ಬೆಂಗಳೂರು : ಪ್ರವಾಸಿಗರನ್ನು ಆಕರ್ಷಿಸಲು ಕೈಗೊಳ್ಳಲಾಗುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ನಿಲ್ಲಿಸದೇ ಹೋದಲ್ಲಿ ವಯನಾಡಿನಲ್ಲಾದ ಭೂ-ಕುಸಿತದಂತಹ ದುರ್ಘಟನೆ ನಂದಿ ಬೆಟ್ಟದಲ್ಲೂ ನಡೆಯುವ ಸಂಭವವಿದೆ ಎಂದು ಪರಿಸರವಾದಿಗಳು ಮತ್ತು ಭೂ ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದು, ಈ ಕುರಿತಂತೆ ಅವರು ರಾಜ್ಯ ಸರ್ಕಾರವನ್ನು ಕೂಡ ಎಚ್ಚರಿಸಿದ್ದಾರೆ ಎಂದು ತಿಳಿದುಬಂದಿದೆ.
ಹೌದು ನಂದಿ ಬೆಟ್ಟದಲ್ಲಿ ಈಗಾಗಲೇ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ.ಇದೀಗ ರೋಪ್ ವೇ ಸೇರಿದಂತೆ ಇನ್ನಿತರ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಅದಕ್ಕಾಗಿ ಯಂತ್ರಗಳನ್ನು ಬಳಸಲಾಗುತ್ತಿದೆ. ಇದರಿಂದ ನೈಸರ್ಗಿ ಕತೆಗೆ ಧಕ್ಕೆಯಾಗುತ್ತಿದೆ. ಇದುತೀವ್ರ ಆಪತ್ತು ತಂದೊಡ್ಡುವ ಸಾಧ್ಯತೆಗಳಿದ್ದು, ವಯನಾ ಡಿನಲ್ಲಾದಂತೆ ಭೂಕುಸಿತ ದಂತಹ ದುರಂತ ಸಂಭವಿಸುವ ಸಾಧ್ಯತೆಗಳಿವೆ. ಹೀಗಾಗಿ ಸರ್ಕಾರ ಈ ಬಗ್ಗೆ ಎಚ್ಚರವಹಿಸಬೇಕು ಎಂದರು.
ಹಿರಿಯ ಪರಿಸರ ತಜ್ಞ ಡಾ. ಎ.ಎನ್. ಯಲ್ಲಪ್ಪ ರೆಡ್ಡಿ ಮಾತನಾಡಿ, ನಂದಿ ಬೆಟ್ಟವನ್ನು ಈಗಿರುವ ರೀತಿಯಲ್ಲೇ ಸಂರಕ್ಷಿಸಬೇಕು. ಪರಿಸರಕ್ಕೆ ಮಾರಕವಾಗುವಂತಹ ಕಾಮ ಗಾರಿ ನಿಲ್ಲಿಸಬೇಕು. ಪಂಚ ನದಿಗಳಾದ ಅರ್ಕಾ ವತಿ, ಪಾಲಾರ್, ಪೆನ್ನಾರ್, ದಕ್ಷಿಣ ಪೆನ್ನಾರ್ ಮತ್ತು ಚಿತ್ರಾವತಿ ನದಿಗಳ ಉಗಮ ಸ್ಥಾನದ ಜಲಮೂಲ ಪುನಶ್ಚ ತನಗೊಳಿಸಬೇಕು ಎಂದರು.
ನಂದಿ ಹಿಲ್ಸ್ ಅಧ್ಯಯನ ಅವಧಿ ಬಿಡುಗಡೆ ಮಾಡಿದ ಪರಿಸರ ತಜ್ಞರು, ಯಾವ ಇಲಾಖೆಯಿಂದಲೂ ಸ್ಪಂದನೆ ಇಲ್ಲ ನಂದಿ ಬೆಟ್ಟದ ಸ್ಥಿತಿ ಕುರಿತಂತೆ ಈಗಾಗಲೇ ಹಲವು ಅಧ್ಯಯನ ಕೈಗೊಳ್ಳಲಾಗಿದೆ. ಬೆಟ್ಟದಲ್ಲಿ ಪ್ರವಾಸಿಗರ ಸಂಖ್ಯೆ ವಿಪರೀತ ಏರಿಕೆಯಾಗುತ್ತಿದ್ದು, ರೆಸಾರ್ಟ್ ಸೇರಿದಂತೆ ಇನ್ನಿತರ ಚಟುವಟಿಕೆಗಳು ಹೆಚ್ಚಾಗಿವೆ.
ಇದರಿಂದ ಬೆಟ್ಟದ ಪ್ರಕೃತಿ ಸೊಬಗಿನ ಮೇಲೆ ಒತ್ತಡ ಹೆಚ್ಚುತ್ತಿದೆ. ನಂದಿ ಬೆಟ್ಟ ಉಳಿಸಿ ಎಂದು ವಿವಿಧ 11 ಇಲಾಖೆಗಳಿಗೆ ಈಗಾಗಲೇ ವರದಿ ನೀಡಲಾಗಿದೆ. ಆದರೆ, ಯಾವ ಇಲಾಖೆಯಿಂದಲೂ ಸ್ಪಂದನೆ ದೊರೆತಿಲ್ಲ. ಸರ್ಕಾರ ಭೂಕ ಕುಸಿತದ ಅಪಾಯದ ಬಗ್ಗೆ ತಿಳಿದುಕೊಳ್ಳಬೇಕು ಹಾಗೂ ಬೆಟ್ಟದ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಹೇಳಿದರು.