Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ನಿಮ್ಮಪ್ಪನಂತೆ ಒಳ್ಳೆಯ ಕೆಲಸ ಮಾಡಲು ಜನ ನಿನ್ನ ಗೆಲ್ಲಿಸಿದ್ದಾರೆ : ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್ ವಿಶ್ವನಾಥ್ ವಾಗ್ದಾಳಿ

16/10/2025 12:06 PM

ದೀಪಾವಳಿಯಂದು ಹಳೆಯ ದೀಪಗಳನ್ನು ಹಚ್ಚುವುದು ಶುಭವೋ ಅಶುಭವೋ? ದೀಪಗಳನ್ನು ಹಚ್ಚಲು ಸರಿಯಾದ ನಿಯಮಗಳನ್ನು ತಿಳಿಯಿರಿ.!

16/10/2025 12:04 PM

BREAKING : ಕರ್ನಾಟಕದ ಖ್ಯಾತ ಹಿರಿಯ ಯಕ್ಷಗಾನ ಭಾಗವತ ‘ದಿನೇಶ್ ಅಮ್ಮಣ್ಣಾಯ’ ಇನ್ನಿಲ್ಲ | Dinesh Ammannaya No More

16/10/2025 11:59 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಿಜೆಪಿ ಸದಸ್ಯತ್ವ ಅಭಿಯಾನ- ಔರಾದಗೆ 5ನೇ ಸ್ಥಾನ: ರಾಜ್ಯಾಧ್ಯಕ್ಷರಿಂದ ‘ಶಾಸಕ ಪ್ರಭು ಚವ್ಹಾಣ’ಗೆ ಸನ್ಮಾನ
KARNATAKA

ಬಿಜೆಪಿ ಸದಸ್ಯತ್ವ ಅಭಿಯಾನ- ಔರಾದಗೆ 5ನೇ ಸ್ಥಾನ: ರಾಜ್ಯಾಧ್ಯಕ್ಷರಿಂದ ‘ಶಾಸಕ ಪ್ರಭು ಚವ್ಹಾಣ’ಗೆ ಸನ್ಮಾನ

By kannadanewsnow0928/10/2024 6:06 PM

ಬೆಂಗಳೂರ : ಭಾರತೀಯ ಜನತಾ ಪಕ್ಷದಿಂದ ನಡೆದ ಸದಸ್ಯತ್ವ ಅಭಿಯಾನದಲ್ಲಿ ಔರಾದ(ಬಿ) ಮಂಡಲವು ರಾಜ್ಯದಲ್ಲಿ ಐದನೇ ಸ್ಥಾನ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ ಮೊದಲ ಸ್ಥಾನ ಪಡೆದಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ಯಡಿಯೂರಪ್ಪ ಅವರು ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರನ್ನು ಸೋಮವಾರ ಬೆಂಗಳೂರಿನ ಜಗನ್ನಾಥ ಭವನದಲ್ಲಿ ಗೌರವಿಸಿದರು.

ಬಳಿಕ ಮಾತನಾಡಿದ ಶಾಸಕ ಪ್ರಭು ಚವ್ಹಾಣ ಅವರು, ಔರಾದ(ಬಿ) ಮಂಡಲದಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಕಾರ್ಯಕರ್ತರು ಪ್ರತಿ ಬೂತ್‌ಗಳಲ್ಲಿ ಓಡಾಡಿ ನಿರಂತರ ಶ್ರಮ ವಹಿಸಿದ್ದಾರೆ. ಅವರ ಪರಿಶ್ರಮದಿಂದಾಗಿ ಅಭಿಯಾನ ಯಶಸ್ವಿಯಾಗಿ ನಡೆಯಲು ಸಾಧ್ಯವಾಗಿದೆ. ಈ ಸನ್ಮಾನವನ್ನು ಮಂಡಲದ ಎಲ್ಲ ಕಾರ್ಯಕರ್ತರಿಗೆ ಅರ್ಪಿಸುತ್ತೇನೆ ಎಂದು ಹೇಳಿದರು.

ಅಭಿಯಾನ ಆರಂಭವಾದ ನಂತರ ತಾಲ್ಲೂಕು ಮಟ್ಟದಲ್ಲಿ ಕಾರ್ಯಾಗಾರವನ್ನು ಆಯೋಜಿಸಿ ಕಾರ್ಯಕರ್ತರು ಅಭಿಯಾನದಲ್ಲಿ ಹೇಗೆ ಕೆಲಸ ಮಾಡಬೇಕೆಂದು ತಿಳುವಳಿಕೆ ಮೂಡಿಸುವ ಕೆಲಸ ಮಾಡಲಾಗಿತ್ತು. ಮಹಾಶಕ್ತಿ ಕೇಂದ್ರ, ಶಕ್ತಿ ಕೆಂದ್ರ ಹಾಗೂ ಎಲ್ಲ ಬೂತ್‌ಗಳಲ್ಲಿ ಸಭೆಗಳನ್ನು ನಡೆಸಲಾಗಿದೆ. ಜಿಲ್ಲಾಧ್ಯಕ್ಷರಾದ ಸೋಮನಾಥ ಪಾಟೀಲ ಹಾಗೂ ಮಂಡಲ ಅದ್ಯಕ್ಷರಾದ ರಾಮಶೆಟ್ಟಿ ಪನ್ನಾಳೆ ಅವರು ಕಾರ್ಯಕರ್ತರಿಗೆ ಪ್ರೇರಣೆ ನೀಡಿದ್ದಾರೆ. ಅದರಂತೆ ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ ಹಾಗೂ ಬೂತ್‌ಗಳಲ್ಲಿ ಅಭಿಯಾನ ನಡೆಸಿರುವುದರಿಂದ ಗುರಿ ತಲುಪಲು ಸಾಧ್ಯವಾಗಿದೆ ಎಂದು ಸಂತೋಷ ಹಂಚಿಕೊಂಡರು.

ಕಾರ್ಯಕರ್ತರು ಸತತ ಎರಡು ತಿಂಗಳವರೆಗೆ ಹಬ್ಬ-ಹರಿದಿನಗಳನ್ನು ಲೆಕ್ಕಿಸದೇ ಸಕ್ರೀಯವಾಗಿ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ಔರಾದನಲ್ಲಿ ಚುನಾವಣೆಯ ಮಾದರಿಯಲ್ಲಿ ಕೆಲಸವಾಗಿದೆ. ಎಲ್ಲರ ಪರಿಶ್ರಮದಿಂದಾಗಿ ಔರಾದ(ಬಿ) ಮಂಡಲ ರಾಜ್ಯದಲ್ಲಿ 5ನೇ ಸ್ಥಾನ ಮತ್ತು ಉತ್ತರ ಕರ್ನಾಟಕದಲ್ಲಿ ಮೊದಲನೇ ಸ್ಥಾನ ಪಡೆದಿದೆ. ಔರಾದ(ಬಿ) ಕ್ಷೇತ್ರಕ್ಕೆ ಈ ಸ್ಥಾನಮಾನ ನೀಡಲು ಶ್ರಮಿಸಿದ ಎಲ್ಲ ಕಾರ್ಯಕರ್ತರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

ರಾಜ್ಯಾಧ್ಯಕ್ಷರು ತಮಗೆ ಭಾಲ್ಕಿ ಹಾಗೂ ಬೀದರ ಪ್ರಭಾರಿಯಾಗಿ ನೇಮಕ ಮಾಡಿದ್ದರು. ಅವರ ನಿರ್ದೇಶನದಂತೆ ಅಲ್ಲಿನ ಮುಖಂಡರು, ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೊಂದಿಗೆ ಸಭೆಗಳನ್ನು ನಡೆಸಿ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡಲಾಗಿದೆ. ನಂತರ ಎರಡೂ ಮಂಡಲಗಳಲ್ಲಿಯೂ ಸುಧಾರಣೆ ಕಾಣಿಸಿದೆ ಎಂದು ಹೇಳಿದರು.

ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಈ ಅಭಿಯಾನ ಅತ್ಯವಶ್ಯಕವಾಗಿತ್ತು. ಬೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸಲು ಇದೊಂದು ಪರಿಣಾಮಕಾರಿ ವಿಧಾನವೆಂದು ಭಾವಿಸಿ ಕೆಲಸ ಮಾಡಲಾಗಿದೆ. ಮುಂಬರುವ ದಿನಗಳಲ್ಲಿ ಪಕ್ಷದ ಚಟುವಟಿಕೆಗಳಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲು ಶ್ರಮಿಸೋಣ ಎಂದರು.

ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ ಸದಾನಂದ ಗೌಡ, ರಾಜ್ಯ ಸಹ ಉಸ್ತುವಾರಿ ಡಾ.ಸುಧಾಕರ್ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ , ಪಿ.ರಾಜೀವ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಚನ್ನಪಟ್ಟಣ – ರಾಮನಗರ ನಡುವೆ ಕೈಗಾರಿಕೆ; ಸ್ಥಳೀಯರಿಗೆ ಉದ್ಯೋಗಕ್ಕೆ ಒತ್ತು: HD ಕುಮಾರಸ್ವಾಮಿ ಭರವಸೆ

ಶಿವಮೊಗ್ಗ: ‘ಸಾಗರ ತಾಲ್ಲೂಕು ಅರಣ್ಯ ಇಲಾಖೆ ಚುನಾವಣೆ’ಯಲ್ಲಿ ‘ಸಂತೋಷ್ ಕುಮಾರ್’ ಭರ್ಜರಿ ಗೆಲುವು

Share. Facebook Twitter LinkedIn WhatsApp Email

Related Posts

ನಿಮ್ಮಪ್ಪನಂತೆ ಒಳ್ಳೆಯ ಕೆಲಸ ಮಾಡಲು ಜನ ನಿನ್ನ ಗೆಲ್ಲಿಸಿದ್ದಾರೆ : ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್ ವಿಶ್ವನಾಥ್ ವಾಗ್ದಾಳಿ

16/10/2025 12:06 PM1 Min Read

ದೀಪಾವಳಿಯಂದು ಹಳೆಯ ದೀಪಗಳನ್ನು ಹಚ್ಚುವುದು ಶುಭವೋ ಅಶುಭವೋ? ದೀಪಗಳನ್ನು ಹಚ್ಚಲು ಸರಿಯಾದ ನಿಯಮಗಳನ್ನು ತಿಳಿಯಿರಿ.!

