ರಾಯಚೂರು : ರಾಯಚೂರು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಹಳ್ಳದಾಟುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ 9 ಮಂದಿ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಫತ್ತೆಪುರ ಬಳಿ ಹಳ್ಳ ದಾಟುವಾಗ ನೀರಿನ ಸೆಳೆತಕ್ಕೆ 9 ಮಂದಿ ಕೊಚ್ಚಿ ಹೋಗಿದ್ದು, 8 ಮಂದಿಯನ್ನು ರಕ್ಷಣೆ ಮಾಡಲಾಗಿದೆ. ಆದರೆ ಖಾಸಗಿ ಬ್ಯಾಂಕ್ ನೌಕರ ಬಸವರಾಜ್ ಎಂಬುವರು ನಾಪತ್ತೆಯಾಗಿದ್ದು, ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
ರಾಯಚೂರಿನ ಖಾಸಗಿ ಬ್ಯಾಂಕ್ ನೌಕರ ಬಸವರಾಜ್ ಸೇರಿದಂತೆ 9 ಮಂದಿ ಫತ್ತೇಪುರ ಬಳಿ ಹಳ್ಳದಾಟುವಾಗಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.9 ಮಂದಿಯಲ್ಲಿ 8 ಮಂದಿಯನ್ನು ರಕ್ಷಿಸಲಾಗಿದ್ದು, ಬಸವರಾಜ್ ಗೆ ಶೋಧ ಮುಂದುವರೆಸಲಾಗಿದೆ.