ಬೆಂಗಳೂರು : ಸಿ. ಪಿ ಯೋಗೇಶ್ವರ್ ಕಾಂಗ್ರೆಸ್ ನಾಯಕರ ಭೇಟಿ ಕುರಿತು ಹೆಚ್ಡಿ ಕುಮಾರಸ್ವಾಮಿ ಹೇಳಿಕೆ ವಿಚಾರವಾಗಿ, ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಕುಮಾರಸ್ವಾಮಿಗೆ ರಾಜಕಾರಣ ಗೊತ್ತು. ವೈಯಕ್ತಿಕ ರಾಜಕಾರಣ ಒಂದು, ಪಾರ್ಟಿ ರಾಜಕಾರಣನೇ ಒಂದು. ನಂಗೂ ಬೇಕಾದಷ್ಟು ಮಾಹಿತಿ ಇದೆ ಕೆಲವರಿಗೆ ಸಲಹೆ ಕೊಡಬಹುದು, ಅವರಲ್ಲಿ ಗೊಂದಲ ಇರೋದು ಗೊತ್ತಿಲ್ಲ. ಅದು ಜೆಡಿಎಸ್ ಕ್ಷೇತ್ರ, ಬಿಜೆಪಿಗೆ ಕೊಟ್ರೆ ಅವರ ಅಸ್ತಿತ್ವ ಇರಲ್ಲ ಎಂದು ತಿರುಗೇಟು ನೀಡಿದರು.
ಬೆಂಗಳೂರಿನ ಸದಾಶಿವ ನಗರದಲ್ಲಿ ಅವರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿಪಿ ಯೋಗೇಶ್ವರ್ ಭೇಟಿಯ ಕುರಿತು ಧ್ವಜರೋಹಣ ಮಾಡೋ ಸಂದರ್ಭದಲ್ಲಿ ಅವರಿಗೆ ಕೊಡೋ ಗೌರವ ಕೊಡಲಾಗಿದೆ. ಅಷ್ಟು ಬಿಟ್ರೆ ಬೇರೆನೂ ಇಲ್ಲ ಚನ್ನಪಟ್ಟಣದಿಂದ ಕಾಂಗ್ರೆಸ್ ಪಾಳಯದಲ್ಲಿ ನಂದೇ ಮುಖ, ಕ್ಷೇತ್ರದಲ್ಲಿ ಜೆಡಿಎಸ್ ವೀಕ್ ಅಂತ ತಿಳಿದರೆ ನನ್ನಷ್ಟು ಮೂರ್ಖ ಯಾರೂ ಇಲ್ಲ. ಆದರೆ ಕುಮಾರಸ್ವಾಮಿ ಇಷ್ಟು ವೀಕ್ ಅಂತಾ ಭಾವಿಸಿರಲಿಲ್ಲ.
ಎಲ್ಲರ ಹತ್ತಿರ ಮಾತನಾಡಿ ಕೈ ಕಟ್ಟಿ, ಬಿಜೆಪಿ ಅವರನ್ನು ರಿಕ್ವೆಸ್ಟ್ ಮಾಡಿ, ಅವರೊಬ್ಬ ಸೆಂಟ್ರಲ್ ಮಿನಿಸ್ಟರ್. ಇಷ್ಟೊಂದು ವೀಕ್ ಅಂತಾ ಗೊತ್ತಿರಲಿಲ್ಲ ಎಂದು ವ್ಯಂಗ್ಯವಾಡಿದರು.ನಾನು ಎನ್ಡಿಎ ವಿಚಾರ, ಯೋಗೇಶ್ವರ್ ವಿಚಾರಕ್ಕೆ ಹೋಗಲ್ಲ. ಕುಮಾರಸ್ವಾಮಿ ಏನು ಮಾತನಾಡ್ತಾರೆ, ಅವರ ಮಾತಿಗೆ ಅವರೇ ಸ್ಟ್ಯಾಂಡ್ ಕೊಡಲ್ಲ. ಅವರಿಗೆಲ್ಲ ನಾನು ಉತ್ತರ ಕೊಡುವುದಕ್ಕೆ ಹೋಗಲ್ಲ. ಅದು ಅವರ ಡ್ಯೂಟಿ ಅಥವಾ ಪಕ್ಷದ ತಂತ್ರ ಇರಬಹುದು. ಪಬ್ಲಿಕ್ ಅಲ್ಲಿ ಒಂದು ಮಾತನಾಡ್ತಾರೆ, ಆಂತರಿಕವಾಗಿ ಒಂದು ಮಾತನಾಡ್ತಾರೆ ಎಂದು ಟೀಕಿಸಿದರು.