Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ನಟ ಕಮಲ್ ಹಾಸನ ಗೆ ಬಿಗ್ ಶಾಕ್ : ಕನ್ನಡದ ಬಗ್ಗೆ ಅವಹೇಳನ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

05/07/2025 5:47 AM

BREAKING : ಗೋಹತ್ಯೆಯ ಬಗ್ಗೆ ಪ್ರಚೋದನಕಾರಿ ಹೇಳಿಕೆ ಆರೋಪ : ಶರಣ್ ಪಂಪ್‌ವೆಲ್ ವಿರುದ್ದ ‘FIR’ ದಾಖಲು

05/07/2025 5:42 AM

BIG NEWS : ಪ್ರಯತ್ನ ವಿಫಲವಾಗಬಹುದು, ಆದರೆ ನನ್ನ ಪ್ರಾರ್ಥನೆ ಅಲ್ಲ : ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

05/07/2025 5:38 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ‘BBMP ಕಚೇರಿ’ ಮೇಲೆ ಲೋಕಾಯುಕ್ತ ದಾಳಿ: ಇಲ್ಲಿದೆ ‘ಕರ್ಮಕಾಂಡ’ದ ಶಾಂಕಿಂಗ್ ರಿಪೋರ್ಟ್ | Karnataka Lokayukta
KARNATAKA

BIG NEWS: ‘BBMP ಕಚೇರಿ’ ಮೇಲೆ ಲೋಕಾಯುಕ್ತ ದಾಳಿ: ಇಲ್ಲಿದೆ ‘ಕರ್ಮಕಾಂಡ’ದ ಶಾಂಕಿಂಗ್ ರಿಪೋರ್ಟ್ | Karnataka Lokayukta

By kannadanewsnow0913/01/2025 8:08 PM

ಬೆಂಗಳೂರು: ನಗರದಲ್ಲಿನ ಬಿಬಿಎಂಪಿ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆಯಲ್ಲಿ ಬಹುದೊಡ್ಡ ಕರ್ಮಕಾಂಡವೇ ಬೆಳಕಿಗೆ ಬಂದಿದೆ. ಆ ಇಂಚಿಂಚೂ ವರದಿಯನ್ನು ಕರ್ನಾಟಕ ಲೋಕಾಯುಕ್ತದಿಂದ ಬಿಡುಗಡೆ ಮಾಡಲಾಗಿದೆ. ಆ ಸಂಪೂರ್ಣ ವರದಿ ಮುಂದಿದೆ ಓದಿ.

ಈ ಕುರಿತಂತೆ ಕರ್ನಾಟಕ ಲೋಕಾಯುಕ್ತದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿನ ವಿವಿಧ ಕಚೇರಿಗಳಲ್ಲಿ ಕೈಗೊಂಡ ಶೋಧನಾ ಕಾರ್ಯಾಚರಣೆಯನ್ನು ಮಾಡಲಾಗಿದೆ ಎಂದಿದೆ. ಈ ಕೆಳಕಂಡಂತಿದೆ ಬಿಬಿಎಂಪಿ ಕಚೇರಿಯಲ್ಲಿನ ಕರ್ಮಕಾಂಡದ ಮಾಹಿತಿ

ಸಾರ್ವಜನಿಕರಿಂದ ಸ್ವೀಕೃತವಾದ ಹಲವು ದೂರುಗಳ ಆಧಾರದ ಮೇಲೆ ಹಾಗೂ ಬಾತ್ಮೀದಾರರಿಂದ ಬಂದ ಮಾಹಿತಿಗಳ ಮೇರೆಗೆ ಬಿ.ಬಿ.ಎಂ.ಪಿ ಗೆ ಸೇರಿದ ಕಾರ್ಯಪಾಲಕ ಅಭಿಯಂತರರ ಕಛೇರಿ, ಸಹಾಯಕ ಕಾರ್ಯಪಾಲಕ ಅಭಿಯಂತರರ ಕಛೇರಿ, ಸಹಾಯಕ ಕಂದಾಯಾಧಿಕರಿಗಳ ಕಛೇರಿ ಮತ್ತು ಇತರೆ ಕಛೇರಿಗಳಲ್ಲಿ ಕೈಗೊಂಡ ಶೋಧನೆಯಿಂದ ಈ ಕೆಳಕಂಡ ನ್ಯನ್ಯತೆಗಳು ಕಂಡುಬಂದಿರುತ್ತವೆ.

