ಬಳ್ಳಾರಿ : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ನಟ ದರ್ಶನವರು ಬಳ್ಳಾರಿ ಜೈಲಿನಲ್ಲಿದ್ದು, ತೀವ್ರ ಬೆನ್ನು ನೋವಿಗೆ ಒಳಗಾಗಿದ್ದಾರೆ.ಈ ಹಿನ್ನೆಲೆಯಲ್ಲಿ ಕಳೆದ ಮಂಗಳವಾರ ಬಳ್ಳಾರಿ ಆಸ್ಪತ್ರೆಗೆ ದರ್ಶನ್ ಅವರನ್ನು ಪೊಲೀಸರು ಕರೆದುಕೊಂಡು ಹೋಗಿ ಎಂ ಆರ್ ಐ ಹಾಗೂ ಸಿಟಿ ಸ್ಕ್ಯಾನ್ ಮಾಡಿಸಿದರು. ಇದೀಗ ದರ್ಶನ್ ಎಂಆರ್ಐ ಸ್ಕ್ಯಾನ್ ರಿಪೋರ್ಟ್ ಜೈಲಾಧಿಕಾರಿಗಳ ಕೈತಲುಪಿದೆ.
ಮಂಗಳವಾರ ರಾತ್ರಿ ವಿಮ್ಸ್ ಆಸ್ಪತ್ರೆಯ ವೈದ್ಯರು ಎಂ ಆರ್ ಐ ಹಾಗೂ ಸಿಟಿ ಸ್ಕ್ಯಾನ್ ಮಾಡಿದ್ದರು. ಈ ವೇಳೆ ನಟ ದರ್ಶನ್ ಅವರ ಬೆನ್ನಿನ ಹಿಂಭಾಗದಲ್ಲಿ L5 ಹಾಗೂ S1ನಲ್ಲಿ ನೋವು ಕಂಡುಬಂದಿದೆ. ಈ ಕುರಿತು ರಾತ್ರಿಯೆ ಜೈಲಿಗೆ ಬಂದು L5 S1 ಸಮಸ್ಯೆಯ ಬಗ್ಗೆ ವೈದ್ಯರಿಂದ ಮನವರಿಕೆ ಮಾಡಲಾಗಿದೆ.
ವೈದರ ವರದಿಯನ್ನು ಆಧರಿಸಿ ದರ್ಶನ್ ಕುಟುಂಬಸ್ಥರ ಜೊತೆ ಜೈಲಾಧಿಕಾರಿಗಳು ಚರ್ಚಿಸಿದ್ದಾರೆ. ವಿಜಯಲಕ್ಷ್ಮಿ ಜೊತೆಗೆ ಚರ್ಚಿಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ನಿರ್ಧಾರ ಸಾಧ್ಯತೆ ಇದೆ ಎನ್ನಲಾಗಿದೆ. ಹೀಗಾಗಿ ನಾಳೆ ಪತ್ನಿ ವಿಜಯಲಕ್ಷ್ಮಿ, ಬಳ್ಳಾರಿ ಜೈಲಿಗೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
.