ಬೆಂಗಳೂರು: ಸಚಿವ ದಿನೇಶ್ ಗುಂಡೂರಾವ್ ಆಹಾರ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಸುರಕ್ಷತೆ ವಹಿಸುವಂತೆ ಸೂಚನೆಯನ್ನು ಆಹಾರ ಇಲಾಖೆಗೆ ನೀಡಿದ್ದರು. ಈ ಬೆನ್ನಲ್ಲೇ ಬೆಂಗಳೂರಿನ ಬೇಕರಿ ತಿನಿಸಿಗಳ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂತಹ ಬೇಕರಿ ಕೇಕ್ ಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿರುವಂತ ಶಾಕಿಂಗ್ ಮಾಹಿತಿ ರಿಪೋರ್ಟ್ ನಲ್ಲಿ ಬಹಿರಂಗಗೊಂಡಿದೆ.
ಬೆಂಗಳೂರಿನ ಹಲವು ಬೇಕರಿಗಳಿಂದ ಬೇಕರಿ ಉತ್ಪನ್ನಗಳನ್ನು ಸಂಗ್ರಹಿಸಿದ್ದಂತ ಆಹಾರ ಮತ್ತು ಗುಣಮಟ್ಟ ಇಲಾಖೆಯು, ಅವುಗಳನ್ನು ಪರೀಕ್ಷೆಗಾಗಿ ಲ್ಯಾಬ್ ಗೆ ರವಾನಿಸಿತ್ತು. ಹೀಗೆ ಕಳುಹಿಸಲಾಗಿದ್ದಂತ ಮಾದರಿಯ 12 ಬೇಕರಿಗಳ ಕೇಕ್ ನಲ್ಲಿ ಮಾರಣಾಂತಿಕ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರಿನ ಬೇಕರಿ ಕೇಕ್ ಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿರುವಂತ ರೆಡ್ ವೆಲ್ ವೆಟ್, ಬ್ಲಾಕ್ ಫಾರೆಸ್ಟ್ ಪತ್ತೆಯಾಗಿದೆ. 12 ಮಾದರಿಗಳಲ್ಲಿ ಅಲೂನಾ ರೆಡ್, ನನ್ ಟೆಸ್ ಯೆಲ್ಲೋ ಕೂಡ ಪತ್ತೆಯಾಗಿದೆ.
ಇನ್ನೂ ಕೃತಕ ಬಣ್ಣ ಬಳಕೆಯಿಂದಲೇ ಕ್ಯಾನ್ಸರ್ ಕಾರಕ ಅಂಶಗಳು ಬೇಕರಿ ಕೇಕುಗಳಲ್ಲಿ ಕಂಡು ಬಂದಿದ್ದಾಗಿ ಹೇಳಲಾಗುತ್ತಿದೆ. ಹೀಗಾಗಿ ಆಹಾರ ಇಲಾಖೆಯ ಅಧಿಕಾರಿಗಳು ಗುಣಮಟ್ಟ ಕಾಪಾಡುವಂತೆ, ಕೃತಕ ಬಣ್ಣ ಬಳಕೆಯನ್ನು ನಿಷೇಧಿಸಲಾಗಿದೆ. ಇನ್ಮುಂದೆ ಬಳಕೆ ಮಾಡದಂತೆ ಎಚ್ಚರಿಕೆಯನ್ನು ನೀಡಿವೆ ಎಂಬುದಾಗಿ ತಿಳಿದು ಬಂದಿದೆ.
ಸೋ ಬೆಂಗಳೂರಿನ ಜನತೆ ಎಚ್ಚರಿಕೆ ವಹಿಸಬೇಕಿದೆ. ಬೇಕರಿ ಕೇಕುಗಳು ಸಿಹಿ ಕೊಡುತ್ತಿವೆ ಎಂಬುದಾಗಿ ಬಾಯಿ ಚಪ್ಪಸಿರಿ ತಿನ್ನೋ ಮುನ್ನಾ, ಎಚ್ಚರಿಕೆ ವಹಿಸದೇ ಹೋದರೇ ನಿಮ್ಮ ದೇಹವನ್ನು ಮಾರಣಾಂತಿಕ ಕ್ಯಾನ್ಸರ್ ಗೆ ಕಾರಣವಾಗುವಂತ ಅಂಶವು ಸೇರಿ, ಅಪಾಯವನ್ನ ತಂದೊಡ್ಡುವ ಸಾಧ್ಯತೆ ಇದೆ. ಹೀಗಾಗಿ ಬೀ ಅಲರ್ಟ್.
ಇಂದು ‘ವಿಶ್ವ ಹೃದಯ’ ದಿನ: 240 ಜನರ ಬಾಳಿಗೆ ಬೆಳಕಾದ ‘ಡಾ.ಪುನೀತ್ ಜ್ಯೋತಿ’
ಅತ್ಯಾಚಾರ ಆರೋಪ ಪ್ರಕರಣ: ಶಾಸಕ ಮುನಿರತ್ನಗೆ ಸೇರಿದ 11 ಕಡೆ ‘SIT’ ದಾಳಿ, ಮಹತ್ವದ ದಾಖಲೆ ವಶಕ್ಕೆ