ಬೆಂಗಳೂರಿಗರ ದೈನಂದಿನ ಒಡನಾಡಿಯಾಗಿರುವ ‘ನಮ್ಮ ಮೆಟ್ರೋ’ದ ಮೊದಲ ಕಾರ್ಯಾಚರಣೆ ಆರಂಭವಾಗಿ ಇಂದಿಗೆ 13 ವರ್ಷಗಳು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಮೆಟ್ರೊ ಸಿಬ್ಬಂದಿಗೆ ಧನ್ಯವಾದ ಅರ್ಪಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ, ಇಂಧನ ಉಳಿಕೆಗೆ ಉತ್ತಮ ಮಾರ್ಗವಾಗಿ, ಎಲ್ಲಾ ರೀತಿಯ ಮಾಲಿನ್ಯ ತಡೆಗಟ್ಟುವಲ್ಲಿ ಮೆಟ್ರೋದ ಕೊಡುಗೆ ಪ್ರಮುಖವಾದದ್ದು. ‘ನಮ್ಮ ಮೆಟ್ರೋ’ದ 13ನೇ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ಬೆಂಗಳೂರಿನ ಜನತೆಗೆ ಹಾಗೂ ನಮ್ಮ ಮೆಟ್ರೋದ ಅನನ್ಯ ಸೇವೆಯ ಹಿಂದಿರುವ ಎಲ್ಲಾ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರಿಗರ ಸಂಚಾರ ಜೀವನಾಡಿ, ತನ್ನ ಉತ್ಕೃಷ್ಟ ದರ್ಜೆಯ ಸೇವೆ ಮತ್ತು ಸೌಲಭ್ಯಕ್ಕೆ ಹೆಸರುವಾಸಿಯಾಗಿರುವ ನಮ್ಮ ಹೆಮ್ಮೆಯ “ನಮ್ಮ ಮೆಟ್ರೋ ” 13 ಯಶಸ್ವಿ ವಸಂತಗಳನ್ನು ಪೂರೈಸಿದೆ. ನಗರದ ಕೊನೆಯ ಮೈಲಿವರೆಗೂ ಸಂಪರ್ಕ ಕಲ್ಪಿಸುವುದು ನಮ್ಮ ಗುರಿ, ಈ ನಿಟ್ಟಿನಲ್ಲಿ ಮೆಟ್ರೋ ಜಾಲ ವಿಸ್ತರಣೆಗೆ ನಮ್ಮ ಸರ್ಕಾರ ಪೂರ್ಣ ಬೆಂಬಲ ನೀಡಲಿದೆ.
ನಗರದ ಸಂಚಾರ ದಟ್ಟಣೆ ಹೆಚ್ಚುತ್ತಿರುವ ಈ ದಿನಮಾನದಲ್ಲಿ ನಮ್ಮ ಮೆಟ್ರೋ ಸೇವೆ ಎಂದಿಗಿಂತ ಇಂದು ಹೆಚ್ಚು ಪ್ರಸ್ತುತ. ಸಾರ್ವಜನಿಕರು ಕೂಡ ತಮ್ಮ ಓಡಾಟಗಳಿಗೆ ಸಮೂಹ ಸಾರಿಗೆಯಾದ ಮೆಟ್ರೋವನ್ನು ಹೆಚ್ಚು ಬಳಸಬೇಕು ಎಂದು ಇದೇ ವೇಳೆ ಮನವಿ ಮಾಡಿದ್ದಾರೆ.
ಬೆಂಗಳೂರಿಗರ ಸಂಚಾರ ಜೀವನಾಡಿ, ತನ್ನ ಉತ್ಕೃಷ್ಟ ದರ್ಜೆಯ ಸೇವೆ ಮತ್ತು ಸೌಲಭ್ಯಕ್ಕೆ ಹೆಸರುವಾಸಿಯಾಗಿರುವ ನಮ್ಮ ಹೆಮ್ಮೆಯ "ನಮ್ಮ ಮೆಟ್ರೋ " 13 ಯಶಸ್ವಿ ವಸಂತಗಳನ್ನು ಪೂರೈಸಿದೆ.
ನಗರದ ಕೊನೆಯ ಮೈಲಿವರೆಗೂ ಸಂಪರ್ಕ ಕಲ್ಪಿಸುವುದು ನಮ್ಮ ಗುರಿ, ಈ ನಿಟ್ಟಿನಲ್ಲಿ ಮೆಟ್ರೋ ಜಾಲ ವಿಸ್ತರಣೆಗೆ ನಮ್ಮ ಸರ್ಕಾರ ಪೂರ್ಣ ಬೆಂಬಲ ನೀಡಲಿದೆ.ನಗರದ ಸಂಚಾರ… pic.twitter.com/VORH7AZ3ii
— Siddaramaiah (@siddaramaiah) October 20, 2024