Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಉಪರಾಷ್ಟ್ರಪತಿ ಚುನಾವಣೆಗೆ ಇಂದು ಮತದಾನ : ಇಂದು ಸಂಜೆಯೇ ಫಲಿತಾಂಶ ಪ್ರಕಟ | Vice Presidential Election

09/09/2025 6:12 AM

ನಾಡ ಕಚೇರಿಗೆ ಹೋಗಬೇಕಿಲ್ಲ, VA, RI ಕಾಣಬೇಕಿಲ್ಲ: ಈ ಪ್ರಮಾಣಪತ್ರಗಳನ್ನು ಪಡೆಯಲು ಜಸ್ಟ್ ಹೀಗೆ ಮಾಡಿ | Nadakacheri

09/09/2025 6:10 AM

ಬಿಹಾರ SIR: ಆಧಾರ್ ಕುರಿತು ಸುಪ್ರೀಂಕೋರ್ಟ್‌ನ ಮಹತ್ವದ ತೀರ್ಪು

09/09/2025 6:06 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ಘೋರ ದುರಂತ : ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು, ಪೆಟ್ರೋಲ್ ಸುರಿದುಕೊಂಡು ಗೃಹಿಣಿ ಆತ್ಮಹತ್ಯೆ!
KARNATAKA

ಬೆಂಗಳೂರಲ್ಲಿ ಘೋರ ದುರಂತ : ಪತಿಯ ಅನೈತಿಕ ಸಂಬಂಧಕ್ಕೆ ಬೇಸತ್ತು, ಪೆಟ್ರೋಲ್ ಸುರಿದುಕೊಂಡು ಗೃಹಿಣಿ ಆತ್ಮಹತ್ಯೆ!

By kannadanewsnow0507/09/2024 2:05 PM

ಬೆಂಗಳೂರು : ಮುದ್ದಾದ ಹೆಂಡತಿಯಿದ್ದರು ಸಹ ಆತನಿಗೆ ಬೇರೊಂದು ಮಹಿಳೆಯ ಜೊತೆ ಅನೈತಿಕ ಸಂಬಂಧ ಇತ್ತು. ಅಲ್ಲದೆ ಈ ವಿಷಯವಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ಪತ್ನಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹುಳಿಮಾವಿನ ಅಕ್ಷಯನಗರದಲ್ಲಿ ನಡೆದಿದೆ.

ಸದ್ಯ ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನ ಅನುಷಾ ಎಂದು ತಿಳಿದುಬಂದಿದೆ. ಇನ್ನೂ ಪತಿ ಶ್ರೀಹರಿ ತನ್ನ ಮೊಬೈಲ್ ನಲ್ಲಿ ನಿತ್ಯ ಅಶ್ಲೀಲ ವೀಡಿಯೋ ತೋರಿಸಿ ಕಿರುಕುಳ ನೀಡುತ್ತಿದ್ದ. ಹೆಂಡತಿಯ ಎದುರಲ್ಲೇ ಇನ್ನೊಂದು ಹುಡುಗಿಯ ಜೊತೆ ಸಲುಗೆಯಿಂದ ಇರೋದಲ್ಲದೆ, ಬೇರೆ ಹೆಂಗಸರ ಜೊತೆ ಇದ್ದಿದ್ದನ್ನು ವಿಡಿಯೋ ಕಾಲ್‌ ಮಾಡಿಯೂ ತೋರಿಸ್ತಿದ್ದ. ಕೊನೆಗೆ ಗಂಡನ ವಿಪರೀತ ಟಾರ್ಚರ್‌ನಿಂದ ಬೇಸತ್ತ ಪತ್ನಿ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

2 ದಿನಗಳ ಹಿಂದೆಯೇ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಅನುಶಾರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು, ಶನಿವಾರ ಚಿಕಿತ್ಸೆ ಫಲಿಸದೆ ಆಕೆ ಸಾವು ಕಂಡಿದ್ದಾರೆ. ಅನುಶಾ ಪತಿ ಶ್ರೀಹರಿ ಮೊಬೈಲ್‌ನಲ್ಲಿ ಅಶ್ಲೀಲ ವಿಡಿಯೋ ತೋರಿಸಿ ಸೆಕ್ಸ್‌ನಲ್ಲಿ ಹೀಗೆ ಸಹಕರಿಸು ಎಂದು ಟಾರ್ಚರ್‌ ಕೊಡುತ್ತಿದ್ದ ಎಂದೂ ಆರೋಪಿಸಲಾಗಿದೆ. ಅದಲ್ಲದೆ, ಪತ್ನಿಯ ಮುಂದಯೇ ಬೇರೆ ಹುಡುಗಿಯರ ಜೊತೆ ಆಪ್ತತೆ ಬೆಳೆಸಿಕೊಂಡಿದ್ದ.

ಇದನ್ನು ಪ್ರಶ್ನೆ ಮಾಡಿದಕ್ಕೆ ಕಿರುಕುಳ ನೀಡಲು ಆರಂಭ ಮಾಡಿದ್ದ. ಅವರಿಬ್ಬರ ವಾಟ್ಸ್‌ಆಪ್‌ ಚಾಟ್‌ಗಳು ಕೂಡ ಬಹಿರಂಗವಾಗಿದೆ. ಎರಡು ತಿಂಗಳಿನಿಂದ ಡೈವೋರ್ಸ್‌ ಕೊಡುವಂತೆ ಪೀಡಿಸುತ್ತಿದ್ದ. ಇದರಿಂದ ಬೇಸತ್ತು ಅನುಶಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 2019 ಏಪ್ರಿಲ್‌ 22 ಮದುವೆಯಾಗಿದ್ದ ಈ ಜೋಡಿಗೆ 2 ವರ್ಷ ಚಾರ್ವಿಕ್‌ ಹೆಸರಿನ ಗಂಡು ಮಗುವಿದೆ. ಈ ವರ್ಷದ ಮಾರ್ಚ್‌ನಿಂದ ಗಂಡ ಹೆಂಡತಿ ಗಲಾಟೆ ಹೆಚ್ಚಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

Share. Facebook Twitter LinkedIn WhatsApp Email

Related Posts

ನಾಡ ಕಚೇರಿಗೆ ಹೋಗಬೇಕಿಲ್ಲ, VA, RI ಕಾಣಬೇಕಿಲ್ಲ: ಈ ಪ್ರಮಾಣಪತ್ರಗಳನ್ನು ಪಡೆಯಲು ಜಸ್ಟ್ ಹೀಗೆ ಮಾಡಿ | Nadakacheri

09/09/2025 6:10 AM3 Mins Read

ಅನರ್ಹ `ಗೃಹಲಕ್ಷ್ಮಿ’ ಫಲಾನುಭವಿಗಳಿಗೆ ಬಿಗ್ ಶಾಕ್ : ಪಂಚಾಯತ್ ಹಂತದಲ್ಲಿ `ಫಲಾನುಭವಿಗಳ ಪಟ್ಟಿ’ ನವೀಕರಣ.!

09/09/2025 6:05 AM1 Min Read

`SSLC’ ಕಳಪೆ ಫಲಿತಾಂಶ ಪಡೆದ ಅನುದಾನಿತ ಶಾಲೆಗಳಿಗೆ ನೋಟಿಸ್ : ಸಚಿವ ಡಿ.ಸುಧಾಕರ್

09/09/2025 6:04 AM6 Mins Read
Recent News

ಉಪರಾಷ್ಟ್ರಪತಿ ಚುನಾವಣೆಗೆ ಇಂದು ಮತದಾನ : ಇಂದು ಸಂಜೆಯೇ ಫಲಿತಾಂಶ ಪ್ರಕಟ | Vice Presidential Election

09/09/2025 6:12 AM

ನಾಡ ಕಚೇರಿಗೆ ಹೋಗಬೇಕಿಲ್ಲ, VA, RI ಕಾಣಬೇಕಿಲ್ಲ: ಈ ಪ್ರಮಾಣಪತ್ರಗಳನ್ನು ಪಡೆಯಲು ಜಸ್ಟ್ ಹೀಗೆ ಮಾಡಿ | Nadakacheri

09/09/2025 6:10 AM

ಬಿಹಾರ SIR: ಆಧಾರ್ ಕುರಿತು ಸುಪ್ರೀಂಕೋರ್ಟ್‌ನ ಮಹತ್ವದ ತೀರ್ಪು

09/09/2025 6:06 AM

ಚುನಾವಣಾ ಆಯೋಗವು ಆಧಾರ್ ಅನ್ನು ಗುರುತಿನ ಪುರಾವೆಯಾಗಿ ಸ್ವೀಕರಿಸಬೇಕು: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

09/09/2025 6:06 AM
State News
KARNATAKA

ನಾಡ ಕಚೇರಿಗೆ ಹೋಗಬೇಕಿಲ್ಲ, VA, RI ಕಾಣಬೇಕಿಲ್ಲ: ಈ ಪ್ರಮಾಣಪತ್ರಗಳನ್ನು ಪಡೆಯಲು ಜಸ್ಟ್ ಹೀಗೆ ಮಾಡಿ | Nadakacheri

By kannadanewsnow0909/09/2025 6:10 AM KARNATAKA 3 Mins Read

ಬೆಂಗಳೂರು: ರಾಜ್ಯದ ಅನೇಕ ಜನರಿಗೆ ಈ ಮಾಹಿತಿ ಗೊತ್ತಿಲ್ಲ ಅನಿಸುತ್ತದೆ. ಈ ಹಿಂದೆ ನಾಡ ಕಚೇರಿಗೆ ಜಾತಿ-ಆದಾಯ ಪ್ರಮಾಣ ಪತ್ರದಿಂದ…

ಅನರ್ಹ `ಗೃಹಲಕ್ಷ್ಮಿ’ ಫಲಾನುಭವಿಗಳಿಗೆ ಬಿಗ್ ಶಾಕ್ : ಪಂಚಾಯತ್ ಹಂತದಲ್ಲಿ `ಫಲಾನುಭವಿಗಳ ಪಟ್ಟಿ’ ನವೀಕರಣ.!

09/09/2025 6:05 AM

`SSLC’ ಕಳಪೆ ಫಲಿತಾಂಶ ಪಡೆದ ಅನುದಾನಿತ ಶಾಲೆಗಳಿಗೆ ನೋಟಿಸ್ : ಸಚಿವ ಡಿ.ಸುಧಾಕರ್

09/09/2025 6:04 AM

ಊಟದ ನಂತರ ಪ್ರತಿದಿನ 2 ಏಲಕ್ಕಿ ತಿಂದರೆ ದೇಹಕ್ಕೆ ಸಿಗಲಿದೆ ಇಷ್ಟೊಂದು ಪ್ರಯೋಜನ.!

09/09/2025 6:00 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.