ನವದೆಹಲಿ : ಚುನಾವಣಾ ಬಾಂಡ್ ಹೆಸರಲ್ಲಿ ವಸೂಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್ ಮೇಲೆ ಎಫ್ಐಆರ್ ದಾಖಲಾಗಿದೆ. ಹಾಗಾಗಿ ಕೂಡಲೇ ಅವರು ರಾಜಿನಾಮೆ ನೀಡಲೇಬೇಕು ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಮನುಸಿಂಘ್ವಿ ಆಗ್ರಹಿಸಿದರು.
ನವದೆಹಲಿಯಲ್ಲಿ ಮಾತನಾಡಿದ ಅವರು, ಚುನಾವಣಾ ಬಾಂಡ್ ಅನ್ನೋದು ಬಿಜೆಪಿಯ ವಸೂಲಿಯ ಒಂದು ಮಾರ್ಗ. ಮಹಾ ಷಡ್ಯಂತ್ರದ ಹಿಂದೆ 8,000 ಕೋಟಿ ರೂಪಾಯಿ ವಸೂಲಿ ಕಥೆ ಇದೆ. ಎಫ್ಐಆರ್ ದಾಖಲಾಗಿದೆ. ನಿರ್ಮಲಾ ಸೀತಾರಾಮನ್ ವಿರುದ್ಧ ಸಮನ್ಸ್ ಜಾರಿ ಆಗಲೇಬೇಕು. ಅದಾದ ಮೇಲೆ ವಿಚಾರಣೆ ಬಳಿಕ ಬಂಧನ ಆಗಲೇಬೇಕು. ಇದಕ್ಕಿಂತ ಫಿಟ್ ಕೇಸ್ ಇನ್ನೊಂದು ಇಲ್ಲ. ಹೀಗಾಗಿ ಈ ಕೇಸ್ ನಲ್ಲಿ ಸಚಿವೆ ನಿರ್ಮಲ ಸೀತಾರಾಮನ್ ರಾಜೀನಾಮೆ ಕೊಡಲೇಬೇಕು ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಮನುಸಿಂಘ್ವಿ ಆಗ್ರಹಿಸಿದರು.
ಹಣಕಾಸು ಸಚಿವರು ಒಬ್ಬರೇ ಮಾಡಲು ಅವರಿಗೆ ಧೈರ್ಯ ಇಲ್ಲ. ಯಾರ ಆದೇಶ ಮತ್ತು ನಿರ್ದೇಶನ ಮೇಲೆ ಆಗಿದೆ ಎಲ್ಲರಿಗೂ ಗೊತ್ತಿದೆ. RBI ಪತ್ರ ಬರೆದರೆ ಸರ್ಕಾರ ಅದನ್ನು ಕಸದ ಬುಟ್ಟಿಗೆ ಎಸೆಯಿತು. ಇದು ನಿಷ್ಪಕ್ಷಪಾತ ಚುನಾವಣೆಯ ಮೇಲೆ ಪರಿಣಾಮ ಬೀರಿದೆ. ಚುನಾವಣಾ ಮೂಲ ಉದ್ದೇಶದ ಮೇಲೆ ಪ್ರಹಾರ ಮಾಡುತ್ತದೆ ಎಂದರು.
ಅಲ್ಲದೆ ಹೆಚ್ಚು ಹಣವಿರುವ ಪಕ್ಷ ಬಾಂಡ್ ಹಣ ಬಳಸಿ ಚುನಾವಣೆ ಗೆಲ್ಲುತ್ತದೆ. ತಿನ್ನುತ್ತೇನೆ, ಕದಿಯುತ್ತೇನೆ, ಮತ್ತು ಹಣಕ್ಕಾಗಿ ಪೀಡಿಸುತ್ತೇನೆ ಎಂದು ಸ್ಲೋಗನ್ ಬದಲಿಸಬಹುದು ಎಂದು ಅಭಿಷೇಕ್ ಮನುಸಿಂಘ್ವಿ ತಿಳಿಸಿದರು. ಇಷ್ಟೆಲ್ಲಾ ಆದಮೇಲೆ ಹಣಕಾಸು ಸಚಿವೆ ನಿರ್ಮಲ ರಾಜೀನಾಮೆ ನೀಡಬೇಕು ಎಂದು ದೆಹಲಿಯಲ್ಲಿ ಕಾಂಗ್ರೆಸ್ ನಾಯಕ ಅಭಿಷೇಕ ಮನುಸಿಂಘ್ವಿ ಹೇಳಿಕೆ ನೀಡಿದರು.