Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪೆನ್ಸಿಲ್ವೇನಿಯಾದಲ್ಲಿ ಭೀಕರ ಗುಂಡಿನ ದಾಳಿ: ಮೂವರು ಪೊಲೀಸ್ ಸಾವು, ಇಬ್ಬರಿಗೆ ಗಾಯ

18/09/2025 6:45 AM

ರಾಜ್ಯದಲ್ಲಿ `ಜಾತಿ ಗಣತಿ’ ಸಮೀಕ್ಷಾ ಕಾರ್ಯಕ್ಕೆ ಆಶಾ ಕಾರ್ಯಕರ್ತೆಯರ ಸೇವೆ ಪಡೆಯಲು ಸರ್ಕಾರ ಆದೇಶ

18/09/2025 6:40 AM

ಜಾಗತಿಕ ಅಯ್ಯಪ್ಪ ಸಂಗಮಕ್ಕೆ ಅಡ್ಡಿಯಿಲ್ಲ: ಕೇರಳ ಹೈಕೋರ್ಟ್ ಆದೇಶದಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ನಿರಾಕರಣೆ

18/09/2025 6:39 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಮುಡಾ ಕೇಸ್‌’ನಲ್ಲಿ ನಿಜವಾದ ಕಳ್ಳ ಸಚಿವ ಬೈರತಿ ಸುರೇಶ್: ಛಲವಾದಿ ನಾರಾಯಣಸ್ವಾಮಿ ವಾಗ್ಧಾಳಿ
KARNATAKA

‘ಮುಡಾ ಕೇಸ್‌’ನಲ್ಲಿ ನಿಜವಾದ ಕಳ್ಳ ಸಚಿವ ಬೈರತಿ ಸುರೇಶ್: ಛಲವಾದಿ ನಾರಾಯಣಸ್ವಾಮಿ ವಾಗ್ಧಾಳಿ

By kannadanewsnow0919/10/2024 3:53 PM

ಬೆಂಗಳೂರು: ಮೈಸೂರು ಮುಡಾ ದಾಖಲೆಗಳನ್ನು ಕಾರು ಮತ್ತು ಹೆಲಿಕಾಪ್ಟರ್‍ನಲ್ಲಿ ತಂದ ಸಚಿವ ಬೈರತಿ ಸುರೇಶ್ ನಿಜವಾದ ಕಳ್ಳ. ಕಾಂಗ್ರೆಸ್‍ನವರು ನಾಲಿಗೆ ಬಿಗಿಹಿಡಿದು ಮಾತನಾಡಬೇಕು. ನಾನು ಕಳ್ಳನಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಎಚ್ಚರಿಸಿದರು.

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ವೈಟ್ನರ್ ಹಾಕಿದ್ದು ಯಾರು? ನೀವೇ ಆ ಇಲಾಖೆಗೆ ಸಚಿವರು; ಇ.ಡಿ. ಕೇಳಿದ ತಕ್ಷಣ ನೀವು ದಾಖಲೆ ಕೊಡಬೇಕಿತ್ತು. 3 ಸಾರಿ ನೋಟಿಸ್ ಬಂದರೂ ಯಾಕೆ ದಾಖಲೆ ಕೊಟ್ಟಿಲ್ಲ? ಅಲ್ಲಿಗೆ ಕದ್ದು ಓಡಾಡುವವರು ನೀವಾ ನಾವಾ ಎಂದು ಪ್ರಶ್ನಿಸಿದರು.

ಸಚಿವ ಸುರೇಶ್ ಅವರೇ ಮುಖ್ಯಮಂತ್ರಿಗಳನ್ನೂ ಸಿಕ್ಕಿಹಾಕಿಸಿದ್ದಾರೆ. ನೀವು ಮುಖ್ಯಮಂತ್ರಿಗಳ ಮಾನಸಪುತ್ರ ಎಂದ ಅವರು, ಮಾನ್ಯ ಕುಮಾರಸ್ವಾಮಿ ಅವರ ಬಳಿ ಕಡತ ಇರಬಹುದು ಎಂದು ಸುರೇಶ್ ಹೇಳಿದ್ದು, ಹಾಗಿದ್ದರೆ ಅವರೇನು ಸಂಬಂಧಿಸಿದ ಇಲಾಖೆ ಸಚಿವರೇ? ಅವರ ಹತ್ತಿರ ಯಾಕೆ ಇರುತ್ತದೆ ಎಂದು ಪ್ರಶ್ನೆಯನ್ನು ಮುಂದಿಟ್ಟರು.

