ಚಿಕ್ಕಮಗಳುರು : ಮಕ್ಕಳನ್ನು ಕರೆದುಕೊಂಡು ಶಾಪಿಂಗ್ ಹೋಗುವ ಪೋಷಕರೇ ಎಚ್ಚರ. ದೀಪಾವಳಿ ಹಬ್ಬದ ಶಾಪಿಂಗ್ ಹೋಗಿದ್ದ ವೇಳೆ 2 ವರ್ಷದ ಮಗುವನ್ನು ಮಹಿಳೆ ಅಪಹರಣ ಮಾಡಿದ ಘಟನೆ ನಡೆದಿದೆ.
ಚಿಕ್ಕಮಗಳುರು ಜಿಲ್ಲೆಯ ಕಡೂರು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದ್ದು, ಸೀತಾಪುರ ಗ್ರಾಮದ ರಘುನಾಯಕ್ ಪುತ್ರಿ ಮಾನಸ (2) ಮಗುವನ್ನು ಮಹಿಳೆಯೊಬ್ಬಳು ಅಪಹರಣ ಮಾಡಿದ್ದಾಳೆ.
ಎಣ್ಣೆ ಗಾಣದ ಅಂಗಡಿ ಬಳಿ ನಿಂತಿದ್ದ ಮಗುವನ್ನು ಮಹಿಳೆಯೊಬ್ಬಳು ಸೀರೆಯ ಸೆರೆಗು ಮುಚ್ಚಿಕೊಂಡು ಮಗುವನ್ನು ಅಪಹರಣ ಮಾಡಿದ್ದಾಳೆ. 2 ವರ್ಷದ ಮಗು ಕಿಡ್ನ್ಯಾಪ್ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕಡೂರು ಠಾಣೆಯ ಪೊಲೀಸರು ಮಗು ಪತ್ತೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ.