ಬೆಂಗಳೂರು : ಇಲಾಖಾ ವಿಚಾರಣೆಯಲ್ಲಿ ವಿಚಾರಣಾಧಿಕಾರಿಗಳನ್ನಾಗಿ `ನ್ಯಾಯಾಧೀಶರನ್ನು ನೇಮಕ ಮಾಡಿ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ ಹೊರಡಿಸಿದೆ.
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯ (ಶಿಸ್ತು ನಡವಳಿಗಳು) 1965/89 ಮತ್ತು ತಿದ್ದುಪಡಿ ನಿಯಮ 2022 ರ ನಿಯಮ-6 ಮತ್ತು 6 & 8 ರಡಿಯಲ್ಲಿ ರಾಜ್ಯ ವಿವಿಧ ಘಟಕಕಗಳಲ್ಲಿ ಆದೇಶಿಸಲಾದ ಇಲಾಖಾ ವಿಚಾರಣೆಗಳಲ್ಲಿ ಪ್ರಾರಂಭಿಕ ಹಂತದಿಂದ ಅಂತಿಮ ವರದಿ ತಲುಪಿರುವುದು ಪ್ರಕರಣಗಳಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಉಲ್ಲೇಖಿತ-2 ರ ಸುತ್ತೋಲೆ ದಿನಾಂಕ: 16.05.2024 ಹಾಗೂ 23.05.2024 ರಲ್ಲಿ ಮಾರ್ಗಸೂಚಿಗಳನ್ನು ನೀಡಲಾಗಿರುತ್ತದೆ.
ಸರ್ಕಾರವು ಇಲಾಖಾ ವಿಚಾರಣೆಗಳಲ್ಲಿ ಕರ್ತವ್ಯ ನಿರತ ಅಧಿಕಾರಿಗಳನ್ನು ವಿಚಾರಣಾಧಿಕಾರಿಯಾಗಿ ನೇಮಕ ಮಾಡುವುದರಿಂದ ಅವರುಗಳ ದಿನ ನಿತ್ಯದ ಕರ್ತವ್ಯದ ಜೊತೆಗೆ ಅಪರಾಧ, ಕಾನೂನು & ಸುವ್ಯವಸ್ಥೆ, ತನಿಖೆ, ಮೇಲ್ವಿಚಾರಣೆ ಮತ್ತು ಇತರೆ ಕರ್ತವ್ಯಗಳಿಗೆ ಅಡಚಣೆ ಉಂಟಾಗುತ್ತದೆ. ಇದರಿಂದಾಗಿ ಆದೇಶಿಸಲಾದ ಇಲಾಖಾ ವಿಚಾರಣೆಗಳು ಸಹ ತ್ವರಿತವಾಗಿ ಪೂರ್ಣಗೊಳ್ಳುತ್ತಿಲ್ಲ. ಈ ಅಂಶಗಳ ಹಿನ್ನಲೆಯಲ್ಲಿ ಸರ್ಕಾರವು ನಿವೃತ್ತ ನ್ಯಾಯಾಧೀಶರು, ವಿಚಾರಣಾಧಿಕಾರಿಯಾಗಿ ನೇಮಕ ಮಾಡಿಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಟ್ಟಿದ್ದು ಮತ್ತು ನಿವೃತ್ತ ನ್ಯಾಯಾಧೀಶರ ಪಟ್ಟಿಯನ್ನು ಸಹ
ಪ್ರಕಟಿಸಲಾಗಿರುತ್ತದೆ. ಉಲ್ಲೇಖಿತ-3ರ ಸರ್ಕಾರದ ಪತ್ರದಲ್ಲಿ ಕೆಎಸ್ಪಿ(ಡಿಪಿ) ನಿಯಮಾವಳಿಗಳು-1965/89 ತಿದ್ದುಪಡಿ ನಿಯಮ 6(2)ರಲ್ಲಿ ಶಿಸ್ತುಪ್ರಾಧಿಕಾರ ಅಥವಾ ಅವರಿಂದ ಅಧಿಕೃತಗೊಳಿಸಲಾದ ಯಾವುದೇ ಪ್ರಾಧಿಕಾರವೆಂದು ತಿಳಿಸಿರುವುದರಿಂದ ಶಿಸ್ತುಪ್ರಾಧಿಕಾರವು ಕಾನೂನು ಇಲಾಖೆಯು ಅಧಿಸೂಚಿಸಿರುವ ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡಲು ಇಚ್ಚಿಸಿದ್ದಲ್ಲಿ ಈ ಬಗ್ಗೆ ಸೂಕ್ತ
ಆದೇಶವನ್ನು ಹೊರಡಿಸಿ ನೇಮಕಮಾಡಿಕೊಳ್ಳಬಹುದಾಗಿರುತ್ತದೆಂದು ಸ್ಪಷ್ಟಿಕರಣ ನೀಡಿರುತ್ತದೆ(ಪ್ರತಿ ಲಗತ್ತಿಸಿದೆ.)
ಆದುದರಿಂದ, ತಮ್ಮ ಘಟಕಗಳಲ್ಲಿ ಆದೇಶಿಸಲಾಗುವ ಇಲಾಖಾ ವಿಚಾರಣೆಗಳಲ್ಲಿ ನಿವೃತ್ತ ನ್ಯಾಯಾಧೀಶರುಗಳನ್ನು ವಿಚಾರಣಾಧಿಕಾರಿಗಳನ್ನಾಗಿ ನೇಮಕ ಮಾಡಿಕೊಳ್ಳುವುದರ ಸಲುವಾಗಿ ಸರ್ಕಾರವು ಹೊರಡಿಸಿರುವ ನ್ಯಾಯಾಧೀಶರುಗಳ ಪಟ್ಟಿಯನ್ನು ಹಾಗೂ ಸರ್ಕಾರದ ಆದೇಶಗಳನ್ನು ಈ ಹಿಂಬರಹದೊಂದಿಗೆ ಲಗತ್ತಿಸಿ ಕಳುಹಿಸಿಕೊಡಲಾಗಿದೆ.