ಛಲವಾದಿ ನಾರಾಯಣಸ್ವಾಮಿ ಫೈಲ್ ಕದ್ದುಕೊಂಡು ಹೋಗಿರಬೇಕು ಎಂದಿದ್ದಾರೆ. ಮಿಸ್ಟರ್ ಸುರೇಶ್ ಅವರೇ, ನೀವು ಸಚಿವರಾಗಲೂ ಯೋಗ್ಯರಲ್ಲ. ನಾನೇನಾದರೂ ಕದ್ದುಕೊಂಡು ಹೋಗಿದ್ದರೆ ದೂರು ನೀಡಬೇಕಿತ್ತಲ್ಲವೇ? ನಾಲಿಗೆ ಹೇಗಾದರೂ ಹೋಗುತ್ತದೆಂದು ಹೇಳಿಕೆ ಕೊಡುವುದನ್ನು ನಿಲ್ಲಿಸಿ ಎಂದು ಆಗ್ರಹಿಸಿದರು.

ಸಂದರ್ಭ ಬಂದಾಗ ನಮ್ಮ ಜನಾಂಗದಿಂದ ಉತ್ತರ..

ತಾವೊಬ್ಬ ಸಚಿವರು; ನಿಮ್ಮ ಬಗ್ಗೆ ಗೌರವ ಇದೆ. ಆದರೆ, ನಿಮ್ಮ ಮಾತುಗಳ ಬಗ್ಗೆ ಗೌರವ ಇಲ್ಲ. ನೀವು ನನ್ನನ್ನು ಕಳ್ಳನನ್ನಾಗಿ ಮಾಡಿದ್ದೀರಿ. ಕುಮಾರಸ್ವಾಮಿಯವರ ವಿಚಾರ ಬಂದಾಗ ಅವರ ಮನೆಯಲ್ಲಿ ಇರಬಹುದು ಎಂದಿದ್ದೀರಿ. ಅವರನ್ನು ಕಳ್ಳ ಎಂದೇಕೆ ಹೇಳಿಲ್ಲ? ಅವರು ತಿರುಗಿಸಿ ನಿಮಗೆ ಉತ್ತರ ಕೊಡುತ್ತಾರೆಂದು ಅಲ್ಲವೇ? ನಾನು ದಲಿತ ಸಮುದಾಯದವನಾದ ಕಾರಣ ಏನೂ ಮಾಡಲಾರರು ಎಂಬ ಭಾವನೆ ನಿಮ್ಮದು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು.

ನಾವು ಶಕ್ತಿಶಾಲಿಗಳಲ್ಲದ ಕಾರಣ ನೇರಾನೇರವಾಗಿ ಮೇಲೆ ಬೀಳುವುದಿಲ್ಲ; ಆದರೆ, ಸಂದರ್ಭ ಬಂದಾಗ ನಮ್ಮ ಜನಾಂಗಕ್ಕೆ ಉತ್ತರಿಸಲು ಸಾಧ್ಯ ಇದೆ ಎಂದು ತಿಳಿಸಿದರು. ತಪ್ಪು ಮಾಡಿದ ನೀವು ಕಳ್ಳ ಎಂದು ಆರೋಪಿಸಿದರು.

ನಿಮಗೂ ಒಂದು ಚಟ; ನಾರಾಯಣಸ್ವಾಮಿ ಬಿರಿಯಾನಿ ಅಂಗಡಿ ಇಟ್ಟುಕೊಂಡಿದ್ದಾನೆ ಎನ್ನುತ್ತೀರಿ. ಹಾರಿಕೆ ಉತ್ತರ ಕೊಡುವುದು, ಸಂಬಂಧವಿಲ್ಲದ ಪ್ರಶ್ನೆ ಕೇಳುವುದು, ಆಪಾದನೆ ಮಾಡುವುದು ಕಾಂಗ್ರೆಸ್ಸಿನವರ ಚಟ ಎಂದು ಆಕ್ಷೇಪಿಸಿದರು. ಹೇಳಿ ಕೇಳಿ ಛಲವಾದಿ ಇದ್ದೇನೆ. ನನ್ನನ್ನು ಕೆಣಕಿದರೆ ಸುಮ್ಮನಿರೋದಿಲ್ಲ ಎಂದು ಸವಾಲು ಹಾಕಿದರು.

ಜಗ್ಗೋನೂ ಅಲ್ಲ; ಬಗ್ಗೋನಲ್ಲ ಎಂದ ನೀವು ಸೈಟ್‍ಗಳನ್ನು ಯಾಕೆ ವಾಪಸ್ ಕೊಟ್ಟಿದ್ದೀರಿ? 5 ಎಕರೆ ಭೂಮಿ ರಾತ್ರೋರಾತ್ರಿ ವಾಪಸ್ ಮಾಡಿದ್ದು ಯಾಕೆ? ನಾವು ಬಿಜೆಪಿಯವರು ಹೋರಾಟ ಮಾಡುತ್ತೇವೆ. ನೀವು ಜಗ್ಗಲೂ ಬೇಕು; ಬಗ್ಗಲೂ ಬೇಕು ಎಂದು ಪ್ರಿಯಾಂಕ್ ಖರ್ಗೆಯವರ ಮಾತಿಗೆ ಪ್ರತ್ಯುತ್ತರ ಕೊಟ್ಟರು.

