Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿದೇಶಗಳಲ್ಲಿ `ITI’ ಪದವಿಗೆ ಹೆಚ್ಚಿನ ಗೌರವವಿಲ್ಲ : ಅನಿವಾಸಿ ಭಾರತೀಯರ ಪೋಸ್ಟ್ ವೈರಲ್.!

19/05/2025 11:57 AM

SHOCKING : ಚಲಿಸುತ್ತಿದ್ದ ಬೈಕ್ ನಲ್ಲೇ ಪ್ರೇಮಿಗಳ ರೋಮ್ಯಾನ್ಸ್ : ವಿಡಿಯೋ ವೈರಲ್ | WATCH VIDEO

19/05/2025 11:47 AM

ವಿದ್ಯಾರ್ಥಿಗಳೇ ಗಮನಿಸಿ : `ದ್ವಿತೀಯ PUC’ ನಂತರ ಭಾರತದಲ್ಲಿರುವ ಉನ್ನತ ಕೋರ್ಸ್ ಗಳಿವು.!

19/05/2025 11:43 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘ’ವನ್ನೇ ಹೊರಗಿಟ್ಟು ‘RDPR ಕ್ರೀಡಾ ಹಬ್ಬ’ ಆಯೋಜನೆ
KARNATAKA

‘ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘ’ವನ್ನೇ ಹೊರಗಿಟ್ಟು ‘RDPR ಕ್ರೀಡಾ ಹಬ್ಬ’ ಆಯೋಜನೆ

By kannadanewsnow0921/12/2024 8:39 AM

ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ನೌಕರರು ಕೂಡ ಸರ್ಕಾರಿ ನೌಕರರರೇ. ಸರ್ಕಾರಿ ನೌಕರರ ಸಂಘದ ಅಡಿಯಲ್ಲೇ ಕಾರ್ಯ ನಿರ್ವಹಿಸುವವರು. ಇಂದು ಆರ್ ಡಿ ಪಿಆರ್ ಇಲಾಖೆಯ ಕ್ರೀಡಾ ಹಬ್ಬ ನಡೆಯುತ್ತಿದೆ. ಆದರೇ ಈ ಕ್ರೀಡಾ ಹಬ್ಬಕ್ಕೆ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನೇ ಆಹ್ವಾನಿಸದೇ ಇರುವುದಾಗಿ ತಿಳಿದು ಬಂದಿದೆ.

ಇಂದು ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖಾ ನೌಕರರ ಸಂಘದ ಸಾಗರ ಶಾಖೆಯ ವತಿಯಿಂದ ಆರ್ ಡಿ ಪಿ ಆರ್ ಕ್ರೀಡಾ ಹಬ್ಬ2024-25 ಆಯೋಜಿಸಲಾಗಿದೆ. ಸಾಗರದ ನೆಹರೂ ಕ್ರೀಡಾಂಗಣದಲ್ಲಿ ಈ ಕ್ರೀಡಾಹಬ್ಬ ನಡೆಯಲಿದೆ.

ಈ ಕ್ರೀಡಾಹಬ್ಬಕ್ಕೆ ಸಾಗರ ತಾಲ್ಲೂಕಿನ ಪ್ರಥಮ ಪ್ರಜೆ ಹಾಗೂ ಶಾಸಕರಾದಂತ ಬೇಳೂರು ಗೋಪಾಲಕೃಷ್ಣ, ಶಿವಮೊಗ್ಗ ಜಿಲ್ಲಾ ಪಂಚಾಯ್ತಿ ಸಿಇಓ ಹೇಮಂತ್ ಎನ್, ಸಾಗರ ಉಪ ವಿಭಾಗಾಧಿಕಾರಿ ಯತೀಶ್.ಆರ್ ಸೇರಿದಂತೆ ಇತರೆ ಗಣ್ಯರನ್ನು ಸಾಗರ ತಾಲ್ಲೂಕು ಪಿಡಿಓ ನೌಕರರ ಸಂಘದ ಅಧ್ಯಕ್ಷರಾದಂತ ಪ್ರವೀಣ್ ಕುಮಾರ್.ಆರ್ ಆಹ್ವಾನಿಸಿದ್ದಾರೆ.

ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘವನ್ನೇ ಹೊರಗಿಟ್ಟು ಕ್ರೀಡಾಹಬ್ಬ ಆಯೋಜನೆ

ಕರ್ನಾಟಕ ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘವು ಸರ್ಕಾರಿ ನೌಕರರ ಸಂಘದ ಅಡಿಯಲ್ಲಿನ ಸಂಘವಾಗಿದೆ. ಇದರ ಅಧ್ಯಕ್ಷರಾದಂತ ಪ್ರವೀಣ್ ಕುಮಾರ್.ಆರ್ ಅವರು ಶಿಷ್ಟಾಚಾರದ ಪ್ರಕಾರವಾಗಿ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸಬೇಕಿತ್ತು. ಅದರಂತೆ ಆಹ್ವಾನ ಪತ್ರಿಕೆಯಲ್ಲೂ ಪದಾಧಿಕಾರಿಗಳ ಹೆಸರನ್ನು ನಮೂದಿಸಬೇಕಿತ್ತು. ಆದರೇ ಇದ್ಯಾವುದನ್ನೂ ಮಾಡದೇ, ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನೇ ಕಡೆಗಣಿಸಿರುವಂತ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಕನ್ನಡ ನ್ಯೂಸ್ ನೌ ಜೊತೆಗೆ ಮಾತನಾಡಿದಂತ ಅವರು, ಇದು ಇಲಾಖೆಯ ಕಾರ್ಯಕ್ರಮವಾಗಿದೆ. ಹೀಗಾಗಿ ಆಹ್ವಾನಿಸಿಲ್ಲ. ಅಲ್ಲದೇ ಕೆಲ ವಿಚಾರಗಳ ಕಾರಣದಿಂದ ಆಹ್ವಾನಿಸಿಲ್ಲ. ಸಂಘದ ಪದಾಧಿಕಾರಿಗಳ ಜೊತೆಗೆ ಮಾತನಾಡುವುದಾಗಿ ತಿಳಿಸಿದ್ದಾರೆ.

ಇನ್ನೂ ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮೋಹನ್ ಕುಮಾರ್ ಅವರನ್ನು ಇದೇ ವಿಚಾರಕ್ಕಾಗಿ ಕನ್ನಡ ನ್ಯೂಸ್ ನೌ ಸಂಪಾದಕ ವಸಂತ ಬಿ ಈಶ್ವರಗೆರೆ ಸಂಪರ್ಕಿಸಿ, ಈ ವಿಚಾರ ಗಮನಕ್ಕೆ ತರಲಾಯಿತು. ಅವರು ಹೀಗೆ ಮಾಡುವುದು ಸರಿಯಲ್ಲ. ಸರ್ಕಾರಿ ನೌಕರರ ಕಾರ್ಯಕ್ರಮವಾಗಿರುವ ಕಾರಣ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನು ಆಹ್ವಾನಿಸಬೇಕಿತ್ತು. ಯಾಕೆ ಆಹ್ವಾನಿಸಿಲ್ಲ ಅಂತ ಶಿವಮೊಗ್ಗ ಜಿಲ್ಲಾ ಪಿಡಿಓ ನೌಕರರ ಸಂಘದ ಅಧ್ಯಕ್ಷರಲ್ಲಿ ಮಾತನಾಡುವುದಾಗಿ ತಿಳಿಸಿದರು.

ಆರ್ ಡಿ ಪಿ ಆರ್ ಕ್ರೀಡಾಹಬ್ಬ ಸರ್ಕಾರಿ ನೌಕರರ ಕ್ರೀಡಾಕೂಟವಾಗಿದೆ. ಇಲ್ಲಿ ಭಾಗಿಯಾಗುವವರು ಸರ್ಕಾರಿ ನೌಕರರು. ಸರ್ಕಾರಿ ನೌಕರರ ಬೇಕು, ಬೇಡಗಳಿಗೆ ಧ್ವನಿಯಾಗಿ, ಅವರ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರೋದು ಸರ್ಕಾರಿ ನೌಕರರ ಸಂಘವಾಗಿದೆ. ಎಲ್ಲಾ ಇಲಾಖೆಯ ಮಾತೃ ಸಂಘ ಸರ್ಕಾರಿ ನೌಕರರ ಸಂಘವಾಗಿದೆ. ಇಂತಹ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳನ್ನೇ ಹೊರಗಿಟ್ಟು ಕ್ರೀಡಾಹಬ್ಬ ಆಚರಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಇದರ ಹಿಂದಿನ ನಿಜವಾದ ಕಾರಣ ಏನೆಂಬುದು ಆಯೋಜಕರೇ ಸ್ಪಷ್ಟ ಪಡಿಸಬೇಕಿದೆ.

ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು

BREAKING : ‘ಗ್ರಾಮ ಆಡಳಿತ ಅಧಿಕಾರಿ’ ಹುದ್ದೆಗಳ ತಾತ್ಕಾಲಿಕ ಪರಿಶೀಲನಾ ಪಟ್ಟಿ ಪ್ರಕಟ, ಅಭ್ಯರ್ಥಿಗಳಿಗೆ ಇಲ್ಲಿದೆ ಮುಖ್ಯ ಮಾಹಿತಿ

BIG NEWS : ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ‘ಶುಲ್ಕ ಮರುಪಾವತಿ’ ಸೌಲಭ್ಯಕ್ಕೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ.!

Share. Facebook Twitter LinkedIn WhatsApp Email

Related Posts

ವಿದ್ಯಾರ್ಥಿಗಳೇ ಗಮನಿಸಿ : `ದ್ವಿತೀಯ PUC’ ನಂತರ ಭಾರತದಲ್ಲಿರುವ ಉನ್ನತ ಕೋರ್ಸ್ ಗಳಿವು.!

19/05/2025 11:43 AM1 Min Read

BREAKING : ಬೆಂಗಳೂರಿನಲ್ಲಿ ಮಹಾಮಳೆಗೆ ಅಲ್ಲೋಲ ಕಲ್ಲೋಲ : ಮರಗಳು ಉರುಳಿಬಿದ್ದು ವಾಹನ ಸವಾರರ ಪರದಾಟ | WATCH VIDEO

19/05/2025 11:31 AM2 Mins Read

SHOCKING : ರಾಜ್ಯದಲ್ಲಿ ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ : ಬೆಂಗಳೂರಿನಲ್ಲಿ ಓಲಾ ಟೆಕ್ಕಿ ಆತ್ಮಹತ್ಯೆ.!

19/05/2025 10:42 AM1 Min Read
Recent News

ವಿದೇಶಗಳಲ್ಲಿ `ITI’ ಪದವಿಗೆ ಹೆಚ್ಚಿನ ಗೌರವವಿಲ್ಲ : ಅನಿವಾಸಿ ಭಾರತೀಯರ ಪೋಸ್ಟ್ ವೈರಲ್.!

19/05/2025 11:57 AM

SHOCKING : ಚಲಿಸುತ್ತಿದ್ದ ಬೈಕ್ ನಲ್ಲೇ ಪ್ರೇಮಿಗಳ ರೋಮ್ಯಾನ್ಸ್ : ವಿಡಿಯೋ ವೈರಲ್ | WATCH VIDEO

19/05/2025 11:47 AM

ವಿದ್ಯಾರ್ಥಿಗಳೇ ಗಮನಿಸಿ : `ದ್ವಿತೀಯ PUC’ ನಂತರ ಭಾರತದಲ್ಲಿರುವ ಉನ್ನತ ಕೋರ್ಸ್ ಗಳಿವು.!

19/05/2025 11:43 AM

BREAKING : ಬೆಂಗಳೂರಿನಲ್ಲಿ ಮಹಾಮಳೆಗೆ ಅಲ್ಲೋಲ ಕಲ್ಲೋಲ : ಮರಗಳು ಉರುಳಿಬಿದ್ದು ವಾಹನ ಸವಾರರ ಪರದಾಟ | WATCH VIDEO

19/05/2025 11:31 AM
State News
KARNATAKA

ವಿದ್ಯಾರ್ಥಿಗಳೇ ಗಮನಿಸಿ : `ದ್ವಿತೀಯ PUC’ ನಂತರ ಭಾರತದಲ್ಲಿರುವ ಉನ್ನತ ಕೋರ್ಸ್ ಗಳಿವು.!

By kannadanewsnow5719/05/2025 11:43 AM KARNATAKA 1 Min Read

ಸಿಬಿಎಸ್‌ಇ ಇತ್ತೀಚೆಗೆ ಮಧ್ಯಂತರ ಫಲಿತಾಂಶಗಳನ್ನು ಪ್ರಕಟಿಸಿದೆ. ಹಲವು ರಾಜ್ಯ ಮಂಡಳಿಗಳು ಸಹ ಫಲಿತಾಂಶಗಳನ್ನು ಘೋಷಿಸಿವೆ. ಈ ಫಲಿತಾಂಶಗಳ ನಂತರ, ಪೋಷಕರು…

BREAKING : ಬೆಂಗಳೂರಿನಲ್ಲಿ ಮಹಾಮಳೆಗೆ ಅಲ್ಲೋಲ ಕಲ್ಲೋಲ : ಮರಗಳು ಉರುಳಿಬಿದ್ದು ವಾಹನ ಸವಾರರ ಪರದಾಟ | WATCH VIDEO

19/05/2025 11:31 AM

SHOCKING : ರಾಜ್ಯದಲ್ಲಿ ಕೆಲಸದ ಒತ್ತಡಕ್ಕೆ ಮತ್ತೊಂದು ಬಲಿ : ಬೆಂಗಳೂರಿನಲ್ಲಿ ಓಲಾ ಟೆಕ್ಕಿ ಆತ್ಮಹತ್ಯೆ.!

19/05/2025 10:42 AM

BREAKING : ಬೆಂಗಳೂರಿನಲ್ಲಿ ಮಳೆಯ ಆರ್ಭಟಕ್ಕೆ ಜನರ ಪರದಾಟ : ಕಂಠೀರವ ಸ್ಟೇಡಿಯಂ ಸೇರಿ ಹಲವೆಡೆ ರಸ್ತೆಗಳು ಜಲಾವೃತ | WATCH VIDEO

19/05/2025 10:14 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.