16/10/2025 12:04 PM2 Mins Read

BREAKING : ಕರ್ನಾಟಕದ ಖ್ಯಾತ ಹಿರಿಯ ಯಕ್ಷಗಾನ ಭಾಗವತ ‘ದಿನೇಶ್ ಅಮ್ಮಣ್ಣಾಯ’ ಇನ್ನಿಲ್ಲ | Dinesh Ammannaya No More

16/10/2025 11:59 AM1 Min Read
Recent News

ನಿಮ್ಮಪ್ಪನಂತೆ ಒಳ್ಳೆಯ ಕೆಲಸ ಮಾಡಲು ಜನ ನಿನ್ನ ಗೆಲ್ಲಿಸಿದ್ದಾರೆ : ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್ ವಿಶ್ವನಾಥ್ ವಾಗ್ದಾಳಿ

16/10/2025 12:06 PM

ದೀಪಾವಳಿಯಂದು ಹಳೆಯ ದೀಪಗಳನ್ನು ಹಚ್ಚುವುದು ಶುಭವೋ ಅಶುಭವೋ? ದೀಪಗಳನ್ನು ಹಚ್ಚಲು ಸರಿಯಾದ ನಿಯಮಗಳನ್ನು ತಿಳಿಯಿರಿ.!

16/10/2025 12:04 PM

BREAKING : ಕರ್ನಾಟಕದ ಖ್ಯಾತ ಹಿರಿಯ ಯಕ್ಷಗಾನ ಭಾಗವತ ‘ದಿನೇಶ್ ಅಮ್ಮಣ್ಣಾಯ’ ಇನ್ನಿಲ್ಲ | Dinesh Ammannaya No More

16/10/2025 11:59 AM

ನನಗೆ ಕಡಿಮೆ ಅವಧಿ ಮುಖ್ಯಮಂತ್ರಿ ಆಗಿ ಅನುಭವ ಇದೆ, ನಾನು ಸರ್ಟಿಫಿಕೇಟ್ ಗೆ ಕೆಲಸ ಮಾಡಲ್ಲ : HD ಕುಮಾರಸ್ವಾಮಿ

16/10/2025 11:56 AM
State News
KARNATAKA

ನಿಮ್ಮಪ್ಪನಂತೆ ಒಳ್ಳೆಯ ಕೆಲಸ ಮಾಡಲು ಜನ ನಿನ್ನ ಗೆಲ್ಲಿಸಿದ್ದಾರೆ : ಪ್ರಿಯಾಂಕ್ ಖರ್ಗೆ ವಿರುದ್ಧ ಹೆಚ್ ವಿಶ್ವನಾಥ್ ವಾಗ್ದಾಳಿ

By kannadanewsnow0516/10/2025 12:06 PM KARNATAKA 1 Min Read

ಬೆಂಗಳೂರು : ರಾಜ್ಯದಲ್ಲಿ ಆರ್ ಎಸ್ ಎಸ್ ಚಟುವಟಿಕೆಗಳಿಗೆ ನಿಷೇಧ ಹೇರುವಂತೆ ಸಿಎಂ ಸಿದ್ಧರಾಮಯ್ಯಗೆ ಸಚಿವ ಪ್ರಿಯಾಂಕ ಖರ್ಗೆ ಪತ್ರ…

ದೀಪಾವಳಿಯಂದು ಹಳೆಯ ದೀಪಗಳನ್ನು ಹಚ್ಚುವುದು ಶುಭವೋ ಅಶುಭವೋ? ದೀಪಗಳನ್ನು ಹಚ್ಚಲು ಸರಿಯಾದ ನಿಯಮಗಳನ್ನು ತಿಳಿಯಿರಿ.!

16/10/2025 12:04 PM

BREAKING : ಕರ್ನಾಟಕದ ಖ್ಯಾತ ಹಿರಿಯ ಯಕ್ಷಗಾನ ಭಾಗವತ ‘ದಿನೇಶ್ ಅಮ್ಮಣ್ಣಾಯ’ ಇನ್ನಿಲ್ಲ | Dinesh Ammannaya No More

16/10/2025 11:59 AM

ನನಗೆ ಕಡಿಮೆ ಅವಧಿ ಮುಖ್ಯಮಂತ್ರಿ ಆಗಿ ಅನುಭವ ಇದೆ, ನಾನು ಸರ್ಟಿಫಿಕೇಟ್ ಗೆ ಕೆಲಸ ಮಾಡಲ್ಲ : HD ಕುಮಾರಸ್ವಾಮಿ

16/10/2025 11:56 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.