  • ಅಧಿಕಾರಿಗಳು ಕಛೇರಿಗೆ ಕರ್ತವ್ಯಕ್ಕೆ ಹಾಜರಾದಾಗ ಪ್ರತಿ ನಿತ್ಯ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡಬೇಕಾಗಿದ್ದು, ಸಹಿಯನ್ನು ಮಾಡದೇ ಹಾಜರಾತಿ ಪುಸ್ತಕವನ್ನು ನಿರ್ವಹಣೆ ಮಾಡದೇ ಇರುವುದು ಕಂಡುಬಂದಿರುತ್ತದೆ.
  • ಕಛೇರಿಯಿಂದ ಕರ್ತವ್ಯದ ಮೇಲೆ ಹೋರಹೋದಲ್ಲಿ, ಇತರೆ ಸರ್ಕಾರಿ ಕೆಲಸದ ಮೇಲೆ ಬೇರೆ ಕಛೇರಿಗಳಿಗೆ ತೆರಳಿದ್ದಲ್ಲಿ ಅಂತಹ ಮಾಹಿತಿಯ ವಿವರಗಳನ್ನು ಚಲನ-ವಲನ ಪುಸ್ತಕದಲ್ಲಿ ನಮೂದು ಮಾಡಬೇಕಾಗಿದ್ದು, ಸರಿಯಾಗಿ ನಮೂದು ಮಾಡದೇ ಇರುವುದು ಮತ್ತು ಕೆಲವು ಕಛೇರಿಗಳಲ್ಲಿ ವಹಿಯನ್ನು ನಿರ್ವಹಣೆ ಮಾಡದೇ ಇರುವುದು ಕಂಡುಬಂದಿರುತ್ತದೆ.
  • ಹೊರಗುತ್ತಿಗೆ ಆಧಾದರ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ನೌಕರರ ಹಾಜರಾತಿ ಪುಸ್ತಕವನ್ನೂ ಸಹ ನಿರ್ವಹಣೆ ಮಾಡಬೇಕಾಗಿದ್ದು, ನಿರ್ವಹಣೆ ಮಾಡದೇ ಇರುವುದು ಕಂಡುಬಂದಿರುತ್ತದೆ.
  • ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಹಾಗೂ ಹೊರಗುತ್ತಿಗೆ ನೌಕರರು ಕರ್ತವ್ಯಕ್ಕೆ ಹಾಜರಾದ ಸಮಯದಲ್ಲಿ ತಮ್ಮ ಬಳಿ ಇರುವ ನಗದು ಬಗ್ಗೆ ನಗದು ಘೋಷಣಾ ಪುಸ್ತಕದಲ್ಲಿ ನಮೂದು ಮಾಡಬೇಕಾಗಿದ್ದು, ನಮೂದು ಮಾಡದೇ ಇರುವುದು ಹಾಗೂ ನಗದು ಘೋಷಣಾ ವಹಿಯನ್ನು ನಿರ್ವಹಣೆ ಮಾಡದೇ ಇರುವುದು ಕಂಡುಬಂದಿರುತ್ತದೆ.
  •  ಸಾರ್ವಜನಿಕರಿಂದ ಸ್ವೀಕೃತವಾಗುವ ದೂರು/ಅರ್ಜಿಗಳನ್ನು ಸಕಾಲ ಯೋಜನೆಯಡಿಯಲ್ಲಿ ನಿಗಧಿತ ಕಲಾವಧಿಯಲ್ಲಿ ವಿಲೇವಾರಿ ಮಾಡಬೇಕಾಗಿದ್ದು, ಸಕಾಲ ಅವಧಿ ಮುಗಿದರೂ ಸಹ ದೂರು/ಅರ್ಜಿಗಳನ್ನು ವಿಲೇ ಮಾಡದೇ ಬಾಕಿ ಉಳಿಸಿಕೊಂಡಿರುವುದು ಕಂಡುಬಂದಿರುತ್ತದೆ.
  • ಕಟ್ಟಡ ನಿರ್ಮಾಣದ ನಿಯಮಗಳ/ಅನುಮೋದಿತ ಯೋಜನೆ ಉಲ್ಲಂಘಿಸಿ ನಿರ್ಮಿಸಿರುವ ಕಟ್ಟಡಗಳ ನಿರ್ಮಾಣದ ವಿರುದ್ಧ ಕ್ರಮ ಕೈಗೊಂಡು ಡೆಮಾಲಿಶ್ ಮಾಡುವ ಬಗ್ಗೆಯಾಗಲೀ ಅಥವಾ ಸ್ಥಳ ಪರಿಶೀಲನೆ ಮಾಡುವ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಕಂಡುಬಂದಿರುತ್ತದೆ.
  • ಕಛೇರಿಯಲ್ಲಿ ಸಾರ್ವಜನಿಕರಿಗೆ ಲಭ್ಯವಿರುವ ಸೇವೆಗಳ ಬಗ್ಗೆಯಾಗಲೀ ಕಛೇರಿಯ ಆವಣದಲ್ಲಿ ಕಛೇರಿಗೆ ಸಂಬಂಧಿಸಿದ ಯಾವುದೇ ನಾಮ ಫಲಕವನ್ನು ಅಳವಡಿಸದೇ ಇರುವುದು ಕಂಡುಬಂದಿರುತ್ತದೆ.
  • ಕರ್ನಾಟಕ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳನ್ನು ಸಂಪರ್ಕಿಸಬೇಕಾದ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳ ಮಾಹಿತಿ ಇರುವ ನಾಮ ಫಕಲಕವನ್ನು ಅಳವಡಿಸದೇ ಇರುವುದು ಕಂಡುಬಂದಿರುತ್ತದೆ.
  • ಕಛೇರಿಗಳಲ್ಲಿ ಹಾಜರಿದ್ದ ಅಧಿಕಾರಿ/ಸಿಬ್ಬಂದಿಯವರ ಬಳಿ ನಗದು ಘೋಷಣಾ ಪುಸ್ತಕದಲ್ಲಿ ನಮೂದು ಮಾಡಿರುವುದಕ್ಕಿಂತ ಹೆಚ್ಚುವರಿ ಹಣ ದೊರೆತಿರುವುದು ಕಂಡುಬಂದಿರುತ್ತದೆ.
  • ಸಾರ್ವಜನಿಕರಿಂದ ಸ್ವೀಕೃತವಾಗುವ ದೂರುಗಳಿಗೆ ಸಂಬಂಧಿಸಿದಂತೆ ವಹಿಯನ್ನು ನಿರ್ವಹಣೆ ಮಾಡಬೇಕಾಗಿದ್ದು, ನಿರ್ವಹಣೆ ಮಾಡದೇ ಇರುವುದು ಕಂಡುಬಂದಿರುತ್ತದೆ.
  • ಖಾಸಗೀ ವ್ಯಕ್ತಿಗಳನ್ನು ಅನಧಿಕೃತವಾಗಿ ಕಛೇರಿ ಕರ್ತವ್ಯಕ್ಕೆ ನೇಮಿಸಿಕೊಂಡು, ಅಧಿಕಾರಿಗಳೇ ಮಾಹೆಯಾನ ಸಂಭಾವನೆಯನ್ನು ನೀಡುತ್ತಿರುವುದು ಕಂಡುಬಂದಿರುತ್ತದೆ.
  • ಕೆಲವು ಕಛೇರಿಗಳಲ್ಲಿ ಹೊರಗುತ್ತಿಗೆ ನೌಕರರನ್ನು ಹೊರತುಪಡಿಸಿ ಕಛೇರಿಯ ಖಾಯಂ ಅಧಿಕಾರಿ/ಸಿಬ್ಬಂದಿಗಳು ಹಾಜರಾಗದೇ ಇರುವುದು ಕಂಡುಬಂದಿರುತ್ತದೆ.
  • ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ/ಸಿಬ್ಬಂದಿಗಳಿಗೆ ಕರ್ತವ್ಯ ಹಂಚಿಕೆ ಮಾಡದೇ ಇರುವುದು ಕಂಡುಬಂದಿರುತ್ತದೆ.
  • ಇ-ಖಾತಾ ಅರ್ಜಿಗಳಿಗೆ ಸಂಬಂಧಿಸಿದಂತೆ ಸ್ವೀಕೃತವಾಗಿರುವ ಅರ್ಜಿಗಳಲ್ಲಿ ತಿರಸ್ಕೃತ ಮಾಡಿದ ಅರ್ಜಿಗಳಿಗೆ ಅರ್ಜಿದಾರರಿಗೆ ಯಾವುದೇ ಮಾಹಿತಿಯನ್ನು ನೀಡದೇ ಇರುವುದು ಕಂಡುಬಂದಿರುತ್ತದೆ.
  • ಟೆಂಡರ್ ಅಧಿಸೂನೆಯನ್ನು ಹೊರಡಿಸಿ, ಕಾಮಗಾರಿಗಳನ್ನು ಪೂರ್ಣಗೊಂಡ ಬಗ್ಗೆ ಮತ್ತು ಕಾಮಗಾರಿಗಳ ಪ್ರಕ್ರಿಯೆಯ ಕುರಿತು ಪರಿಶೀಲನೆ ಮಾಡದೇ ಇರುವುದು ಕಂಡುಬಂದಿರುತ್ತದೆ.

ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ ಗ್ಲೇಸಿಯರ್‌ನಲ್ಲಿ ಜಿಯೋ 5ಜಿ ಸೇವೆ ಆರಂಭ

ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ಮುಚ್ಚಿಹಾಕುವ ಯತ್ನ: ಛಲವಾದಿ ನಾರಾಯಣಸ್ವಾಮಿ ಗಂಭೀರ ಆರೋಪ

 

Share. Facebook Twitter LinkedIn WhatsApp Email

Related Posts

BREAKING : ನಟ ಕಮಲ್ ಹಾಸನ ಗೆ ಬಿಗ್ ಶಾಕ್ : ಕನ್ನಡದ ಬಗ್ಗೆ ಅವಹೇಳನ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

05/07/2025 5:47 AM1 Min Read

BREAKING : ಗೋಹತ್ಯೆಯ ಬಗ್ಗೆ ಪ್ರಚೋದನಕಾರಿ ಹೇಳಿಕೆ ಆರೋಪ : ಶರಣ್ ಪಂಪ್‌ವೆಲ್ ವಿರುದ್ದ ‘FIR’ ದಾಖಲು

05/07/2025 5:42 AM1 Min Read

BIG NEWS : ಪ್ರಯತ್ನ ವಿಫಲವಾಗಬಹುದು, ಆದರೆ ನನ್ನ ಪ್ರಾರ್ಥನೆ ಅಲ್ಲ : ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

05/07/2025 5:38 AM1 Min Read
Recent News

BREAKING : ನಟ ಕಮಲ್ ಹಾಸನ ಗೆ ಬಿಗ್ ಶಾಕ್ : ಕನ್ನಡದ ಬಗ್ಗೆ ಅವಹೇಳನ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

05/07/2025 5:47 AM

BREAKING : ಗೋಹತ್ಯೆಯ ಬಗ್ಗೆ ಪ್ರಚೋದನಕಾರಿ ಹೇಳಿಕೆ ಆರೋಪ : ಶರಣ್ ಪಂಪ್‌ವೆಲ್ ವಿರುದ್ದ ‘FIR’ ದಾಖಲು

05/07/2025 5:42 AM

BIG NEWS : ಪ್ರಯತ್ನ ವಿಫಲವಾಗಬಹುದು, ಆದರೆ ನನ್ನ ಪ್ರಾರ್ಥನೆ ಅಲ್ಲ : ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

05/07/2025 5:38 AM

BREAKING : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ವಿದೇಶದಿಂದ ಬಂದಿಳಿಯುತ್ತಿದ್ದಂತೆಯೇ NIA ಬಲೆಗೆ ಬಿದ್ದ ಹಂತಕ!

05/07/2025 5:22 AM
State News
KARNATAKA

BREAKING : ನಟ ಕಮಲ್ ಹಾಸನ ಗೆ ಬಿಗ್ ಶಾಕ್ : ಕನ್ನಡದ ಬಗ್ಗೆ ಅವಹೇಳನ ಹೇಳಿಕೆ ನೀಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

By kannadanewsnow0505/07/2025 5:47 AM KARNATAKA 1 Min Read

ಬೆಂಗಳೂರು : ಕನ್ನಡ ತಮಿಳಿನಿಂದ ಹುಟ್ಟಿದ್ದು ಎಂದು ತಮಿಳು ಖ್ಯಾತ ನಟ ಕಮಲ್ ಹಾಸನ ಈ ಹೇಳಿಕೆ ನೀಡಿ ಭಾರಿ…

BREAKING : ಗೋಹತ್ಯೆಯ ಬಗ್ಗೆ ಪ್ರಚೋದನಕಾರಿ ಹೇಳಿಕೆ ಆರೋಪ : ಶರಣ್ ಪಂಪ್‌ವೆಲ್ ವಿರುದ್ದ ‘FIR’ ದಾಖಲು

05/07/2025 5:42 AM

BIG NEWS : ಪ್ರಯತ್ನ ವಿಫಲವಾಗಬಹುದು, ಆದರೆ ನನ್ನ ಪ್ರಾರ್ಥನೆ ಅಲ್ಲ : ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ

05/07/2025 5:38 AM

BREAKING : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ವಿದೇಶದಿಂದ ಬಂದಿಳಿಯುತ್ತಿದ್ದಂತೆಯೇ NIA ಬಲೆಗೆ ಬಿದ್ದ ಹಂತಕ!

05/07/2025 5:22 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.