Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಶಾಮನೂರು ಶಿವಶಂಕರಪ್ಪ ನಿಧನ ಹಿನ್ನಲೆ: ನಾಳೆ ದಾವಣಗೆರೆ ವಿವಿಯ ಎಲ್ಲಾ ಕಾಲೇಜುಗಳಿಗೆ ರಜೆ ಘೋಷಣೆ

14/12/2025 8:48 PM

ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸಚಿವ ಎಂ.ಬಿ.ಪಾಟೀಲ ಸಂತಾಪ

14/12/2025 8:41 PM

BREAKING: ಶಾಮನೂರು ಶಿವಶಂಕರಪ್ಪ ನಿಧನ ಹಿನ್ನಲೆ: ನಾಳೆ ದಾವಣಗೆರೆ ವಿವಿ ಪರೀಕ್ಷೆ ಮುಂದೂಡಿಕೆ, ರಜೆ ಘೋಷಣೆ

14/12/2025 8:37 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಐಪಿಎಲ್​ ಹರಾಜಿನಲ್ಲಿ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ ವಿಶ್ವಾಸದಲ್ಲಿ ಮುಂಬೈ ಇಂಡಿಯನ್ಸ್
SPORTS

ಐಪಿಎಲ್​ ಹರಾಜಿನಲ್ಲಿ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ ವಿಶ್ವಾಸದಲ್ಲಿ ಮುಂಬೈ ಇಂಡಿಯನ್ಸ್

By kannadanewsnow0926/11/2024 3:43 PM

ಮುಂಬೈ : ಸೌದಿ ಅರೇಬಿಯಾದ ಜಿದ್ದಾದಲ್ಲಿ ಭಾನುವಾರ ಮತ್ತು ಸೋಮವಾರ ನಡೆದ ಐಪಿಎಲ್​ 18ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಬಲಿಷ್ಠ ತಂಡವನ್ನು ಆಯ್ಕೆ ಮಾಡಿದ ವಿಶ್ವಾಸ ಐದು ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್​ ತಂಡದ್ದಾಗಿದೆ. ಮೊದಲೇ ಐವರು ಪ್ರಮುಖ ಆಟಗಾರರನ್ನು ರಿಟೇನ್​ ಮಾಡಿಕೊಂಡಿದ್ದ ಮುಂಬೈ ಇಂಡಿಯನ್ಸ್​ ತಂಡ ಹರಾಜಿನಲ್ಲೂ ತನಗೆ ಬೇಕಾದ ಎಲ್ಲ ಆಟಗಾರರನ್ನು ಆರಿಸಿದ ಸಂತಸವನ್ನು ಹೊಂದಿದೆ.

‘ಹರಾಜಿನಲ್ಲಿ ನಾವು ಆಯ್ದುಕೊಂಡ ಆಟಗಾರರ ಬಗ್ಗೆ ತುಂಬಾ ಸಂತೋಷವಿದೆ. ಏಕೆಂದರೆ ನಾವು ಈಗ ನಮ್ಮ 12 ಬಲಿಷ್ಠ ಆಟಗಾರರನ್ನು ಲಾಕ್ ಮಾಡಿಕೊಂಡಿದ್ದೇವೆ. ಟಿ20 ಸ್ವರೂಪಕ್ಕೆ ಹೊಂದಿಕೊಳ್ಳುವಂಥ ಆಟಗಾರರನ್ನು ನಾವು ಖರೀದಿಸಲು ಬಯಸಿದ್ದೆವು. ನಾವು ಹರಾಜಿನಲ್ಲಿ ಪಡೆದುಕೊಂಡಿರುವ ಎಲ್ಲಾ ಆಟಗಾರರ ಬಗ್ಗೆ ಖುಷಿ ಇದೆ. ಮುಂಬೈ ಇಂಡಿಯನ್ಸ್‌ನ ಹಲವು ಮಾಜಿ ಆಟಗಾರರನ್ನು ಕಳೆದುಕೊಂಡಿದ್ದಕ್ಕೆ ಸಹಜವಾಗಿಯೇ ನಿರಾಸೆಯಾಗಿದೆ. ಕಳೆದ ಮೂರು ವರ್ಷಗಳಲ್ಲಿ ನಾವು ನಿಜವಾಗಿಯೂ ಗೆಲುವಿನ ಹಾದಿಗೆ ಮರಳಬೇಕಾದ ಸಮತೋಲನ ಏನು ಎಂಬುದರ ಕುರಿತು ಸಾಕಷ್ಟು ಯೋಚಿಸಿದ್ದೇವೆ ಮತ್ತ ಆಟಗಾರರನ್ನು ಖರೀದಿಸುವ ಭಾವನಾತ್ಮಕ ಅಂಶ ಮತ್ತು ಟಿ20 ಆಟದಲ್ಲಿ ಅಗತ್ಯವಿರುವ ಕೌಶಲ್ಯಗಳನ್ನು ಸಮತೋಲನಗೊಳಿಸಬೇಕೆಂದು ಅರಿತಿದ್ದೇವೆ. ನಮಗೆ ಸಾಕಷ್ಟು ಯಶಸ್ಸನ್ನು ನೀಡಿದ ಹಲವಾರು ಮಾಜಿ ಎಂಐ ಆಟಗಾರರನ್ನು ಕಳೆದುಕೊಂಡ ಬಗ್ಗೆ ತುಂಬಾ ಬೇಸರವಾಗಿದೆ. ಅವರ ಹೊಸ ಫ್ರಾಂಚೈಸಿಗಳಲ್ಲಿ ಎಲ್ಲರಿಗೂ ಶುಭವಾಗಲಿ ಮತ್ತು ಎಂಐ ತಂಡದಲ್ಲಿ ಅವರು ಸಾಧಿಸಿದ ಸಾಧನೆಗಳ ಬಗ್ಗೆ ಸಂತೋಷವಿದೆ’ ಎಂದು ಮುಂಬೈ ಇಂಡಿಯನ್ಸ್ ಮಾಲೀಕ ಶ್ರೀ ಆಕಾಶ್ ಅಂಬಾನಿ ಅವರು ಐಪಿಎಲ್​ ಹರಾಜು ಪ್ರಕ್ರಿಯೆಯ ಬಳಿಕ ಹೇಳಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ ಹರಾಜಿಗೆ ಮುನ್ನ ನಾಯಕ ಹಾರ್ದಿಕ್​ ಪಾಂಡ್ಯ, ಮಾಜಿ ನಾಯಕ ರೋಹಿತ್​ ಶರ್ಮ, ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್​ ಯಾದವ್​, ವೇಗಿ ಜಸ್​ಪ್ರೀತ್​ ಬುಮ್ರಾ ಮತ್ತು ತಿಲಕ್​ ವರ್ಮ ಅವರನ್ನು ರಿಟೇನ್​ ಮಾಡಿಕೊಂಡಿತ್ತು.

ಬೌಲ್ಟ್-ಬುಮ್ರಾ ಜೋಡಿಯಾಗುವುದನ್ನು ಬಯಸಿದ್ದೆವು: ‘ಟ್ರೆಂಟ್ ಬೌಲ್ಟ್ ಮತ್ತು ಜಸ್​ಪ್ರೀತ್​ ಬುಮ್ರಾ ಜೊತೆಯಾಗುವುದನ್ನು ನಾವು ನಿಜವಾಗಿಯೂ ಬಯಸಿದ್ದೆವು. ಎಡಗೈ ವೇಗಿ ಬೌಲ್ಟ್​ ಅವರು ಬುಮ್ರಾಗೆ ಉತ್ತಮ ಜತೆಗಾರರಾಗುವರು. ಈ ಜೋಡಿ ತಂಡಕ್ಕೆ ಸಾಕಷ್ಟು ಬಲ ತುಂಬಲಿದೆ. ಓರ್ವ ವ್ಯಕ್ತಿ ಮತ್ತು ಕೌಶಲದಿಂದಾಗಿ ಬೌಲ್ಟ್​ ಅವರನ್ನು ಮರಳಿ ಪಡೆದುಕೊಂಡಿರುವುದು ತುಂಬ ಸಂತೋಷ ತಂದಿದೆ’ ಎಂದು ಆಕಾಶ್​ ಅಂಬಾನಿ ಅವರು ತಿಳಿಸಿದ್ದಾರೆ.

