ಹೈದರಾಬಾದ್ : ತೆಲಂಗಾಣದಲ್ಲಿ ಭೀಕರ ಘಟನೆಯೊಂದು ನಡೆದಿದ್ದು, ಮಲ್ಲಾಪುರ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಗೆ ಪೆಟ್ರೋಲ್ ತುಂಬಿಸುವ ವೇಳೆ ದುಷ್ಕರ್ಮಿಯೊಬ್ಬ ಬೆಂಕಿ ಹಚ್ಚಿದ ಘಟನೆ ಶನಿವಾರ ಸಂಜೆ ನಡೆದಿದೆ.
ಸಿಬ್ಬಂದಿ ಎಚ್ಚೆತ್ತು ಬೆಂಕಿ ನಂದಿಸುವ ಮೂಲಕ ಭಾರೀ ಅನಾಹುತ ತಪ್ಪಿಸಿದ್ದಾರೆ. ಸ್ಥಳೀಯರ ಪ್ರಕಾರ, ಚಂದನಕುಮಾರ್ (19) ತನ್ನ ಸ್ನೇಹಿತರೊಂದಿಗೆ ಆಕ್ಟಿವಾ ದ್ವಿಚಕ್ರ ವಾಹನದಲ್ಲಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ಗೆ ಪೆಟ್ರೋಲ್ ತುಂಬಿಸಲು ಮಲ್ಲಾಪುರದ ಹಳೆ ಮೀರಪೇಟೆಗೆ ಬಂದಿದ್ದರು.
పెట్రోల్ బంక్లో పెట్రోల్ పోస్తుండగా నిప్పు పెట్టిన ఆకతాయిలు..
గంజాయి మత్తులో ఉన్న యువకులు..
హైదరాబాద్ – నాచారం పీఎస్ పరిధిలో మల్లాపూర్లో ఇండియన్ ఆయిల్ పెట్రోల్ బంక్లో పెట్రోల్ పోస్తుండగా నిప్పు పెట్టిన ఆకతాయిలు.. ఒక్కసారిగా చెలరేగిన మంటలు
వెంటనే మంటలను ఆర్పిన పెట్రోల్ బంక్… pic.twitter.com/IVmrhJPfdy
— Telugu Scribe (@TeluguScribe) October 26, 2024
ಇದೇ ವೇಳೆ ಸಿಬ್ಬಂದಿ ಮತ್ತೋರ್ವ ಗ್ರಾಹಕರಿಗೆ ಬಾಟಲಿಯಲ್ಲಿ ಪೆಟ್ರೋಲ್ ಹಾಕಿಸುತ್ತಿದ್ದಾಗ ಏಕಾಏಕಿ ಜೇಬಿನಿಂದ ಲೈಟರ್ ತೆಗೆದು ಚಂದನಕುಮಾರ್ ಹೊತ್ತಿಸಿದರು. ಗಾಬರಿಗೊಂಡ ಸಿಬ್ಬಂದಿ ತಕ್ಷಣ ಎಚ್ಚೆತ್ತ ಬೆಂಕಿ ನೊರೆಯಿಂದ ಬೆಂಕಿ ನಂದಿಸಿದ್ದಾರೆ. ಇದರೊಂದಿಗೆ ಪೆಟ್ರೋಲ್ ಬಂಕ್ ನಲ್ಲಿದ್ದವರೆಲ್ಲ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಚಂದನ್ ಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.