ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಈಗಾಗಲೇ ಇಡಿ ಹಾಗೂ ಲೋಕಾಯುಕ್ತ ತನಿಖೆಯನ್ನು ಆರಂಭಿಸಿದ್ದು ಅಲ್ಲದೆ, ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಮುಡಾದ 14 ಸೈಟ್ಗಳನ್ನು ಸಹ ವಾಪಸ್ ನೀಡಿದ್ದಾರೆ. ಈ ವಿಚಾರವಾಗಿ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿದ್ದು, ಮುಡಾ ಸೈಟ್ ಹಂಚಿಕೆಯಾಗಿದ್ದು ಬಿಜೆಪಿ ಕಾಲದಲ್ಲಿ ಆಗ ಅವರು ಏನು ಲಡ್ಡು ತಿನ್ನುತ್ತಿದ್ದರ? ಎಂದು ಸಚಿವ ಜಮೀರ್ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಕೇಸ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರವಿಲ್ಲ ಅದು ಬಿಜೆಪಿ ಕಾಲದಲ್ಲಿ ನಡೆದಿರುವಂತದ್ದು. ಸೈಡ್ ಕೊಟ್ಟಿರುವುದು ಬಿಜೆಪಿ ಕಾಲದಲ್ಲಿ ಆಗ ನಮ್ಮ ಸರ್ಕಾರ ಇರಲಿಲ್ಲ. ಆಗ ಬಿಜೆಪಿ ನಾಯಕರು ಏನು ಮಾಡುತ್ತಿದ್ದರು ಲಡ್ಡು ತಿನ್ನುತ್ತಿದ್ದಾರಾ? ಕೋರ್ಟ್ ನ ತೀರ್ಪು ಸ್ವಾಗತಿಸುವೆ. ತನಿಖೆ ಬಳಿಕ ಸತ್ಯಾಂಶ ಗೊತ್ತಾಗುತ್ತದೆ ಎಂದರು.
ಇನ್ನು ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬಾರದು ಎಂದು ಜಿ ಟಿ ದೇವೇಗೌಡ ಹೇಳಿಕೆಗೆ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯೆ ನೀಡಿ, ಜಿ ಟಿ ದೇವೇಗೌಡರಿಗೆ ಸತ್ಯ ಗೊತ್ತಿದೆ. ಅವರು ಮೈಸೂರಿನಲ್ಲಿ ಇದ್ದವರು ಹಾಗಾಗಿ ಅವರಿಗೆ ಎಲ್ಲಾ ಗೊತ್ತಿದೆ. ಶಾಸಕ ಜಿ ಟಿ ದೇವೇಗೌಡರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇಡಿ ಸಿಬಿಐ ಯಾವುದೇ ಬರಲಿ ಆತಂಕ ಇಲ್ಲ. ನೋಡಿ ಟಗರು ಹೇಗಿದೆ ಅಂತ. ಮುಖದ ಮೇಲೆ ಭಯ ಕಾಣುತ್ತಿದೆಯ? ಯಾವತ್ತಿದ್ದರೂ ಟಗರು ಟಗರೆ ಎಂದು ವಸತಿ ಸಚಿವ ಜಮೀರ್ ಅಹ್ಮದ್ ತಿಳಿಸಿದರು.