Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ITI ಪ್ರವೇಶಕ್ಕೆ ಅರ್ಜಿ ಆಹ್ವಾನ: ಮೇ.28 ಲಾಸ್ಟ್ ಡೇಟ್

13/05/2025 9:39 PM

ಈ ಸಮಯದಲ್ಲಿ ಕಾಂಗ್ರೆಸ್‌ ನಾಯಕರು ಒಡಕು ಮಾತುಗಳನ್ನಾಡಬಾರದು: ಪ್ರತಿಪಕ್ಷ ನಾಯಕ ಆರ್‌.ಅಶೋಕ್

13/05/2025 9:31 PM

ಪಾಕಿಸ್ತಾನ ಭಯೋತ್ಪಾದಕರ ನಾಡು ಎಂಬುದು ಸಾಬೀತು: ಛಲವಾದಿ ನಾರಾಯಣಸ್ವಾಮಿ

13/05/2025 9:27 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ‘ಪೊಲೀಸ್ ಅಧಿಕಾರಿ, ಸಿಬ್ಬಂದಿ’ಗಳಿಗೆ ಬಿಗ್ ಶಾಕ್: ರಾಜ್ಯ ಸರ್ಕಾರದಿಂದ ‘ಶಿಸ್ತು ಕ್ರಮ’ದ ಬಗ್ಗೆ ಈ ಖಡಕ್ ಆದೇಶ
KARNATAKA

BIG NEWS: ‘ಪೊಲೀಸ್ ಅಧಿಕಾರಿ, ಸಿಬ್ಬಂದಿ’ಗಳಿಗೆ ಬಿಗ್ ಶಾಕ್: ರಾಜ್ಯ ಸರ್ಕಾರದಿಂದ ‘ಶಿಸ್ತು ಕ್ರಮ’ದ ಬಗ್ಗೆ ಈ ಖಡಕ್ ಆದೇಶ

By kannadanewsnow0906/11/2024 2:18 PM
vidhana soudha
vidhana soudha

ಬೆಂಗಳೂರು: ರಾಜ್ಯ ಸರ್ಕಾರದಿಂದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಬಿಗ್ ಶಾಕ್ ನೀಡಿದೆ. ನ್ಯಾಯಾಲಯದಲ್ಲಿ ಬಿಡುಗಡೆ ಹೊಂದಿದ ಪ್ರಕರಣಗಳಲ್ಲಿ Acquittal Review Committee ಸಮಿತಿಯು ಶಿಫಾರಸ್ಸಿನ ಆಧಾರದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ತನಿಖೆಯಲ್ಲಿ ಕರ್ತವ್ಯಲೋಪವೆಸಗಿರುವ ಬಗ್ಗೆ ಶಿಸ್ತು ಕ್ರಮ ಜರುಗಿಸಲು ಆದೇಶಿಸಿದೆ.

ಈ ಸಂಬಂಧ ಕರ್ನಾಟಕ ಪೊಲೀಸ್ ಇಲಾಖೆಯ ಆಡಳಿತ ವಿಭಾಗದ ಎಐಜಿಪಿ ಕಲಾ ಕೃಷ್ಣಸ್ವಾಮಿ ಅವರು ಸುತ್ತೋಲೆ ಹೊರಡಿದ್ದಾರೆ. ಅದರಲ್ಲಿ ಪೊಲೀಸ್ ಇಲಾಖೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಅಪರಾಧ ಮೊಕದ್ದಮೆಗಳಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಅಂತಿಮ ವರದಿಗಳು ಸಲ್ಲಿಸಲ್ಪಟ್ಟ ನಂತರ ಮಾನ್ಯ ನ್ಯಾಯಾಲಯವು ವಿಚಾರಣೆ ನಡೆಸಿ ಹೊರಡಿಸುತ್ತಿರುವ ಅನೇಕ ತೀರ್ಪುಗಳಲ್ಲಿ ವಿವಿಧ ವೃಂದದ ಅಧಿಕಾರಿ/ಸಿಬ್ಬಂದಿಗಳು ಸಮರ್ಪಕವಾಗಿ ತನಿಖೆ ಮಾಡದೇ ಲೋಪದೋಷಗಳ ಬಗ್ಗೆ ಇರುವುದರ ಬಗ್ಗೆ ಅಥವಾ ತನಿಖೆಯಲ್ಲಿನ ಉಲ್ಲೇಖಿಸಲಾಗಿರುತ್ತದೆ ಮತ್ತು ಇದರಿಂದಾಗಿ ಆರೋಪಿತರುಗಳಿಗೆ ಸಂಶಯದ ಲಾಭವನ್ನು ನೀಡಿ ಪ್ರಕರಣಗಳು ಖುಲಾಸೆಯಾಗುತ್ತಿರುತ್ತವೆ ಎಂದಿದ್ದಾರೆ.

ಸರ್ಕಾರದ ಆದೇಶ ಸಂಖ್ಯೆ ಹೆಚ್‌ಡಿ126/ಸಿಡಬ್ಲೂಪಿ/2014 : ದಿನಾಂಕ 0:20.10.20140 ಆದೇಶಿಸಿರುವಂತೆ ಕೇಸಿನ ಕಡತದೊಂದಿಗೆ ಪರಾಮರ್ಶಿಸುವುದರ ಸಲುವಾಗಿ ರಾಜ್ಯದ ಪ್ರತಿ ವಲಯ ಮತ್ತು ನಗರ ಕಮೀಷನರೇಟ್ ಗಳಲ್ಲಿ ಹಾಗೂ ಜಿಲ್ಲಾ ಘಟಕಗಳಲ್ಲಿ ಸರ್ಕಾರಿ ಅಭಿಯೋಜಕರುಗಳ್ನು ಒಳಗೊಂಡ Acquittal Review Committee ರಚಿಸಲಾದ ಸಮಿತಿಯು ಕಾರ್ಯನಿರ್ವಹಿಸುತ್ತಿರುತ್ತದೆ. ಮಾನ್ಯ ನ್ಯಾಯಾಲಯದಲ್ಲಿ ಖುಲಾಸೆಗೊಂಡ ಪ್ರಕರಣಗಳಲ್ಲಿ ತನಿಖಾಧಿಕಾರಿಗಳಉ ನ್ಯಾಯಾಲಯದಲ್ಲಿ ಅಭಿಯೋಜನೆಗೆ ಪೂರಕವಾದ ಸಾಕ್ಷ್ಯ ನುಡಿಯದೆ ಇರುವುದು, ತನಿಖಾ ಪ್ರಕ್ರಿಯೆಯಲ್ಲಿ ಲೋಪವೆಸಗಿರುವುದು ಮತ್ತು ಸಾಕ್ಷ್ಯಗಳನ್ನು ಸಂಗ್ರಹಿಸದೇ ಇರುವುದು ಹಾಗೂ ಸಾಕ್ಷಿದಾರರುಗಳನ್ನು ನ್ಯಾಯಾಲಯದಲ್ಲಿ ಹಾಜರುಪಡಿಸದೇ ಇರುವುದು ತನಿಖಾಧಿಕಾರಿಗಳಾದ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳು ಕರ್ತವ್ಯ ಲೋಪವೆಸಗಿರುವ ಬಗ್ಗೆ ಶಿಸ್ತು ಕ್ರಮ ಜರುಗಿಸಲು  Acquittal Review Committee ಶಿಫಾರಸ್ಸು ಮಾಡಲಾಗುತ್ತಿದೆ. Acquittal Review Committee ಶಿಫಾರಸ್ಸಿನಂತೆ, ನ್ಯಾಯಾಲಯದಲ್ಲಿ ಖುಲಾಸೆಗೊಂಡ ಅಪರಾಧ ಮೊಕದ್ದಮೆಗಳ ತನಿಖೆಯಲ್ಲಿ ಕರ್ತವ್ಯಲೋಪ ವೆಸಗಿರುವ ತನಿಖಾಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದರ ಸಂಬಂಧ ಪ್ರಧಾನ ಕಛೇರಿಯಿಂದ ಉಲ್ಲೇಖಿತದಲ್ಲಿ ಮಾರ್ಗಸೂಚಿಗಳನ್ನು ನೀಡಲಾಗಿತ್ತು.

ಮಾನ್ಯ ಕರ್ನಾಟಕ ರಾಜ್ಯ ಆಡಳಿತ ನ್ಯಾಯಾ ಮಂಡಳಿ ಅರ್ಜಿ ಸಂಖ್ಯೆ:517/2023 ಪ್ರಕರಣದಲ್ಲಿ ಆದೇಶ :19.2.20240 Acquittal Review Committee ಸಮಿತಿಯು ಶಿಫಾರಸ್ಸಿನ ಆಧಾರದ ಮೇಲೆ ತನಿಖಾಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವ ಪೂರ್ವದಲ್ಲಿ ಪಾಲಿಸಬೇಕಾದ ಕ್ರಮಗಳ ಬಗ್ಗೆ ಸೂಚನೆಗಳನ್ನು ನೀಡಿರುತ್ತದೆ.

ಈ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಖುಲಾಸೆಗೊಂಡ ಪ್ರಕರಣಗಳ ತನಿಖೆಯಲ್ಲಿ ಕರ್ತವ್ಯಲೋಪವೆಸಗಿದ ತನಿಖಾಧಿಕಾರಿಗಳ ವಿರುದ್ಧ Acquittal Review Committee ಯ ಶಿಫಾರಸ್ಸಿನ ಆಧಾರದ ಮೇಲೆ ಶಿಸ್ತುಕ್ರಮ ಈ ಹಿಂದೆ ಪ್ರಧಾನ ಜರುಗಿಸುವುದರ ಸಂಬಂಧ ಪರಿಷ್ಕೃತ ಮಾರ್ಗಸೂಚಿಗಳನ್ನು ಹೊರಡಿಸುವುದರ ಸಲುವಾಗಿ ಕಛೇರಿಯಿಂದ ಹೊರಡಿಸಲಾದ ಉಲ್ಲೇಖಿತ ದಿ: 2.2.2021ರ ಸುತ್ತೋಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಪಡಿಸಲಾಗಿದೆ.

ಇಂತಹ ಪ್ರಕರಣದಲ್ಲಿ Acquittal Review Committee ಸಮಿತಿಯು ನ್ಯಾಯಾಲಯದಲ್ಲಿ ಖುಲಾಸೆಗೊಂಡ ಪ್ರಕರಣಗಳ ಪರಾಮರ್ಶಿಸಿದ ನಂತರ ತನಿಖೆಯಲ್ಲಿ ಕರ್ತವ್ಯಲೋಪವೆಸಗಿದ ತನಿಖಾಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುವ ಸಂಬಂಧ ಎಲ್ಲಾ “ಖುಲಾಸೆಗೊಂಡ ಅಪರಾಧ ಪ್ರಕರಣಗಳ ಪರಾಮರ್ಶೆ ಸಮಿತಿಯ ಅಧ್ಯಕ್ಷರು ಘಟಕಾಧಿಕಾರಿಗಳು ಶಿಸ್ತುಪ್ರಾಧಿಕಾರಿಗಳಿಗೆ ಈ ಕೆಳಕಂಡ ಮಾರ್ಗಸೂಚಿಯನ್ನು ಅನುಸರಿಸಲು ತಿಳಿಸಲಾಗಿದೆ.

1. ರಾಜ್ಯದ ವಲಯ, ಕಮೀಷನರೇಟ್ ಹಾಗೂ ಜಿಲ್ಲಾ ಮಟ್ಟದಲ್ಲಿ ನ್ಯಾಯಾಲಯಗಳಲ್ಲಿ ಖುಲಾಸೆಗೊಂಡ ಕ್ರಿಮಿನಲ್ ಪ್ರಕರಣಗಳನ್ನು Acquittal Review Committee ನಲ್ಲಿ ಪರಾಮರ್ಶಿಸಿದಾಗ ತನಿಖಾಧಿಕಾರಿಗಳು ಸದರಿ ಕ್ರಿಮಿನಲ್ ಪ್ರಕರಣಗಳಲ್ಲಿ ತನಿಖಾಲೋಪವೆಸಗಿರುವ ಬಗ್ಗೆ ಕಮಿಟಿಯು ಗಮನಿಸಿ ತನಿಖಾಧಿಕಾರಿಯ ವಿರುದ್ಧ ಶಿಸ್ತುಕ್ರಮ ಜರುಗಿಸಲು ತೀರ್ಮಾನಿಸಿ ಶಿಫಾರಸ್ಸು ಮಾಡುತ್ತಿರುತ್ತಾರೆ. ಕಮಿಟಿಯ ಶಿಫಾರಸ್ಸಿನಂತೆ, ಪರಾಮರ್ಶೆಗೊಳಗಾದ ಕ್ರಿಮಿನಲ್ ಪ್ರಕರಣಗಳು ದಾಖಲಾದ ಘಟಕಗಳಲ್ಲಿನ ಜಿಲ್ಲಾ ಘಟಕಾಧಿಕಾರಿಗಳು/ವಿಭಾಗದ ಉಪ ಪೊಲೀಸ್ ಆಯುಕ್ತರುಗಳು ಆಯಾ ತನಿಖಾಧಿಕಾರಿಗೆ ತನಿಖಾ ಲೋಪದ ಬಗ್ಗೆ ವಿವರಣೆಯನ್ನು ಪಡೆಯವುದರ ಸಲುವಾಗಿ ನೋಟೀಸ್ ಹೊರಡಿಸಿ ಜಾರಿ ಮಾಡುವುದು’ ಸದರಿ ನೋಟೀಸ್‌ನೊಂದಿಗೆ ತನಿಖಾಲೋಪದ ಬಗ್ಗೆ ನಿರ್ಧಿಷ್ಟ ಮಾಹಿತಿ, ಕೇಸಿನಲ್ಲಿರುವ ಪೂರಕ ದಾಖಲೆ, ಪ್ರಕರಣದ ನ್ಯಾಯಾಲಯದ ತೀರ್ಪಿನ ಪ್ರತಿ, ಖುಲಾಸೆಗೊಂಡ ಪ್ರಕರಣಗಳ ಪರಾಮರ್ಶೆ ಸಭೆಯ ನಡವಳಿಯ ಪ್ರತಿಯನ್ನು ಒದಗಿಸತಕ್ಕದ್ದು, ಸದರಿ ನೋಟೀಸ್‌ಗೆ ತನಿಖಾಧಿಕಾರಿಗಳು ನೀಡಲಾಗುವ ಸಮಜಾಯಿಷಿಯನ್ನು ಪಡೆದುಕೊಂಡು, ಸಮಜಾಯಿಷಿಯಲ್ಲಿನ ಅಂಶಗಳ ಬಗ್ಗೆ ಪರಿಶೀಲಿಸಿಕೊಂಡು ತನಿಖಾಧಿಕಾರಿಗಳು ಅಪರಾಧ ಪ್ರಕರಣದ ತನಿಖೆಯಲ್ಲಿ ಕರ್ತವ್ಯಲೋಪವೆಸಗಿರುವುದು ದೃಢಪಟ್ಟಲ್ಲಿ ಸೂಕ್ತ ಶಿಸ್ತಿನ ಕ್ರಮ ಜರುಗಿಸುವ ಸಲುವಾಗಿ ಆಯಾ ವಲಯಾಧಿಕಾರಿಗಳ/ಪೊಲೀಸ್ ಆಯುಕ್ತರುಗಳ ಮುಖಾಂತರವಾಗಿ ಸದರಿ ತನಿಖಾಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವ ಸಂಬಂಧಟ್ಟ ಘಟಕಾಧಿಕಾರಿಗಳಿಗೆ/ ಶಿಸ್ತುಪ್ರಾಧಿಕಾರಿಗಳಿಗೆ ಕೆ.ಎಸ್.ಪಿ. (ಡಿಪಿ) ನಿಯಮಾವಳಿ 1965/89 ಮತ್ತು ತಿದ್ದುಪಡಿ 2022ರ ರೀತ್ಯಾ ಲಘು ಶಿಸ್ತು ಕ್ರಮ(ನಿಯಮ7) ಅಥವಾ ಕ್ರಮಬದ್ಧವಾದ ಇಲಾಖಾ ವಿಚಾರಣೆಗಾಗಿ (ನಿಯಮ 6, 6&8) ಶಿಫಾರಸ್ಸು ಮಾಡತಕ್ಕದ್ದು.

2. ಕ್ರಿಮಿನಲ್‌ ಪ್ರಕರಣ ದಾಖಲಾದ ಘಟಕದಲ್ಲಿನ ಘಟಕಾಧಿಕಾರಿಗಳು ಸಂಬಂಧಪಟ್ಟ ಶಿಸ್ತುಪ್ರಾಧಿಕಾರಿಗಳಿಗೆ ನಿಯಂತ್ರಣಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸುವ ಪೂರ್ವದಲ್ಲಿ, ಕರಡು ದೋಷಾರೋಪಣಾ (ಅನುಬಂಧ 1 ರಿಂದ 4)ಯೊಂದಿಗೆ ಒದಗಿಸುವುದು.

3. ಕರಡು ದೋಷಾರೋಪಣಾ ಸಿದ್ದಪಡಿಸಿ ಕಳುಹಿಸುವಾಗ ನ್ಯಾಯಾಲಯದ ಆದೇಶದಲ್ಲಿ ನಮೂದಿಸಲಾದ ಆರೋಪಗಳ ಅಂಶಗಳಿಗೆ ಸಂಬಂಧಪಟ್ಟಂತೆ, ನ್ಯಾಯಾಲಯದ ಆದೇಶದ ಭಾಗವನ್ನು ಅಂದರೆ ತನಿಖಾಧಿಕಾರಿಗಳು ಲೋಪವೆಸಗಿರುವ ಬಗ್ಗೆ ಗಮನಿಸಿರುವ ಅಂಶವನ್ನು ಕಟುಟೀಕೆಯನ್ನು ವ್ಯಕ್ತಪಡಿಸಿದ್ದಲ್ಲಿ ಯಥಾವತ್ತಾಗಿ ನಮೂದಿಸಿ ಅದಕ್ಕೆ ಪೂರಕವಾಗಿ ಘಟಣಾವಳಿಯನ್ನು ಸಂಕ್ಷಿಪ್ತವಾಗಿ ವಿವರಿಸಿ, ನ್ಯಾಯಾಲಯದ ಆದೇಶದ ಭಾಗವನ್ನು ಕಟುಟೀಕೆಯಲ್ಲಿ ನಮೂದಿಸಿರುವ ಅಂಶಗಳಿಗೆ ಪೂರಕವಾದ ಅಭಿಯೋಗ ಸಾಕ್ಷಿದಾರರ(ಪಿಡಬ್ಲೂ/ಸಿಡಬ್ಲೂ ಹೆಸರನ್ನು ಹಾಗೂ ಆಪಾದಿತ ಅಧಿಕಾರಿಯು ಎಸಗಿರುವ ನಿರ್ದಿಷ್ಟ ಆರೋಪಗಳನ್ನು (ಅಸ್ಪಷ್ಟವಾಗಿರದೇ (vague)/ಜಾಳುಜಾಳಾಗಿರದೇ) ನಮೂದಿಸತಕ್ಕದ್ದು, ಅದಕ್ಕೆ ಪೂರಕವಾಗಿರುವಂತಹ ತನಿಖಾ ದಾಖಲಾತಿಗಳ ಪತ್ರ ಸಂಖ್ಯೆ, ದಿನಾಂಕದೊಂದಿಗಿನ ಮಾಹಿತಿ, ಪ್ರಕರಣದ ವಿವರ/ಹಿನ್ನೆಲೆಯನ್ನು ಸ್ಪಷ್ಟವಾಗಿ ನಮೂದಿಸಿ ಸಂಬಂಧಪಟ್ಟ ಎಲ್ಲಾ ದಾಖಲಾತಿ ಅಂದರೆ, ಎಫ್‌ಐಆರ್, ಅಭಿಯೋಗ ದಾಖಲಾತಿ, ಅಭಿಯೋಗ ಸಾಕ್ಷಿಗಳ ಪಟ್ಟಿ, ತೀರ್ಪಿನ ಪ್ರತಿ, ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದ ಹೇಳಿಕೆಯ ಪ್ರತಿಗಳು ಹಾಗೂ ಪ್ರಕರಣದ ಕಡತದಲ್ಲಿ (ಕೇಸ್ ಫೈಲ್)ಇನ್ನಿತರೆ ಅವಶ್ಯ ದಾಖಲೆಗಳನ್ನು ಒದಗಿಸತಕ್ಕದ್ದು.

4. ಡೆಪ್ಯೂಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್‌ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ರವರುಗಳ ವಿರುದ್ಧ ಶಿಸ್ತುಕ್ರಮಕ್ಕಾಗಿ ಜರುಗಿಸುವ ಪ್ರಕರಣಗಳಲ್ಲಿ ಕಂಡಿಕೆ 2 &3 ರಲ್ಲಿ ತಿಳಿಸಿರುವಂತೆ ಪೂರ್ಣ ಪ್ರಮಾಣದ ದಾಖಲಾತಿಗಳನ್ನು ಪ್ರಧಾನ ಕಛೇರಿಗೆ ಕಳುಹಿಸುವ ಬಗ್ಗೆ ಕ್ರಮ ತೆಗೆದುಕೊಳ್ಳತಕ್ಕದ್ದು.

5. Acquittal Review Committee ನಲ್ಲಿ ಶಿಫಾರಸ್ಸು ಮಾಡಿರುವಂತೆ, ಪೊಲೀಸ್‌ ಇನ್ಸ್ಪೆಕ್ಟರ್‌ಗಿಂತ ಕೆಳಹಂತದ ಹುದ್ದೆಗಳ ಅಧಿಕಾರಿಗಳ ವಿರುದ್ಧ ನಿಯಮ-6 ಹಾಗೂ ನಿಯಮ 6 & 8 ರಡಿಯಲ್ಲಿ ಶಿಸ್ತು ಕ್ರಮವನ್ನು ಜರುಗಿಸಿದ್ದಲ್ಲಿ ಈ ಕಛೇರಿಯ ಸುತ್ತೋಲೆ ಸಂಖ್ಯೆ:ಹೆಚ್ಆರ್ ಎಂ-1(8)55/2023 24 0:8.11.2023, 4.1.2024 & 16.5.2024 & ತಿಳಿಸಿರುವ ಮಾರ್ಗಸೂಚಿಗಳನ್ನು ಪಾಲನೆ ಮಾಡಿ, ನಂತರದಲ್ಲಿ ಆದೇಶಿಸಲಾಗುವ ಕ್ರಮಬದ್ಧ ಇಲಾಖಾ ವಿಚಾರಣೆಗಳಲ್ಲಿ ನಿವೃತ್ತ ನ್ಯಾಯಾಧೀಶರನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಕ ಮಾಡುವುದರ ಬಗ್ಗೆ ಕ್ರಮ ತೆಗೆದುಕೊಳ್ಳತಕ್ಕದ್ದು.

6. Acquittal Review Committee ನಲ್ಲಿ ಶಿಫಾರಸ್ಸು ಮಾಡಿರುವಂತೆ, ಪೊಲೀಸ್ ಇನ್ಸ್ಪೆಕ್ಟರ್‌ ಗಿಂತ ಕೆಳಹಂತದ ಹುದ್ದೆಗಳ ಅಧಿಕಾರಿಗಳ ವಿರುದ್ಧದ ಶಿಸ್ತು ಕ್ರಮಗಳಲ್ಲಿ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡವಳಿಗಳು) ನಿಯಮಗಳು 1965/89 ರ ನಿಯಮ-7 ರನ್ವಯ (ಲಘು ಶಿಕ್ಷಾ ಶಿಸ್ತು ಕ್ರಮ) ಶಿಸ್ತು ಪ್ರಾದಿಕಾರಿಗಳು ಕ್ರಮ ಜರುಗಿಸಿದ್ದಲ್ಲಿ, ಪ್ರಧಾನ ಕಚೇರಿ ಸುತ್ತೋಲೆ ಸಂಖ್ಯೆ: ಅಪೀಲು(3)/58/2013-14 ದಿನಾಂಕ: 7.2.2019ರ ಪ್ರಕಾರ ನೈಸರ್ಗಿಕ ನ್ಯಾಯ ಒದಗಿಸಲು ಎಲ್ಲಾ ಅವಕಾಶಗಳನ್ನು ಆರೋಪಿತ ಪೊಲೀಸ್ ಅಧಿಕಾರಿಗಳಿಗೆ ಒದಗಿಸುವುದು. ಆರೋಪಿತ ಪೊಲೀಸ್ ಅಧಿಕಾರಿಗಳು ನಿಯಮ 6ರಡಿಯಲ್ಲಿ ಅಭಿಮತ ನೀಡಿದ್ದಲ್ಲಿ ಕಂಡಿಕೆ-5ರಂತೆ ಕ್ರಮ ತೆಗೆದುಕೊಳ್ಳುವುದು. ನಿಯಮ-ರಡಿಯಲ್ಲಿ ವಿಚಾರಣೆಗೆ ಅಭಿಮತ ಸಲ್ಲಿಸಿದ್ದಲ್ಲಿ, ಪ್ರಾಥಮಿಕ ವಿಚಾರಣಾ ವರದಿ ಸಲ್ಲಿಸಿದ್ದ ಅಧಿಕಾರಿಯನ್ನು ಹೊರತುಪಡಿಸಿ, ಹಿರಿಯ ಪೊಲೀಸ್ ಅಧಿಕಾರಿಗಳನ್ನು (ಆಅ ರವರ ಹುದ್ದೆಗಿಂತ 2 ಹಂತದ ವೃಂದಕ್ಕೆ ಮುಂಬಡ್ತಿ ಹೊಂದಿದ ಅಧಿಕಾರಿಗಳನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಿಸುವುದು.

