ಪುಣೆ: ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣದ ಬಾಲಾಪರಾಧಿಗೆ ಜಾಮೀನು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರವು ಬಾಲಾಪರಾಧಿ ನ್ಯಾಯ ಮಂಡಳಿಯ (ಜೆಜೆಬಿ) ಇಬ್ಬರು ಸದಸ್ಯರ ಸೇವೆಯನ್ನು ವಜಾಗೊಳಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ
ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ (ಡಬ್ಲ್ಯುಸಿಡಿ) ಇಲಾಖೆಯ ತನಿಖಾ ಸಮಿತಿಯು ಇಬ್ಬರು ಸದಸ್ಯರಾದ ಎಲ್ ಎನ್ ದಾನ್ವಾಡೆ ಮತ್ತು ಕವಿತಾ ಥೋರಟ್ ವಿರುದ್ಧ “ಕಾರ್ಯವಿಧಾನದ ಲೋಪಗಳು, ದುರ್ನಡತೆ ಮತ್ತು ನಿಯಮಗಳನ್ನು ಪಾಲಿಸದ” ಆರೋಪದ ಮೇಲೆ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಿತ್ತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಯುಕ್ತ ಪ್ರಶಾಂತ್ ನಾರ್ನವರ್ ಮಾತನಾಡಿ, “ನಾನು ತನಿಖಾ ಸಮಿತಿಯ ವರದಿಯನ್ನು ರಾಜ್ಯ ಸರ್ಕಾರಕ್ಕೆ ನೀಡಿದ್ದೇನೆ ಮತ್ತು ಇಬ್ಬರು ಸದಸ್ಯರ ನೇಮಕಾತಿಯನ್ನು ರದ್ದುಗೊಳಿಸಬೇಕು ಎಂದು ಶಿಫಾರಸು ಮಾಡಿದ್ದೇನೆ” ಎಂದು ಹೇಳಿದರು.
“ವಜಾಕ್ಕೆ ಶಿಫಾರಸು ಮಾಡಿದ ವರದಿಯನ್ನು ಜುಲೈನಲ್ಲಿ ರಾಜ್ಯ ಸರ್ಕಾರಕ್ಕೆ ಕಳುಹಿಸಲಾಗಿದೆ. ಬಾಲಾಪರಾಧಿ ನ್ಯಾಯ ಕಾಯ್ದೆಯಡಿ ಒದಗಿಸಲಾದ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದು ಕಂಡುಬಂದಿದ್ದರಿಂದ ರಾಜ್ಯ ಸರ್ಕಾರ ಮಂಗಳವಾರ ಇಬ್ಬರೂ ಸದಸ್ಯರ ನೇಮಕಾತಿಯನ್ನು ರದ್ದುಗೊಳಿಸಿದೆ” ಎಂದು ಅವರು ಹೇಳಿದರು.
ಅಕ್ಟೋಬರ್ 8 ರಂದು ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆಯಲ್ಲಿ, ವಿಚಾರಣೆಯಲ್ಲಿ, ದನ್ವಾಡೆ ಮತ್ತು ಥೋರಟ್ ಅವರು ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ -2015 ರ ಅಡಿಯಲ್ಲಿ ನೀಡಲಾದ “ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆ” ಎಂದು ಕಂಡುಬಂದಿದೆ ಮತ್ತು ಅವರನ್ನು ವಜಾಗೊಳಿಸುವುದು ಸೂಕ್ತವೆಂದು ಸರ್ಕಾರ ಪರಿಗಣಿಸುತ್ತದೆ