸಿದ ಎನ್.ಪಿ.ಎಸ್ .ಮೊತ್ತದ ವಿವರಗಳ ತಃಖ (Statementof Trensactions) ಹಾಗೂ ತಃಖೆಯಲ್ಲಿ ನಮೂದಿಸಿರುವುದಲ್ಲದೇ ಇನ್ಯಾವುದೇ ಮತ್ತು ಎನ್.ಪಿ.ಎಸ್. ಸಂಬಂಧ ಕಟಾವಣೆಯಾಗಿರುವುದಿಲ್ಲ ಮತ್ತು ಕಟಾವಣೆ ಮಾಡುವುದು ಬಾಕಿ ಇರುವುದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿ/ನೌಕರರು ಮತ್ತು ಡಿಡಿಓರವರಿಂದ ದೃಢೀಕರಣ.
iii. ಮೂಲ ಪಾನ್ ಕಾರ್ಡ್ ಪ್ರತಿ ಅಥವಾ ಡಿಡಿಓ ರವರಿಂದ ದೃಢೀಕೃತ ಇ-ಪ್ರಾನ್ ಪ್ರತಿ
iv. ಸರ್ಕಾರಿ ಅಧಿಕಾರಿ/ನೌಕರರ ಜಿ.ಪಿ.ಎಫ್. ಖಾತೆ ವಿವರ.
b. ನಿವೃತ್ತಿ ಹೊಂದಿರುವ ಸರ್ಕಾರಿ ಅಧಿಕಾರಿ/ನೌಕರರ ಪ್ರಕರಣಗಳು
i. ಮೇಲಿನ ಕ್ರಮ ಸಂ. 2 (a) – (i), (ii), (iii) ರಲ್ಲಿನ ದಾಖಲೆಗಳು.
ii. ನಿವೃತ್ತಿ ಹೊಂದಿದ ನೌಕರರು ಪಿಂಚಣಿಗಾಗಿ (ನಿವೃತ್ತಿ ಉಪದಾನ ಒಳಗೊಂಡಂತೆ) ಅನುಬಂಧದಲ್ಲಿನ ನಮೂನೆ-2ರಲ್ಲಿ ಮನವಿ.
iii, ಅನುಬಂಧದಲ್ಲಿನ ನಮೂನ-3ರಲ್ಲಿ ಈಗಾಗಲೇ CRA ಯಿಂದ ಇತ್ಯರ್ಥಪಡಿಸಿರುವ ಪ್ರಾನ್ ಖಾತೆಯಲ್ಲಿನ ಮೊತ್ತದ ವಿವರ.
iv. ಈಗಾಗಲೇ ASP ಯಲ್ಲಿ ಹೂಡಿಕೆ ಮಾಡಿರುವ ಮೊತ್ತವನ್ನು ASP ಯಿಂದ ಹಿಂಪಡೆದು ಸರ್ಕಾರಕ್ಕೆ ಹಿಂತಿರುಗಿಸಲು ನಮೂನೆ-4 ರಲ್ಲಿ ಒಪ್ಪಿಗೆ ಪತ್ರ
v. ಡಿಡಿಓ ರವರಿಂದ Annuity Policy Cancellation ಮಾಡಲು ಸಂಬಂಪಟ್ಟ ASP ರವರಿಗೆ ಬರೆದಿರುವ ಪತ್ರ (ನಮೂನೆ-5).
vi. ASP ರವರಿಂದ ನೀಡಿರುವ ಬಾಂಡ್ (ಹೂಡಿಕೆ/ಬಾಂಡ್) ಜೆರಾಕ್ಸ್ ಪ್ರತಿಯನ್ನು ಮತ್ತು ಮಾಸಿಕ ಪಿಂಚಿಣಿ ವಿವರವನ್ನು ನಿವೃತ್ತ ನೌಕರರು ಹಾಗೂ ಡಿಡಿಓ ರವರು ದೃಢೀಕರಿಸಿದ ಪ್ರತಿ‍
vii, ಡಿಡಿಓ ರವರಿಂದ ದೃಢೀಕರಿಸಿರುವ ನಿವೃತ್ತ ಅಧಿಕಾರಿ/ನೌಕರರ_ ಖಜಾನ-2 recipient ID ವಿವರ.

C. ಮರಣ ಹೊಂದಿರುವ ಸರ್ಕಾರಿ ಅಧಿಕಾರಿ/ನೌಕರರ ಪ್ರಕರಣಗಳು

i. ಕ್ರಮ ಸಂ. 2 (a) – (i), (ii), (i) ರಲ್ಲಿನ ದಾಖಲೆಗಳು.
ii. ಮೃತರ ನಾಮ ನಿರ್ದೇಶಿತರಿಂದ ಕುಟುಂಬ ಪಿಂಚಣಿ ಹಾಗೂ ಮರಣ ಉಪದಾನಕ್ಕೆ ನಮೂನೆ-6ರಲ್ಲಿ ಮನವಿ.
ii. ನಮೂನೆ-7 ಮತ್ತು 7(A) ರಲ್ಲಿ ನೋಡಲ್ ಕಚೇರಿಯಿಂದ (ಡಿಡಿಒ ಮತ್ತು ಖಜಾನ) ದೃಡೀಕರಣ
iv. ಮರಣ ಪ್ರಮಾಣ ಪತ್ರ (ಮೂಲ ಪ್ರತಿ), ಸಂಬಂಧಪಟ್ಟ ಡಿಡಿಓರವರಿಂದ ಹಾಗೂ ಮೃತರ ನಾಮನಿರ್ದೇಶಿತರಿಂದ ದೃಢೀಕರಣ.
v. ಜೀವಂತ ಸದಸ್ಯರ ಪ್ರಮಾಣ ಪತ್ರ (ಮೂಲ ಪ್ರತಿ), ಸಂಬಂಧಪಟ್ಟ ಡಿಡಿಓರವರಿಂದ ಹಾಗೂ ಮೃತರ ನಾಮನಿರ್ದೇಶಿತರಿಂದ ದೃಢೀಕರಣ. vi. ಈಗಾಗಲೇ ಪಾವತಿಯಾಗಿರುವ ಇಡಿಗಂಟಿನ ಪರಿಹಾರದ ಮೊತ್ತವನ್ನು ಲೆಕ್ಕ ಶೀರ್ಷಿಕೆ 2071-01-911-0-06 ಗೆ ಜಮೆ ಮಾಡಿರುವ ಚಲನ್ ಪ್ರತಿ ಮತ್ತು KTC 25 ಅನ್ನು ಡಿಡಿಓರವರಿಂದ ದೃಢೀಕರಣ.
vii, ನಮೂನೆ-8 ರಲ್ಲಿ ಈಗಾಗಲೇ CRA ಯಿಂದ ಇತ್ಯರ್ಥಪಡಿಸಿರುವ ಪ್ರಾನ್ ಖಾತೆಯಲ್ಲಿನ ಮೊತ್ತದ ವಿವರ.
viii. ಈಗಾಗಲೇ ASP ಯಲ್ಲಿ ಹೂಡಿಕೆ ಮಾಡಿರುವ ಮೊತ್ತವನ್ನು ASP ಯಿಂದ ಹಿಂಪಡೆದು ಸರ್ಕಾರಕ್ಕೆ ಹಿಂತಿರುಗಿಸಲು ಮೃತರ ನಾಮನಿರ್ದೇಶಿತರಿಂದ ನಮೂನೆ-4 ರಲ್ಲಿ ಒಪ್ಪಿಗೆ ಪತ್ರ.
ix, ಡಿಡಿಓ ರವರಿಂದ Annuity Policy Cancellation ಮಾಡಲು ಸಂಬಂಪಟ್ಟ ASP ರವರಿಗೆ ಬರೆದಿರುವ ಪತ್ರ(ನಮೂನೆ-5)
x. ASP ರವರಿಂದ ನೀಡಿರುವ ಬಾಂಡ್ (ಹೂಡಿಕೆ/ಬಾಂಡ್) ಜೆರಾಕ್ಸ್ ಪ್ರತಿಯನ್ನು ಮತ್ತು ಮಾಸಿಕ ಪಿಂಚಿಣಿ ವಿವರವನ್ನು ನಾಮನಿರ್ದೇಶಿತರು ಹಾಗೂ ಡಿಡಿಓ ರವರು ದೃಢೀಕರಿಸಿದ ಪತಿ.
xi, ಡಿಡಿಓ ರವರಿಂದ ದೃಢೀಕರಿಸಿರುವ ಮೃತರನಾಮನಿರ್ದೇಶಿತರ ಖಜಾನ-2 recipient ID ವಿವರ.
d. ಡಿಡಿಓ ರವರು ನೌಕರರು/ಅಧಿಕಾರಿಗಳು ಕೇಂದ್ರ ಅಥವಾ ರಾಜ್ಯ/ಇತರೆ ಸ್ವಾಯತ್ತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿರುವ ಬಗ್ಗೆ ಅಧಿಕಾರಿ/ನೌಕರರಿಂದ ನಮೂನೆ-9 ರಲ್ಲಿ ದೃಢೀಕರಣ, ಸ್ವಾಯತ್ತ ಸಂಸ್ಥೆಯಿಂದ ನಮೂನೆ-94 ರಲ್ಲಿ ದೃಢೀಕರಣ ಹಾಗೂ ಸಂಬಂಧಪಟ್ಟ, ಮೊತ್ತವನ್ನು ಸ್ವಾಯತ್ತ ಸಂಸ್ಥೆಗೆ ಜಮೆ ಮಾಡಲು ಖಜಾನೆ-2 recipient ID ವಿವರಗಳನ್ನು ಪಡೆದು ಕಡ್ಡಾಯವಾಗಿ ದೃಢೀಕರಣದೊಂದಿಗೆ ಸಲ್ಲಿಸುವುದು.
e. Central Record keeping Agency (CRA) do Error Rectification Module (ERM) ನಲ್ಲಿ ಪ್ರಕಿಯೆಯನ್ನು ಕೈಗೊಳ್ಳಲು ಡಿಡಿಓರವರು ಯುಕ್ತದ್ವಾರದ ಮೂಲಕ ಸಂಬಂಧಪಟ್ಟ ವೇತನ ಪಡೆಯುವ ಖಜಾನೆಗೆ ಪ್ರಸ್ತಾವನೆಯನ್ನು ಸಲ್ಲಿಸುವುದು.
3. ಖಜಾನೆಗಳ ಜವಾಬ್ದಾರಿಗಳು:
a. ಸೇವೆಯಲ್ಲಿರುವ/ನಿವೃತ್ತಿ/ಮರಣ ಹೊಂದಿ CRA ರವರಿಂದ ಇತ್ಯರ್ಥಪಡಿಸಿರದ ಪಕರಣಗಳಿಗೆ ಖಜಾನೆಯವರು ಪ್ರಸ್ತಾವನೆಯನ್ನು ನಿಯಮಾನುಸಾರ ಪರಿಶೀಲಿಸಿ CRA website ನಲ್ಲಿ ERM Claim ಅನ್ನು initiate ಮತ್ತು verify ಮಾಡಿದ ದೃಢೀಕೃತ ಪ್ರತಿಯನ್ನು Authorise ಮಾಡಲು ಎನ್.ಪಿ.ಎಸ್. ಘಟಕಕ್ಕೆ ಸಲ್ಲಿಸುವುದು. b. ನಿವೃತ್ತಿ/ಮರಣ ಹೊಂದಿ CRA ರವರಿಂದ ಇತ್ಯರ್ಥಪಡಿಸಿರುವ ಪ್ರಕರಣಗಳಿಗೆ – CRA ರವರಿಂದ ಪ್ರಾನ್ ಖಾತೆಯಲ್ಲಿರುವ ಮೊತ್ತವನ್ನು ಇತ್ಯರ್ಥಪಡಿಸಿರುವ ಮೊತ್ತದ ವಿವರ ಮತ್ತು ಈಗಾಗಲೇ ಇಡಿಗಂಟು ಪಾವತಿ ಮಾಡಿರುವ ಮೊತ್ತದ ವಿವರವನ್ನು ಪರಿಶೀಲಿಸಿ, ಖಚಿತಪಡಿಸಿಕೊಂಡು ಹಾಗೂ ಡಿಡಿಓ ರವರು ನೀಡಿರುವ Annuity Policy Cancellation ಪತ್ರವನ್ನು ದೃಢೀಕರಿಸಿ ಮುಂದಿನ ಕ್ರಮಕ್ಕಾಗಿ ಎಲ್ಲಾ ದಾಖಲೆಗಳೊಂದಿಗೆ ಪ್ರಸ್ತಾವನೆಯನ್ನು ಎನ್.ಪಿ.ಎಸ್. ಘಟಕಕ್ಕೆ ಸಲ್ಲಿಸುವುದು.

