ಮೈಸೂರು : ಈ ಬಾರಿ ಮೈಸೂರು ದಸರಾಗೆ ಈಗಾಗಲೇ ಸಕಲ ಸಿದ್ಧತೆಗಳು ನಡೆದಿದ್ದು, ಎಲ್ಲಾ ಹಂತದ ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ. ಇದೀಗ ಇಂದು ದಸರಾ ಮಹೋತ್ಸವದ ವೇಳೆ ಭಾಗವಹಿಸುವ ಆನೆಗಳಿಗೆ ಕುಶಾಲು ತೋಪು ಸಿಡಿಸಿ ತಾಲಿಮು ನಡೆಸುವ ವೇಳೆ ಭಾರಿ ಅನಾಹುತ ಒಂದು ನಡೆದಿದೆ.
ಹೌದು ವಿಶ್ವವಿಖ್ಯಾತ ಮೈಸೂರು ದಸರಾ ಗಜಪಡೆಗೆ ಕುಶಾಲತೋಪು ಸಿಡಿಸಿ ತಾಲಿಮು ಮೂಡಿಸಲಾಗುತ್ತಿತ್ತು. ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಈ ಒಂದು ತಾಲಿಮು ನಡೆಸಲಾಗುತ್ತಿತ್ತು. ಸದ್ದಿಗೆ ಬೆದರಿ ಕಾವಾಡಿಯನ್ನೇ ದಂತದಿಂದ ಹೆಣ್ಣಾಣೆ ಒಂದು ಎತ್ತಿದೆ. ಈ ವೇಳೆ ಹರಸಾಹಸ್ಪಟ್ಟು ಕಾವಾಡಿ ಹೆಣ್ಣಾಣೆಯನ್ನು ನಿಯಂತ್ರಿಸಿದ್ದಾನೆ.ಸ್ವಲ್ಪ ಹೊತ್ತಿನ ನಂತರ ಹೆಣ್ಣಾನೇ ಶಾಂತವಾಗಿದೆ.