ನವದೆಹಲಿ: ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರ ಭಾಗಿಯಾಗಿದೆ ಎಂದು ಆರೋಪಿಸಿದಾಗ ತಮ್ಮ ಸರ್ಕಾರದ ಬಳಿ ಬಲವಾದ ಪುರಾವೆಗಳಿಲ್ಲ ಎಂದು ಪ್ರಧಾನಿ ಜಸ್ಟಿನ್ ಟ್ರುಡೋ ಒಪ್ಪಿಕೊಂಡಿದ್ದಾರೆ
ಒಟ್ಟಾವಾದಲ್ಲಿ ಫೆಡರಲ್ ಚುನಾವಣಾ ಪ್ರಕ್ರಿಯೆಗಳು ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳಲ್ಲಿ ವಿದೇಶಿ ಹಸ್ತಕ್ಷೇಪದ ಬಗ್ಗೆ ಸಾರ್ವಜನಿಕ ವಿಚಾರಣೆಯ ಮುಂದೆ ಸಾಕ್ಷ್ಯ ನುಡಿಯುವಾಗ ಟ್ರುಡೊ ಈ ವಿಷಯವನ್ನು ಒಪ್ಪಿಕೊಂಡಿದ್ದಾರೆ.
ಭಾರತವು ನಿಜ್ಜರ್ ಅವರನ್ನು ಕೊಂದಿದೆ ಎಂದು ಸಾರ್ವಜನಿಕವಾಗಿ ಆರೋಪಿಸುವ ಮೊದಲು ಕೆನಡಾಕ್ಕೆ ಯಾವುದೇ ಪುರಾವೆಗಳಿಲ್ಲ ಮತ್ತು ಗುಪ್ತಚರ ಮಾಹಿತಿಯನ್ನು ಮಾತ್ರ ಒದಗಿಸಿದೆ ಎಂದು ಟ್ರುಡೊ ಹೇಳಿದರು. ಕೆನಡಾದಲ್ಲಿ ಖಲಿಸ್ತಾನ್ ಪರ ಚಳವಳಿಯ ಸದಸ್ಯರನ್ನು ಗುರಿಯಾಗಿಸಲು ಭಾರತೀಯ ರಾಜತಾಂತ್ರಿಕರು ಮಾಹಿತಿ ಸಂಗ್ರಹಿಸುವಲ್ಲಿ ಮತ್ತು ಕ್ರಿಮಿನಲ್ ಗ್ಯಾಂಗ್ಗಳನ್ನು ಬಳಸುವಲ್ಲಿ ಭಾಗಿಯಾಗಿದ್ದಾರೆ ಎಂಬ ಇತ್ತೀಚಿನ ಆರೋಪದ ನಂತರ ಅವರು ಸಮಿತಿಯ ಮುಂದೆ ಹಾಜರಾದರು.
“ಕೆನಡಾ ಭಾರತವನ್ನು ಸಹಕರಿಸುವಂತೆ ಕೇಳಿದೆ. ಅವರು (ಭಾರತ) ಕೇಳಿದ್ದು ಪುರಾವೆಗಾಗಿ. ಹೆಚ್ಚಿನ ತನಿಖೆ ನಡೆಸುವಂತೆ ಮತ್ತು ನಮ್ಮೊಂದಿಗೆ ಸಹಕರಿಸುವಂತೆ ನಾವು ಭಾರತೀಯ ಭದ್ರತಾ ಸಂಸ್ಥೆಗಳನ್ನು ಕೇಳಿದ್ದೇವೆ. ಏಕೆಂದರೆ ಆ ಸಮಯದಲ್ಲಿ ನಮ್ಮ ಬಳಿ (ಕೆನಡಾ) ಇದ್ದದ್ದು ಗುಪ್ತಚರ ಮಾತ್ರ” ಎಂದು ಟ್ರುಡೊ ಹೇಳಿದರು.