ಘಜನ್​​ಫರ್​, ರಿಕೆಲ್​ಟನ್​ ಬಲ ತುಂಬವರು: ಅಫ್ಘಾನಿಸ್ತಾನದ ಯುವ ಸ್ಪಿನ್ನರ್​ ಅಲ್ಲಾ ಘಜನ್​ಫರ್​ ಆಯ್ಕೆಯ ಬಗ್ಗೆಯೂ ಆಕಾಶ್​ ಅಂಬಾನಿ ಸಂತಸ ವ್ಯಕ್ತಪಡಿಸಿದ್ದಾರೆ. ‘ವಿದೇಶಿ ಸ್ಪಿನ್ನರ್‌ ಆಯ್ಕೆಯ ಬಗ್ಗೆ ನಾವು ಈ ಬಾರಿ ಒಲವು ತೋರಿದೆವು. ಅಲ್ಲಾ ಘಜನ್​ಫರ್​ ನಿಜವಾಗಿಯೂ ನಮ್ಮ ತಂಡಕ್ಕೆ ಉತ್ತಮ ಪ್ಯಾಕೇಜ್​ ಆಟಗಾರ ಆಗಲಿದ್ದಾರೆ ಎಂಬ ವಿಶ್ವಾಸವಿದೆ’ ಎಂದು ಅವರು ಹೇಳಿದ್ದಾರೆ.
‘ನಾವು ಒಂದೆರಡು ವರ್ಷಗಳ ಹಿಂದೆ ಯುಕೆಯಲ್ಲಿ ನಮ್ಮ ಎಂಐ ಗ್ಲೋಬಲ್ ಆಟಗಾರರಿಗಾಗಿ ಬೇಸಿಗೆ ಶಿಬಿರವನ್ನು ಆಯೋಜಿಸಿದ್ದೆವು ಮತ್ತು ರಿಯಾನ್ ರಿಕೆಲ್​ಟನ್ ಅಲ್ಲಿ ಸಾಕಷ್ಟು ರನ್ ಗಳಿಸಿದ್ದರು. ಎಸ್​ಎ20ನಲ್ಲೂ ಅವರು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಐಪಿಎಲ್ ಮೂಲಕವೂ ಆ ನಿರಂತರತೆಯ ಅಂಶವನ್ನು ಹೊಂದಲು ನಾವು ಬಯಸಿದ್ದೇವೆ’ ಎಂದು ಆಕಾಶ್​ ಅಂಬಾನಿ ಹೇಳಿದ್ದಾರೆ.

ರಾಬಿನ್ ಮಿಂಜ್‌ ವ್ಯತ್ಯಾಸ ತರಬಲ್ಲರು: ‘ಈ ಬಾರಿ ಹರಾಜಿನಲ್ಲಿ ನಾವು ಆರಿಸಿರುವ ಮತ್ತೋರ್ವ ಹೊಸ ಆಟಗಾರ ರಾಬಿನ್ ಮಿಂಜ್ ಕೂಡ ಎರಡು ವರ್ಷಗಳ ಹಿಂದೆ ನಮ್ಮ ಪ್ರತಿಭಾಶೋಧ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಳೆದ ವರ್ಷ ಅವರು ನಮ್ಮ ತಂಡಕ್ಕೆ ಸಿಗದ ಬಗ್ಗೆ ಬೇಸರಗೊಂಡಿದ್ದೆವು. ಏಕೆಂದರೆ ಅವರು ನಮ್ಮ ಪ್ರಮುಖ ಗುರಿಗಳಲ್ಲಿ ಒಬ್ಬರಾಗಿದ್ದರು. ಆದ್ದರಿಂದ ಈ ಬಾರಿ ಅವರನ್ನು ಹೊಂದಲು ನಿಜವಾಗಿಯೂ ಸಂತೋಷವಾಗುತ್ತಿದೆ. ನಮ್ಮ ತಂಡದಲ್ಲಿ ಅವರು ವ್ಯತ್ಯಾಸದ ಬಿಂದುವಾಗಲಿದ್ದಾರೆ ಮತ್ತು ಅವರ ಸೇವೆ ಪಡೆದುಕೊಂಡಿರುವುದಕ್ಕೆ ಖುಷಿಯಾಗುತ್ತಿದೆ ಎಂದು ಆಕಾಶ್​ ಅಂಬಾನಿ ಅವರು ವಿವರಿಸಿದ್ದಾರೆ.

ಐಪಿಎಲ್​ 18ನೇ ಆವೃತ್ತಿ 2025ರ ಮಾರ್ಚ್​ 14ರಿಂದ ಮೇ 25ರವರೆಗೆ ನಡೆಯಲಿದ್ದು, ಮುಂಬೈ ಇಂಡಿಯನ್ಸ್​ ಈ ಬಾರಿ ಬಹುತೇಕ ಹೊಸ ತಂಡವಾಗಿ ಕಣಕ್ಕಿಳಿಯಲಿದೆ.

ಐಪಿಎಲ್​-2025 ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ಖರೀದಿಸಿದ ಆಟಗಾರರು:
1. ಟ್ರೆಂಟ್ ಬೌಲ್ಟ್ – 12.5 ಕೋಟಿ ರೂ
2. ನಮನ್ ಧೀರ್ – 5.25 ಕೋಟಿ ರೂ
3. ರಾಬಿನ್ ಮಿಂಜ್ – 65 ಲಕ್ಷ ರೂ
4. ಕರ್ಣ್ ಶರ್ಮ – 50 ಲಕ್ಷ ರೂ
5. ರಿಯಾನ್ ರಿಕೆಲ್​ಟನ್ – 1 ಕೋಟಿ ರೂ
6. ದೀಪಕ್ ಚಹರ್ – 9.25 ಕೋಟಿ ರೂ
7. ಅಲ್ಲಾ ಘಜನ್​ಫರ್​ – 4.8 ಕೋಟಿ ರೂ
8. ವಿಲ್ ಜ್ಯಾಕ್ಸ್ – 5.25 ಕೋಟಿ ರೂ
9. ಅಶ್ವನಿ ಕುಮಾರ್ – 30 ಲಕ್ಷ ರೂ
10. ಮಿಚೆಲ್ ಸ್ಯಾಂಟ್ನರ್ – 2 ಕೋಟಿ ರೂ
11. ರೀಸ್ ಟೋಪ್ಲೆ – 75 ಲಕ್ಷ ರೂ
12. ಶ್ರೀಜಿತ್ ಕೃಷ್ಣನ್ – 30 ಲಕ್ಷ ರೂ
13. ರಾಜ್ ಅಂಗದ್ ಬಾವಾ – 30 ಲಕ್ಷ ರೂ
14. ಸತ್ಯನಾರಾಯಣ ರಾಜು – 30 ಲಕ್ಷ ರೂ
15. ಬೆವೊನ್ ಜೇಕಬ್ಸ್ – 30 ಲಕ್ಷ ರೂ
16. ಅರ್ಜುನ್ ತೆಂಡೂಲ್ಕರ್ – 30 ಲಕ್ಷ ರೂ
17. ಲಿಜಾಡ್​ ವಿಲಿಯಮ್ಸ್ – 75 ಲಕ್ಷ ರೂ
18. ವಿಘ್ನೇಶ್ ಪುಥುರು – 30 ಲಕ್ಷ ರೂ
ರಿಟೇನ್​ ಆಟಗಾರರು: ರೋಹಿತ್ ಶರ್ಮ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮ, ಹಾರ್ದಿಕ್ ಪಾಂಡ್ಯ, ಜಸ್​ಪ್ರೀತ್​ ಬುಮ್ರಾ.

Share. Facebook Twitter LinkedIn WhatsApp Email

Related Posts

ಅಂಡರ್ 19 ಏಷ್ಯಾ ಕಪ್: ಪಾಕಿಸ್ತಾನ ವಿರುದ್ಧ ಭಾರತಕ್ಕೆ 90 ರನ್ ಗಳ ಭರ್ಜರಿ ಗೆಲುವು | U19 Asia Cup

14/12/2025 7:05 PM1 Min Read

ಇತಿಹಾಸ ನಿರ್ಮಾಣ! ಐತಿಹಾಸಿಕ ಚೊಚ್ಚಲ ಸ್ಕ್ವಾಷ್ ವಿಶ್ವಕಪ್ ಫೈನಲ್ ತಲುಪಿದ ಭಾರತ

14/12/2025 3:50 PM1 Min Read

ಐಸಿಸಿ ಏಕದಿನ ಶ್ರೇಯಾಂಕದಲ್ಲಿ ‘ವಿರಾಟ್ ಕೊಹ್ಲಿ’ 2ನೇ ಸ್ಥಾನಕ್ಕೆ ಜಿಗಿತ, ‘ರೋಹಿತ್ ಶರ್ಮಾ’ಗೆ ಮತ್ತೆ ಅಗ್ರಸ್ಥಾನ!

10/12/2025 3:23 PM1 Min Read
Recent News

BREAKING: ಶಾಮನೂರು ಶಿವಶಂಕರಪ್ಪ ನಿಧನ ಹಿನ್ನಲೆ: ನಾಳೆ ದಾವಣಗೆರೆ ವಿವಿಯ ಎಲ್ಲಾ ಕಾಲೇಜುಗಳಿಗೆ ರಜೆ ಘೋಷಣೆ

14/12/2025 8:48 PM

ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸಚಿವ ಎಂ.ಬಿ.ಪಾಟೀಲ ಸಂತಾಪ

14/12/2025 8:41 PM

BREAKING: ಶಾಮನೂರು ಶಿವಶಂಕರಪ್ಪ ನಿಧನ ಹಿನ್ನಲೆ: ನಾಳೆ ದಾವಣಗೆರೆ ವಿವಿ ಪರೀಕ್ಷೆ ಮುಂದೂಡಿಕೆ, ರಜೆ ಘೋಷಣೆ

14/12/2025 8:37 PM

ಶ್ಯಾಮನೂರು ಶಿವಶಂಕರಪ್ಪನವರ ನಿಧನಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಂಬನಿ

14/12/2025 8:30 PM
State News
KARNATAKA

BREAKING: ಶಾಮನೂರು ಶಿವಶಂಕರಪ್ಪ ನಿಧನ ಹಿನ್ನಲೆ: ನಾಳೆ ದಾವಣಗೆರೆ ವಿವಿಯ ಎಲ್ಲಾ ಕಾಲೇಜುಗಳಿಗೆ ರಜೆ ಘೋಷಣೆ

By kannadanewsnow0914/12/2025 8:48 PM KARNATAKA 1 Min Read

ದಾವಣಗೆರೆ: ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ ಹಿನ್ನಲೆಯಲ್ಲಿ ದಾವಣಗೆರೆ ವಿವಿಯ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ. ಅಲ್ಲದೇ…

ಶಾಮನೂರು ಶಿವಶಂಕರಪ್ಪ ನಿಧನಕ್ಕೆ ಸಚಿವ ಎಂ.ಬಿ.ಪಾಟೀಲ ಸಂತಾಪ

14/12/2025 8:41 PM

BREAKING: ಶಾಮನೂರು ಶಿವಶಂಕರಪ್ಪ ನಿಧನ ಹಿನ್ನಲೆ: ನಾಳೆ ದಾವಣಗೆರೆ ವಿವಿ ಪರೀಕ್ಷೆ ಮುಂದೂಡಿಕೆ, ರಜೆ ಘೋಷಣೆ

14/12/2025 8:37 PM

ಶ್ಯಾಮನೂರು ಶಿವಶಂಕರಪ್ಪನವರ ನಿಧನಕ್ಕೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕಂಬನಿ

14/12/2025 8:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.