7. ನಿಯಮ-7 ರಡಿಯಲ್ಲಿ ನೇಮಿಸಲಾದ ವಿಚಾರಣಾಧಿಕಾರಿಗಳು, ವಿಚಾರಣೆ ಪ್ರಾರಂಭಿಸುವ ಪೂರ್ವದಲ್ಲಿ ಆಪೋಅ ರವರಿಗೆ ಅವರ ಪ್ರಕರಣದಲ್ಲಿ ನಿಯಮ-6ರಡಿಯಲ್ಲಿ ವಿಚಾರಣೆಗೆ ಸಮ್ಮತಿಸುವುದರ ಅಥವಾ ನಿಯಮ 7ರಡಿಯಲ್ಲಿ ವಿಚಾರಣೆ ಮುಂದುವರಿಸುವ ಬಗ್ಗೆ ಅಂತಿಮ ಸಮ್ಮತಿ ಪತ್ರವನ್ನು ಪಡೆದುಕೊಳ್ಳುವುದು. ನಿಯಮ-6ರಡಿಯಲ್ಲಿ ಸಮ್ಮತಿ ನೀಡಿದ್ದಲ್ಲಿ ಸಂಬಂಧಪಟ್ಟ ಶಿಸ್ತು ಪ್ರಾಧಿಕಾರಿಗಳಿಗೆ ದಾಖಲಾತಿಗಳನ್ನು ಹಿಂದಿರುಗಿಸುವುದು. ನಿಯಮ-ರಡಿಯಲ್ಲಿ ವಿಚಾರಣೆಗಾಗಿ ಸಮ್ಮತಿ ಪತ್ರ ನೀಡಿದ್ದಲ್ಲಿ ವಿಚಾರಣೆಯನ್ನು ಪ್ರಾರಂಭಿಸಿ ವಿಚಾರಣಾ ವರದಿಯನ್ನು ಶಿಸ್ತುಪ್ರಾಧಿಕಾರಿಗಳಿಗೆ ಸಲ್ಲಿಸತಕ್ಕದ್ದು. ಶಿಸ್ತುಪ್ರಾಧಿಕಾರಿಗಳು ನಿಯಮ-ರಡಿಯಲ್ಲಿನ ಸಲ್ಲಿಸಲಾದ ವಿಚಾರಣಾಧಿಕಾರಿಗಳ ಅಂತಿಮ ಅಭಿಪ್ರಾಯದ ವಿಚಾರಣಾ ವರದಿಯಲ್ಲಿನ ಅಂಶಗಳು ಹಾಗು ಆಪಾದಿತರು ಸಲ್ಲಿಸಿರುವ ಸಮಜಾಯಿಷಿಯಲ್ಲಿರುವ ಅಂಶಗಳೊಂದಿಗೆ ಪರಿಶೀಲಿಸಿಕೊಂಡು ಸೂಕ್ತ ಅಂತಿಮ ಆದೇಶ ಹೊರಡಿಸುವುದರ ಬಗ್ಗೆ ಕ್ರಮ ತೆಗೆದುಕೊಳ್ಳತಕ್ಕದ್ದು ಎಂಬುದಾಗಿ ತಿಳಿಸಿದ್ದಾರೆ.

ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ಗೆಲುವು: ಅಭಿನಂದನೆಗಳು ಫ್ರೆಂಡ್ ಎಂದ ಪ್ರಧಾನಿ ಮೋದಿ | PM Modi

‘ಧರ್ಮಸ್ಥಳ ಸಂಘ’ದಿಂದ ಹೆಚ್ಚಿನ ಬಡ್ಡಿ ವಸೂಲಿ ಮಾಡುತ್ತಿಲ್ಲ, ‘ಬ್ಯಾಂಕ್’ನಷ್ಟೇ ವಿಧಿಸಲಾಗುತ್ತಿದೆ: ಯೋಜನಾಧಿಕಾರಿ ಶಾಂತಾ ನಾಯ್ಕ್ ಸ್ಪಷ್ಟನೆ

Share. Facebook Twitter LinkedIn WhatsApp Email

Related Posts

ITI ಪ್ರವೇಶಕ್ಕೆ ಅರ್ಜಿ ಆಹ್ವಾನ: ಮೇ.28 ಲಾಸ್ಟ್ ಡೇಟ್

13/05/2025 9:39 PM1 Min Read

ಈ ಸಮಯದಲ್ಲಿ ಕಾಂಗ್ರೆಸ್‌ ನಾಯಕರು ಒಡಕು ಮಾತುಗಳನ್ನಾಡಬಾರದು: ಪ್ರತಿಪಕ್ಷ ನಾಯಕ ಆರ್‌.ಅಶೋಕ್

13/05/2025 9:31 PM2 Mins Read

ಪಾಕಿಸ್ತಾನ ಭಯೋತ್ಪಾದಕರ ನಾಡು ಎಂಬುದು ಸಾಬೀತು: ಛಲವಾದಿ ನಾರಾಯಣಸ್ವಾಮಿ

13/05/2025 9:27 PM1 Min Read
Recent News

ITI ಪ್ರವೇಶಕ್ಕೆ ಅರ್ಜಿ ಆಹ್ವಾನ: ಮೇ.28 ಲಾಸ್ಟ್ ಡೇಟ್

13/05/2025 9:39 PM

ಈ ಸಮಯದಲ್ಲಿ ಕಾಂಗ್ರೆಸ್‌ ನಾಯಕರು ಒಡಕು ಮಾತುಗಳನ್ನಾಡಬಾರದು: ಪ್ರತಿಪಕ್ಷ ನಾಯಕ ಆರ್‌.ಅಶೋಕ್

13/05/2025 9:31 PM

ಪಾಕಿಸ್ತಾನ ಭಯೋತ್ಪಾದಕರ ನಾಡು ಎಂಬುದು ಸಾಬೀತು: ಛಲವಾದಿ ನಾರಾಯಣಸ್ವಾಮಿ

13/05/2025 9:27 PM

BREAKING : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ, ಇಬ್ಬರು ಬಾಲಕರು ಅರೆಸ್ಟ್!

13/05/2025 9:21 PM
State News
KARNATAKA

ITI ಪ್ರವೇಶಕ್ಕೆ ಅರ್ಜಿ ಆಹ್ವಾನ: ಮೇ.28 ಲಾಸ್ಟ್ ಡೇಟ್

By kannadanewsnow0913/05/2025 9:39 PM KARNATAKA 1 Min Read

ಚಿತ್ರದುರ್ಗ : ಚಳ್ಳಕೆರೆ ನಗರದ ಪಾವಗಡ ರಸ್ತೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2025-26ನೇ ಸಾಲಿನ ಪ್ರವೇಶಾತಿಗೆ ಇಎಂ, ಫಿಟ್ಟರ್, ವೆಲ್ಡರ್,…

ಈ ಸಮಯದಲ್ಲಿ ಕಾಂಗ್ರೆಸ್‌ ನಾಯಕರು ಒಡಕು ಮಾತುಗಳನ್ನಾಡಬಾರದು: ಪ್ರತಿಪಕ್ಷ ನಾಯಕ ಆರ್‌.ಅಶೋಕ್

13/05/2025 9:31 PM

ಪಾಕಿಸ್ತಾನ ಭಯೋತ್ಪಾದಕರ ನಾಡು ಎಂಬುದು ಸಾಬೀತು: ಛಲವಾದಿ ನಾರಾಯಣಸ್ವಾಮಿ

13/05/2025 9:27 PM

BREAKING : ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ : ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ, ಇಬ್ಬರು ಬಾಲಕರು ಅರೆಸ್ಟ್!

13/05/2025 9:21 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.