ತುಮಕೂರಿನಲ್ಲಿ ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶ ನಿರ್ಮಾಣ: ಗೃಹ ಸಚಿವ ಡಾ.ಜಿ ಪರಮೇಶ್ವರ್

GOOD NEWS: ಬೆಂಗಳೂರಿನ ‘ಆಸ್ತಿ ಖರೀದಿ’ಸುವವರಿಗೆ ಗುಡ್ ನ್ಯೂಸ್: ಇನ್ಮುಂದೆ ನೋಂದಣಿಯಾದ 2 ದಿನದಲ್ಲಿ ಸಿಗಲಿದೆ ‘ಇ-ಖಾತಾ’

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ `ಜಾತಿ ಗಣತಿ’ ಸಮೀಕ್ಷಾ ಕಾರ್ಯಕ್ಕೆ ಆಶಾ ಕಾರ್ಯಕರ್ತೆಯರ ಸೇವೆ ಪಡೆಯಲು ಸರ್ಕಾರ ಆದೇಶ

18/09/2025 6:40 AM1 Min Read

ರಾಜ್ಯ ಸರ್ಕಾರದಿಂದ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ : `ಆರೋಗ್ಯ ಸೇವೆ’ ವಿಸ್ತರಿಸಿ ಆದೇಶ

18/09/2025 6:34 AM1 Min Read

ನಿರುದ್ಯೋಗಿ ಮಹಿಳೆಯರಿಗೆ ಗುಡ್ ನ್ಯೂಸ್ : ಊಟ, ವಸತಿ ಸೌಲಭ್ಯದೊಂದಿಗೆ ಉಚಿತ ಟೈಲರಿಂಗ್ ತರಬೇತಿಗೆ ಅರ್ಜಿ ಆಹ್ವಾನ

18/09/2025 6:26 AM1 Min Read
Recent News

ಪೆನ್ಸಿಲ್ವೇನಿಯಾದಲ್ಲಿ ಭೀಕರ ಗುಂಡಿನ ದಾಳಿ: ಮೂವರು ಪೊಲೀಸ್ ಸಾವು, ಇಬ್ಬರಿಗೆ ಗಾಯ

18/09/2025 6:45 AM

ರಾಜ್ಯದಲ್ಲಿ `ಜಾತಿ ಗಣತಿ’ ಸಮೀಕ್ಷಾ ಕಾರ್ಯಕ್ಕೆ ಆಶಾ ಕಾರ್ಯಕರ್ತೆಯರ ಸೇವೆ ಪಡೆಯಲು ಸರ್ಕಾರ ಆದೇಶ

18/09/2025 6:40 AM

ಜಾಗತಿಕ ಅಯ್ಯಪ್ಪ ಸಂಗಮಕ್ಕೆ ಅಡ್ಡಿಯಿಲ್ಲ: ಕೇರಳ ಹೈಕೋರ್ಟ್ ಆದೇಶದಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ನಿರಾಕರಣೆ

18/09/2025 6:39 AM

ರಾಜ್ಯ ಸರ್ಕಾರದಿಂದ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ : `ಆರೋಗ್ಯ ಸೇವೆ’ ವಿಸ್ತರಿಸಿ ಆದೇಶ

18/09/2025 6:34 AM
State News
KARNATAKA

ರಾಜ್ಯದಲ್ಲಿ `ಜಾತಿ ಗಣತಿ’ ಸಮೀಕ್ಷಾ ಕಾರ್ಯಕ್ಕೆ ಆಶಾ ಕಾರ್ಯಕರ್ತೆಯರ ಸೇವೆ ಪಡೆಯಲು ಸರ್ಕಾರ ಆದೇಶ

By kannadanewsnow5718/09/2025 6:40 AM KARNATAKA 1 Min Read

ಬೆಂಗಳೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಕುರಿತು ಕೈಗೊಳ್ಳುವ…

ರಾಜ್ಯ ಸರ್ಕಾರದಿಂದ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್ : `ಆರೋಗ್ಯ ಸೇವೆ’ ವಿಸ್ತರಿಸಿ ಆದೇಶ

18/09/2025 6:34 AM

ನಿರುದ್ಯೋಗಿ ಮಹಿಳೆಯರಿಗೆ ಗುಡ್ ನ್ಯೂಸ್ : ಊಟ, ವಸತಿ ಸೌಲಭ್ಯದೊಂದಿಗೆ ಉಚಿತ ಟೈಲರಿಂಗ್ ತರಬೇತಿಗೆ ಅರ್ಜಿ ಆಹ್ವಾನ

18/09/2025 6:26 AM

ಕಲ್ಯಾಣ ಕರ್ನಾಟಕ ಜನತೆಗೆ ಗುಡ್ ನ್ಯೂಸ್: ಪ್ರತ್ಯೇಕ ಸಚಿವಾಲಯ ಸ್ಥಾಪನೆಗೆ ಸಂಪುಟ ಅನುಮೋದನೆ

18/09/2025 6:24 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.