4. ಎನ್.ಪಿ.ಎಸ್.ಘಟಕದ ಜವಾಬ್ದಾರಿಗಳು:

1. ಸೇವೆಯಲ್ಲಿರುವ ಮತ್ತು ನಿವೃತ್ತಿ/ಮರಣ ಹೊಂದಿ CRA ರವರಿಂದ ಇತ್ಯರ್ಥಪಡಿಸಿರದ ಪ್ರಕರಣಗಳಿಗೆ – ಎನ್.ಪಿ.ಎಸ್. ಘಟಕದಲ್ಲಿ ಖಜಾನೆಯಿಂದ ಅಧಿಕಾರಿಗಳ ERM ಪುಸ್ತಾವನ ಸ್ವೀಕರಿಸಿದ ನಂತರ ಸದರಿ ಪುಸ್ತಾವನೆಯನ್ನು ಪರಿಶೀಲಿಸಿ CFA ರವರಲ್ಲಿ Claim authorize ಮಾಡುವುದು.
2. ಪಾನ್ ಖಾತೆಯಲ್ಲಿ ಶೇಖರಣೆಗೊಂಡಿರುವ ಸಂಪೂರ್ಣ ಮೊತ್ತವನ್ನು ಖಜಾನ ಆಯುಕ್ತರ ಪದನಾಮದಲ್ಲಿ SBI, ಶಿವಾಜಿನಗರ ಶಾಖೆಯಲ್ಲಿ ತೆರೆದಿರುವ proxy pool ಖಾತೆಗೆ CRA ಯಿಂದ ಜಮೆ ಮಾಡಲಾಗುತ್ತದೆ.
3. ನಿವೃತ್ತಿ ಅಧಿಕಾರಿ/ನೌಕರರಿಗೆ ಅಥವಾ ಮೃತರ ನಾಮನಿರ್ದೇಶಿತರಿಗೆ ಪ್ರಾನ್ ಖಾತೆಯ ಸಂಪೂರ್ಣ ಮೊತ್ತವನ್ನು ಇತ್ಯರ್ಥಪಡಿಸಿದ ಪ್ರಕರಣಗಳಿಗೆ CRA ರವರಿಂದ ವಂತಿಗೆಯ ವರ್ಗೀಕರಣದ ವಿವರಗಳನ್ನು ಮಿಂಚಂಚೆ ಹಾಗೂ ಪತ್ರದ ಮುಖಾಂತರ ಪಡೆಯುವುದು. 4. ನಿವೃತ್ತಿ ಅಧಿಕಾರಿ/ನೌಕರರಿಗೆ ಅಥವಾ ಮೃತರ ನಾಮನಿರ್ದೇಶಿತರಿಗೆ CRA ರವರಿಂದ ಪ್ರತಿಶತವಾರು ಮೊತ್ತವನ್ನು ಇತ್ಯರ್ಥಪಡಿಸಿ ASP ರವರಲ್ಲಿ ಹೂಡಿಕೆ ಮಾಡಿರುವ ಪ್ರಕರಣಗಳಿಗೆ
a. ನೊಡಲ್ ಕಚೇರಿಯಿಂದ ಸ್ವೀಕೃತವಾಗಿರುವ Annuity Cancellation ಪತ್ರವನ್ನು ಅಗತ್ಯ ದಾಖಲೆಗಳೊಂದಿಗೆ ASP ರವರಿಗೆ ಕಳುಹಿಸುವುದು ಮತ್ತು CRA ರವರಿಗೆ ಅನುಸರಣೆ ಮಾಡಲು ತಿಳಿಸುವುದು.
b. Annuity cancellation ಮಾಡಿಸಿದ ನಂತರ CRA ರವರು ಮೊತ್ತವನ್ನು proxy pool ಖಾತೆಗೆ ಜಮೆ ಮಾಡುವುದು.
C. ಇತ್ಯರ್ಥಪಡಿಸಿರುವ ಪ್ರತಿಶತವಾರು ಮೊತ್ತ ಮತ್ತು ASE ಹೂಡಿಕೆ ಮೊತ್ತಕ್ಕೆ ವಂತಿಗೆಯ ವರ್ಗೀಕರಣದ ವಿವರಗಳನ್ನು CRA ರವರಿಂದ ಮಿಂಚಂಚೆ ಹಾಗೂ ಪತ್ರದ ಮುಖಾಂತರ ಪಡೆಯುವುದು.
5. ನಿವೃತ್ತಿ ಅಧಿಕಾರಿ/ನೌಕರರಿಗೆ ಅಥವಾ ಮೃತರ ನಾಮನಿರ್ದೇಶಿತರಿಗೆ ಪ್ರತಿಶತವಾರು ಮೊತ್ತವನ್ನು ಇತ್ಯರ್ಥಪಡಿಸಿರುವ ಮತ್ತು ASP ರವರಲ್ಲಿ ಹೂಡಿಕೆ ಮಾಡಿಲ್ಲದ ಪಕರಣಗಳಿಗೆ ಇತ್ಯರ್ಥಪಡಿಸಿರುವ ಪ್ರತಿಶತವಾರು ಮೊತ್ತ ಮತ್ತು ASF ಹೂಡಿಕೆ ಮಾಡಿರದ ಮೊತ್ತಕ್ಕೆ ವಂತಿಗೆಯ ವರ್ಗೀಕರಣದ ವಿವರಗಳನ್ನು (RA ರವರಿಂದ ಮಿಂಚಂಚೆ ಹಾಗೂ ಪತ್ರದ ಮುಖಾಂತರ ಪಡೆಯುವುದು.
6. ಜಮೆಯಾದ ಮೊತ್ತದ ವಿವರವನ್ನು CRA ರವರು ಎನ್.ಪಿ.ಎಸ್. ಘಟಕಕ್ಕೆ ಮಿಂಚಂಚೆ ಹಾಗೂ ಪತ್ರದ ಮುಖಾಂತರ ಮಾಹಿತಿ ನೀಡುತ್ತಾರೆ.
7. Proxy pool ಬ್ಯಾಂಕ್ ಖಾತೆಗೆ ಜಮೆಯಾಗಿರುವ ಮೊತ್ತವನ್ನು ಖಜಾನೆ-2 ಚಲನ್ ಮುಖಾಂತರ ಲೆಕ್ಕ ಶೀರ್ಷಿಕ 8342-00-117-0-18-701ರ ಠೇವಣಿ ಖಾತ 27572A190 ಗೆ ಜಮ ಮಾಡಲಾಗುತ್ತದೆ.
8. CTS-8 ಮುಖಾಂತರ ಪ್ರಾನ್ ಖಾತೆಯ ಮೊತ್ತವನ್ನು ಇತ್ಯರ್ಥಪಡಿಸಲು ನಗರ ಜಿಲ್ಲಾ ಖಜಾನ, ಬೆಂಗಳೂರು ಇವರಿಗೆ ಅಧಿಕೃತ ಜ್ಞಾಪನವನ್ನು ಕೆಳಕಂಡ ವಿವರಗಳೊಂದಿಗೆ ಕಳುಹಿಸಲಾಗುವುದು ಮತ್ತು ಜಿ.ಪಿ.ಎಫ್. ಖಾತೆಗೆ ವರ್ಗಾಯಿಸುವ ಚಲನ್‌ಗಳನ್ನು ಎನ್.ಪಿ.ಎಸ್. ಘಟಕದಲ್ಲಿ ನೇರವಾಗಿ ಬ್ಯಾಂಕ್‌ ಖಾತೆ ಮುಖಾಂತರ ವರ್ಗಾವಣೆ ಮಾಡಲು ಸೃಜಿಸುವುದು.

Share. Facebook Twitter LinkedIn WhatsApp Email

Related Posts

BREAKING: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ ಪ್ರಕರಣ: ಪರಿಹಾರದ ಮೊತ್ತ 25 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

07/06/2025 9:21 PM1 Min Read

BREAKING: ಬೆಂಗಳೂರು ಕಾಲ್ತುಳಿತ ದುರಂತ: ಮೃತರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ- ಸಿಎಂ ಸಿದ್ಧರಾಮಯ್ಯ ಘೋಷಣೆ

07/06/2025 9:13 PM1 Min Read

BREAKING: ಜಮೀನಿನ ವಿಚಾರಕ್ಕೆ ಅಣ್ಣನ ಮಗನನ್ನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಚಿಕ್ಕಪ್ಪ

07/06/2025 9:08 PM1 Min Read
Recent News

BREAKING : ವಿಶ್ವದ ನಂಬರ್ 1 ಆಟಗಾರ್ತಿ ‘ಸಬಲೆಂಕಾ’ ಮಣಿಸಿ ಚೊಚ್ಚಲ ‘ಫ್ರೆಂಚ್ ಓಪನ್ ಕಿರೀಟ’ ಗೆದ್ದ ‘ಕೊಕೊ ಗೌಫ್’

07/06/2025 9:58 PM

Good News : ಆಪರೇಷನ್ ಸಿಂಧೂರ್ ರೀಚಾರ್ಜ್ ಆಫರ್ ; ‘ಕ್ಯಾಶ್ ಬ್ಯಾಕ್’ ಜೊತೆಗೆ ‘ರಾಷ್ಟ್ರ ಸೇವೆ’ ಸೌಭಾಗ್ಯ

07/06/2025 9:34 PM

BREAKING: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ ಪ್ರಕರಣ: ಪರಿಹಾರದ ಮೊತ್ತ 25 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

07/06/2025 9:21 PM

ಪಹಲ್ಗಾಮ್ ಭಯೋತ್ಪಾದಕ ದಾಳಿ ಖಂಡಿಸಿದ ಜರ್ಮನಿ, ಉಗ್ರರ ವಿರುದ್ಧದ ಹೋರಾಟಕ್ಕೆ ಬೆಂಬಲ

07/06/2025 9:16 PM
State News
KARNATAKA

BREAKING: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ದುರಂತ ಪ್ರಕರಣ: ಪರಿಹಾರದ ಮೊತ್ತ 25 ಲಕ್ಷಕ್ಕೆ ಹೆಚ್ಚಿಸಿದ ರಾಜ್ಯ ಸರ್ಕಾರ

By kannadanewsnow0907/06/2025 9:21 PM KARNATAKA 1 Min Read

ಬೆಂಗಳೂರು: ಆರ್ ಸಿ ಬಿ ವಿಜಯೋತ್ಸವ ಕಾರ್ಯಕ್ರಮದ ವೇಳೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿಯಲ್ಲಿ ಕಾಲ್ತುಳಿತ ಉಂಟಾಗಿ 11 ಮಂದಿ ಅಭಿಮಾನಿಗಳು…

BREAKING: ಬೆಂಗಳೂರು ಕಾಲ್ತುಳಿತ ದುರಂತ: ಮೃತರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ- ಸಿಎಂ ಸಿದ್ಧರಾಮಯ್ಯ ಘೋಷಣೆ

07/06/2025 9:13 PM

BREAKING: ಜಮೀನಿನ ವಿಚಾರಕ್ಕೆ ಅಣ್ಣನ ಮಗನನ್ನೇ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈದ ಚಿಕ್ಕಪ್ಪ

07/06/2025 9:08 PM

ರಾಜ್ಯದಲ್ಲಿಂದು 57 ಜನರಿಗೆ ಕೊರೋನಾ ಪಾಸಿಟೀವ್: ಸೋಂಕಿಗೆ ಇಬ್ಬರು ಬಲಿ | Covid19 Update

07/06/2025 9:01 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.