ಬೆಂಗಳೂರು: ಬ್ರಾಹ್ಮಣ ಮುಂದುವರಿದ ಸಮಾಜ ಎಂಬ ಕಾರಣಕ್ಕೆ ಸಮುದಾಯದಲ್ಲಿರುವ ಬಡವರಿಗೆ ಅನ್ಯಾಯವಾಗಬಾರದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬೆಂಗಳೂರಿನಲ್ಲಿ ಇಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯವತಿಯಿಂದ ಆಯೋಜಿಸಿದ್ದ ವಿಶ್ಚಾಮಿತ್ರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಚಿವರು ಮಾತನಾಡುತ್ತಿದ್ದರು.
ಬ್ರಾಹ್ಮಣ ಸಮುದಾಯದ ಮಕ್ಕಳು ಪಬ್ಲಿಕ್ ಸರ್ವೀಸ್ ಹುದ್ದೆಗಳತ್ತ ಹೆಚ್ಚಿನ ಗಮನ ಹರಿಸುವ ಅಗತ್ಯತೆ ಇದೆ. ನಮಗೆ ಸರ್ಕಾರಿ ಕೆಲಸಗಳು ಸಿಗಲ್ಲ ಎಂದು ಬಹುತೇಕರು ಇಂದು ಡಾಕ್ಟರ್, ಎಂಜಿನಿಯರ್ ಆಗುವುದಕ್ಕೆ ಆಸಕ್ತಿ ತೋರುತ್ತಿದ್ದಾರೆ. ಆದರೆ ಕೆ.ಎ.ಎಸ್, ಐಎಎಸ್ ಹುದ್ಧೆಗಳನ್ನ ಅಲಂಕರಿಸಲು ಪ್ರಯತ್ನಿಸಬೇಕು. ಇದರಿಂದ ಸಾರ್ವಜನಿಕ ಕಾರ್ಯದಲ್ಲಿ ನಿಮ್ಮನ್ನ ನೀವು ತೊಡಗಿಸಿಕೊಳ್ಳುವುದರ ಜೊತೆಗೆ ಸಮಾಜದ ಬಡವರಿಗು ನೀವು ಸಹಾಯ ಮಾಡಬಹುದು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಈ ಹಿಂದೆ ಬ್ರಾಹ್ಮಣ ಸಮುದಾಯದವರು ಎಲ್ಲ ಸಿದ್ಧಾಂತಗಳ ರಂಗಗಳಲ್ಲಿ ಮುಂಚೂಣಿಯಲ್ಲಿದ್ದು ಕೆಲಸ ಮಾಡಿದವರು. ಹಾಗೆ ನೋಡಿದರೇ ಬ್ರಾಹ್ಮಣರು ನಿಜವಾದ ಜಾತ್ಯಾತೀತರು. ಬ್ರಾಹ್ಮಣ ಸಮುದಾಯದ ಶಾಸಕರು ಗೆದ್ದು ಬರುವ ಕ್ಷೇತ್ರಗಳಲ್ಲಿ ಸಮುದಾಯದ ಮತಗಳು ತೀರಾ ಕಡಿಮೆ.. ಇತರ ಸಮುದಾಯದ ಜನರ ವಿಶ್ವಾಸ ಗಳಿಸಿ ನಾವು ಗೆದ್ದು ಬರ್ತಿದ್ದೇವೆ. ಎಲ್ಲ ಸಮುದಾಯ, ಧರ್ಮದವರನ್ನ ನಾವು ಸಮಭಾವದಿಂದ ನೋಡುತ್ತೆವೆ ಎಂದರು.
ಸರ್ಕಾರದಿಂದ ಸಿಗುವ ಸೌಲಬ್ಯಗಳು ಬ್ರಾಹ್ಮಣ ಸಮುದಾಯದ ಬಡವರಿಗೂ ತಲುಪುವಂತಾಗವೇಕು. ಈ ನಿಟ್ಟಿನಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ನಮ್ಮ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ. ಮಂಡಳಿಗೆ ನೀಡುತ್ತಿರುವ 10 ಕೋಟಿ ಅನುದಾನ ಸಾಲದು. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಹೆಚ್ಚಿನ ಅನುದಾನ ಕೊಡಿಸುವ ಪ್ರಾಮಾಣಿಮ ಪ್ರಯತ್ನ ನಡೆಸುವುದಾಗಿ ಇದೇ ವೇಳೆ ಸಚಿವ ದಿನೇಶ್ ಗುಂಡೂರಾವ್ ಭರವಸೆ ನೀಡಿದರು.
ಬ್ರಾಹ್ಮಣ ಬಡ ವರ್ಗದವರಿಗೆ ಸರ್ಕಾರಗಳು ಸೌಲಭ್ಯಗಳನ್ನ ಕಲ್ಪಿಸಲಿ
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಆರ್.ವಿ ದೇಶಪಾಂಡೆ ಬ್ರಾಹ್ಮಣ ಸಮುದಾಯದಲ್ಲಿರುವ ಬಡವರಿಗೆ ಸರ್ಕಾರದಿಂದ ಸಿಗಬೇಕಾದ ಸಭಲಭ್ಯಗಳು ಸಿಗಬೇಕು ಎಂದು ಎಂದರು. ಬ್ರಾಹ್ಮಣ ಸಮುದಾಯ ಮುಂದುವರಿದ ಸಮಾಜ ಇರಬಹುದು. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಅನೇಕರು ಬಡವರಿದ್ದಾರೆ. ಅವರಿಗೆ ಸರ್ಕಾರಗಳು ಸೌಲಭ್ಯಗಳನ್ನ ಒದಗಿಸಿಕೊಡಬೇಕು. ಈ ನಿಟ್ಟಿನಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಹೆಚ್ಚು ಶಕ್ತಿಯನ್ನ ಸರ್ಕಾರ ತುಂಬಬೇಕು. ಮಂಡಳಿಯ ಅಧ್ಯಕ್ಷರಾಗಿ ಜಯಸಿಂಹ ಅವರು ಕ್ರೀಯಾಶಿಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ವಾಮಿತ್ರ ಹೆಸರಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಹೆಚ್ಚು ಅಂಕ ಪಡೆದ 127 ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮೊದಲ ಬಹುಮಾನವಾಗಿ 15 ಸಾವಿರ ಹಾಗೂ ದ್ವೀತಿಯ ಬಹುಮಾನ 10 ಸಾವಿರ ಪ್ರೋತ್ಸಾಹಧನ ವಿತರಿಸಲಾಯಿತು.
BREAKING : ಸಿಎಂ ಬಳಿಕ ಖರ್ಗೆ ಕುಟುಂಬಕ್ಕೆ ಸಂಕಷ್ಟ : ‘ಭೂ ಕಬಳಿಕೆ’ ಆರೋಪದಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ!