ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯಾದ್ಯಂತ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆಯು ನಗರದಲ್ಲಿ ಇನ್ನೂ 4 ದಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಸತತ ಮಳೆಯಿಂದಾಗಿ ಇಲ್ಲಿನ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಪರದಾಟ ನಡೆಸಿದ್ದಾರೆ. ಹಲವು ಏರಿಯಾಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಜನರು ನಿದ್ರೆ ಇಲ್ಲದೇ ರಾತ್ರಿ ಕಳೆದಿದ್ದಾರೆ. ಕೆಂಗೇರಿ ಬಳಿ ಮಳೆ ನೀರಿನಲ್ಲಿ ಅಣ್ಣ, ತಂಗಿ ಇಬ್ಬರು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
Rain turns roads into rivers wide,
Bangalore’s streets become a wild ride. 😭#BangaloreRains #BengaluruRains#Bangalore #Bengaluru #yelahanka pic.twitter.com/8eRo5b3YV2— prita_chaudhary🦋 (@prita7020) October 21, 2024
ತಾಂತ್ರಿಕ ತಜ್ಞರು ಬೆಂಗಳೂರಿನ ಮೂಲಸೌಕರ್ಯಗಳು ಕುಸಿಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ, ವಿಶೇಷವಾಗಿ ಮಳೆ ಬಂದಾಗ. ಒಬ್ಬ ಬಳಕೆದಾರರು ಬರೆದಿದ್ದಾರೆ, “ದಯವಿಟ್ಟು ನೀರಿನಿಂದ ತುಂಬಿರುವ ಪ್ರದೇಶಗಳ ಮೂಲಕ ಹಾದುಹೋಗುವಾಗ ಜಾಗರೂಕರಾಗಿರಿ. ಸುರಕ್ಷತೆಯ ಸಮಸ್ಯೆಗಳಿಗೆ ಎಂದಿಗೂ ಒಡ್ಡಿಕೊಳ್ಳುವುದಕ್ಕಿಂತ ತಡವಾಗಿರುವುದು ಉತ್ತಮ. ಸುರಕ್ಷಿತವಾಗಿರಿ.
Find the road challenge! #BengaluruTraffic #BengaluruRain pic.twitter.com/PuCDy9rmDN
— D.Shivsagar (@SarkarSupremacy) October 21, 2024
ಮಳೆಯ ತೀವ್ರತೆ ಹೆಚ್ಚಾಗಿರುವುದರಿಂದ ಮುಂಜಾಗೃತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಅಕ್ಟೋಬರ್ 21 ರಂದು ಬೆಂಗಳೂರು ನಗರ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಖಾಸಗಿ/ ಅನುದಾನಿತ ಪ್ರಾಥಮಿಕ, ಪ್ರೌಢಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿತ್ತು.
Residents of @63East and @east_bengaluru are fed up with water-logging & deplorable roads. High time authorities take action! We deserve safe roads and proper drainage! @BBMPCOMM @DKShivakumar @INCKarnataka @ArvindLBJP @BJP4Karnataka @BBMPMahadevpura @BbmpEast @BangaloreMirror pic.twitter.com/w6X837sjjG
— Assetz 63* East Residents (@63East) October 21, 2024