Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ರೇಣುಕಾಸ್ವಾಮಿ ಹತ್ಯೆ ಕೇಸ್ : ಸುಪ್ರೀಂಕೋರ್ಟ್ ನಲ್ಲಿ ನಟ ದರ್ಶನ್ ಜಾಮೀನು ರದ್ದು ಅರ್ಜಿ ವಿಚಾರಣೆ ಮುಂದೂಡಿಕೆ.!

21/05/2025 11:02 AM

BREAKING : ಮನೆಯಲ್ಲಿ `ಸಿಲಿಂಡರ್’ ಬದಲಾಯಿಸುವಾಗ ಇರಲಿ ಎಚ್ಚರ : ಗ್ಯಾಸ್ ಲೀಕ್ ಆಗಿ ಇಬ್ಬರು ಮಹಿಳೆಯರು ಸಾವು.!

21/05/2025 10:58 AM

ಭಾರತೀಯರು ಸುಳ್ಳು ಸುದ್ದಿ, ತಪ್ಪು ಮಾಹಿತಿಗೆ ಹೆಚ್ಚು ಒಳಗಾಗುತ್ತಾರೆ: ಅಧ್ಯಯನ

21/05/2025 10:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಗೌರಿ-ಗಣೇಶ ಹಬ್ಬಕ್ಕೆ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ
KARNATAKA

BIG NEWS : ಗೌರಿ-ಗಣೇಶ ಹಬ್ಬಕ್ಕೆ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ

By kannadanewsnow5731/08/2024 5:39 AM

ಬೆಂಗಳೂರು: ನಗರದಲ್ಲಿ ದಿನಾಂಕ 07-09-2024ರಿಂದ ಆರಂಭಗೊಳ್ಳುವಂತ ಗೌರಿ-ಗಣೇಶ ಹಬ್ಬದ ಪ್ರಯುಕ್ತ ಪೊಲೀಸ್ ಇಲಾಖೆಯಿಂದ ಸಾರ್ವಜನಿಕರು ಅನುಸರಿಸಬೇಕಾದಂತ ಮಾರ್ಗಸೂಚಿ ಕ್ರಮಗಳನ್ನು ಪ್ರಕಟಿಸಲಾಗಿದೆ. ಜೊತೆ ಜೊತೆಗೆ ಗಣೇಶೋತ್ಸವದ ವೇಳೆಯಲ್ಲಿ ಆ ನಿಯಮಗಳನ್ನು ಪಾಲಿಸುವುದು ಕಡ್ಡಾಯ ತಪ್ಪಿದ್ರೇ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂಬುದಾಗಿ ಪೊಲೀಸ್ ಇಲಾಖೆ ಎಚ್ಚರಿಸಿದೆ.

ಈ ಕುರಿತಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ದಿನಾಂಕ:07/09/2024 ರಿಂದ ಬೆಂಗಳೂರು ನಗರಾದ್ಯಂತ ಸಾರ್ವಜನಿಕರು ಗೌರಿ-ಗಣೇಶ ಹಬ್ಬವನ್ನು ಆಚರಿಸುವರು. ಈ ಸಮಯದಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಈ ಕೆಳಕಂಡ ಸೂಚನೆಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ.

1. ನಗರದ ಎಲ್ಲಾ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ತಮ್ಮ ವ್ಯಾಪ್ತಿಗಳಲ್ಲಿ ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿ ಅರ್ಜಿಗಳನ್ನು ಪಡೆದುಕೊಳ್ಳುವುದು. 2022 ಮತ್ತು 2023ನೇ ಸಾಲಿನಲ್ಲಿ ಪ್ರತಿಷ್ಠಾಪಿಸಲಾದ ಗಣಪತಿ ವಿಗ್ರಹಗಳ ಆಧಾರದ ಮೇಲೆ ಯಾವ ಯಾವ ಸ್ಥಳಗಳಲ್ಲಿ ಪ್ರಸ್ತುತ ಸಾಲಿನಲ್ಲಿ ಪ್ರತಿಷ್ಠಾಪಿಸಬಹುದು ಎಂಬುದನ್ನು ಗುರುತಿಸಿಕೊಳ್ಳುವುದು, ಸಂಘ-ಸಂಸ್ಥೆಗಳು ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸುವ ಜಾಗ, ದಿನ, ಮುಂತಾದವುಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ಮುಂಚಿತವಾಗಿ ಏಕ ಗವಾಕ್ಷಿ ಮೂಲಕ ಪರವಾನಗಿ ಪಡೆದುಕೊಳ್ಳುವಂತೆ ಸೂಚಿಸುವುದು.

2. ಸಾರ್ವಜನಿಕ ರಸ್ತೆ ಹಾಗೂ ಸಾರ್ವಜನಿಕರು ಓಡಾಡುವ ಜಾಗಗಳಲ್ಲಿ ವಾಹನ ಮತ್ತು ಪಾದಚಾರಿಗಳ ಓಡಾಟಕ್ಕೆ ಅಡಚಣೆಯಾಗುವ ರೀತಿಯಲ್ಲಿ ಪೆಂಡಾಲ್, ಚಪ್ಪರ ಹಾಕಿ ಗಣಪತಿ ವಿಗ್ರಹವನ್ನು ಪ್ರತಿಷ್ಠಾಪಿಸಲು ಅವಕಾಶ ನೀಡಬಾರದು.

3. ಸಾರ್ವಜನಿಕ ಸ್ಥಳಗಳಲ್ಲಿ ಚಪ್ಪರ ಹಾಗೂ ಗಣಪತಿ ವಿಗ್ರಹ ಪ್ರತಿಷ್ಟಾಪನೆ ಮಾಡುವುದಿದ್ದರೆ, ಅಂತಹ ಆಯೋಜಕರು ಬಿ.ಬಿ.ಎಂ.ಪಿ. ಸಂಚಾರ, ಬೆಸ್ಕಾಂ, ಅಗ್ನಿಶಾಮಕ ಇಲಾಖೆ ಹಾಗೂ ಸಂಬಂಧಪಟ್ಟ ಇತರೆ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರವನ್ನು ಪಡೆದು. ಸದರಿ ದಾಖಲಾತಿಗಳೊಂದಿಗೆ ಈಗಾಗಲೇ ನಿಯೋಜಿಸಲಾಗಿರುವ ಏಕ ಗವಾಕ್ಷಿ ಮೂಲಕ ಪರವಾನಗಿ ಪಡೆದುಕೊಳ್ಳುವಂತೆ ತಿಳಿಸುವುದು.

4. ಧ್ವನಿವರ್ಧಕಗಳಿಗೆ ಪರವಾನಗಿ ನೀಡುವಾಗ ಮಾನ್ಯ ಉಚ್ಛ ನ್ಯಾಯಾಲಯವು ಧ್ವನಿವರ್ಧಕ ಉಪಯೋಗಿಸಲು ನೀಡರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿರುತ್ತದೆ ಮತ್ತು ಕರ್ನಾಟಕ ಸರ್ಕಾರವು ಕಾಲ-ಕಾಲಕ್ಕೆ ಹೊರಡಿಸಲಾಗಿರುವ ನಿಯಮಗಳು | ಮಾರ್ಗಸೂಚಿಗಳು / ಆದೇಶಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿರುತ್ತದೆ. ಆದ್ದರಿಂದ ಅನುಮತಿ ನೀಡುವ ಅಧಿಕಾರಿಗಳು ಈ ಕೆಳಕಂಡ ಸೂಚನೆಗಳನ್ನು ತಮ್ಮ ಅನುಮತಿ ಪತ್ರದಲ್ಲಿ ಕಡ್ಡಾಯವಾಗಿ ನಮೂದಿಸತಕ್ಕದ್ದು.

• ಬೆಳಿಗ್ಗೆ 6-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಮಾತ್ರ ಧ್ವನಿವರ್ಧಕಗಳನ್ನು ಬಳಸಲು ಅನುಮತಿ ನೀಡತಕ್ಕದ್ದು.

• ರಾತ್ರಿ 10-00 ಗಂಟೆಯಿಂದ ಬೆಳಿಗ್ಗೆ 6-00 ಗಂಟೆಯವರೆಗೆ ಯಾವುದೇ ಕಾರಣಕ್ಕೂ ಧ್ವನಿವರ್ಧಕಗಳನ್ನು ಬಳಸಲು ಅವಕಾಶ ನೀಡಬಾರದು.

• ಬೆಳಿಗ್ಗೆ 6-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಧ್ವನಿವರ್ಧಕಗಳನ್ನು ಉಪಯೋಗಿಸುವಾಗ ಆ ಪ್ರದೇಶದ ಸುತ್ತಮುತ್ತ ಇರುವ ಸಾರ್ವಜನಿಕರಿಗೆ, ಹಿರಿಯ ನಾಗರೀಕರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಆಸ್ಪತ್ರೆಯಲ್ಲಿರುವವರಿಗೆ, ಅನಾರೋಗ್ಯದಿಂದ ಬಳಲುವ ರೋಗಿಗಳಿಗೆ, ಯಾವುದೇ ತೊಂದರೆಯಾಗದ ರೀತಿಯಲ್ಲಿ ಧ್ವನಿವರ್ಧಕದ ಧ್ವನಿಯನ್ನು ಮಿತವಾಗಿ ಉಪಯೋಗಿಸುವ ನಿಟ್ಟಿನಲ್ಲಿ ಕ್ರಮ ವಹಿಸುವುದು.

• ಸಾರ್ವಜನಿಕರಿಗೆ, ಹಿರಿಯ ನಾಗರೀಕರಿಗೆ, ರೋಗಿಗಳಿಗೆ ತೊಂದರೆಯಾಗದಂತೆ ರಾತ್ರಿ 10-00 ಗಂಟೆಯ ನಂತರ ಬೆಳಿಗ್ಗೆ 06-00 ಗಂಟೆಯವರೆಗೆ ಯಾವುದೇ ಪಟಾಕಿ ಸಿಡಿಸಬಾರದೆಂದು ಸೂಚನೆ ನೀಡುವುದರ ಜೊತೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳತಕ್ಕದ್ದು.

5. ಕೆಲವು ವ್ಯಕ್ತಿಗಳು ಸಂಸ್ಥೆಗಳ ಹೆಸರಿನಲ್ಲಿ ಸಾರ್ವಜನಿಕರು ಮತ್ತು ವ್ಯಾಪಾರಸ್ಥರಿಂದ ಉತ್ಸವದ ಆಚರಣೆಗೆ ಬಲವಂತವಾಗಿ ಹಣ, ವಂತಿಕೆಯನ್ನು ವಸೂಲಿ ಮಾಡುವ ಸಾಧ್ಯತೆಗಳಿದ್ದು, ಇಂತಹ ಕೃತ್ಯಗಳಿಗೆ ಒಳಗಾದ ವ್ಯಕ್ತಿಗಳು ದೂರು ಕೊಡಲು ಮುಂದೆ ಬರುವುದಿಲ್ಲ. ಆದ್ದರಿಂದ ಸಂಬಂಧಪಟ್ಟ ಠಾಣೆಗಳ ಠಾಣಾಧಿಕಾರಿಗಳು ತಮ್ಮ ಠಾಣಾ ವ್ಯಾಪ್ತಿಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ, ಈ ರೀತಿಯಾಗಿ ಬಲವಂತವಾಗಿ ಹಣ ಸಂಗ್ರಹಿಸುವ ವ್ಯಕ್ತಿಗಳ ಮತ್ತು ಸಂಘ ಸಂಸ್ಥೆಗಳ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳತಕ್ಕದ್ದು. ಬಲವಂತವಾಗಿ ಹಣ ಸಂಗ್ರಹಿಸುವ ವ್ಯಕ್ತಿಗಳ ಮತ್ತು ಸಂಘ ಸಂಸ್ಥೆಗಳ ವಿರುದ್ಧ, ಯಾವುದೇ ಸಾರ್ವಜನಿಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಲ್ಲಿ, ತಕ್ಷಣವೇ ಕಾನೂನು ರೀತಿಯ ಕ್ರಮ ಕೈಗೊಳ್ಳುವುದು.

6. ಗಣಪತಿ ಉತ್ಸವಕ್ಕೆಂದು ಹೇಳಿ, ಹಣ ಕೇಳುವ ನೆಪದಲ್ಲಿ ದುಷ್ಕರ್ಮಿಗಳು ಮನೆಯೊಳಕ್ಕೆ ಪ್ರವೇಶಿಸಿ, ದರೋಡೆ, ಸುಲಿಗೆಯಂತಹ ಕೃತ್ಯಗಳನ್ನು ನಡೆಸುವ ಸಾಧ್ಯತೆಗಳಿರುವುದರಿಂದ, ಠಾಣಾಧಿಕಾರಿಗಳು ಈ ಬಗ್ಗೆ ಸೂಕ್ತ ತಿಳುವಳಿಕೆಯನ್ನು / ಮಾರ್ಗದರ್ಶನಗಳನ್ನು ಸಾರ್ವಜನಿಕರಿಗೆ ನೀಡುವುದು.

7. ಉತ್ಸವಕ್ಕೆ ಮುಂಚಿತವಾಗಿ ನಾಗರೀಕ ಸಮಿತಿ, ಮೊಹಲ್ಲಾ ಸಮಿತಿ, ಕಾವಲು ಸಮಿತಿ ಮತ್ತಿತರ ಎಲ್ಲಾ ಕೋಮಿನ ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಕರೆಯಿಸಿ, ಠಾಣಾ, ಉಪ ವಿಭಾಗ ಮತ್ತು ವಿಭಾಗೀಯ ಮಟ್ಟದಲ್ಲಿ ಕೋಮು ಸೌಹಾರ್ದ ಸಭೆಯನ್ನು ಆಯೋಜಿಸಿ, ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸೂಕ್ತ ಸಲಹೆಗಳನ್ನು ನೀಡುವುದು.

8. ಗಣಪತಿ ವಿಗ್ರಹವನ್ನು ಪ್ರತಿಷ್ಟಾಪಿಸುವ, ಸಾಂಸ್ಕೃತಿಕ ಕಾರ್ಯಕ್ರಮ ನಡೆಸುವ ಜಾಗಗಳಲ್ಲಿ ವ್ಯವಸ್ಥಾಪಕರಿಂದ ಮುಂಚಿತವಾಗಿ ಕಾರ್ಯಕ್ರಮದ ಬಗ್ಗೆ ಲಿಖಿತ ಕೋರಿಕೆಯನ್ನು ಸ್ವೀಕರಿಸಿ, ಸ್ಥಳದಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಏರ್ಪಡಿಸುವುದು.

9. ಪ್ರತಿಯೊಂದು ಗಣಪತಿ ವಿಗ್ರಹ ಪ್ರತಿಷ್ಟಾಪನೆ ಮಾಡುವ ಜಾಗ ಮತ್ತು ಚಪ್ಪರ ಹಾಕಿರುವ ಜಾಗಗಳಲ್ಲಿ ಎಲ್ಲಾ ಸಮಯದಲ್ಲಿ ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಚಪ್ಪರ ಹಾಗೂ ಗಣಪತಿ ವಿಗ್ರಹದ ರಕ್ಷಣೆಯನ್ನು ಸಂಬಂಧಪಟ್ಟ ವ್ಯವಸ್ಥಾಪಕರೇ /ಆಯೋಜಕರೇ ಸ್ವಯಂಸೇವಕರನ್ನು ನೇಮಿಸಿಕೊಳ್ಳುವಂತೆ ಠಾಣಾಧಿಕಾರಿಗಳು ಸೂಕ್ತ ಸಲಹೆಗಳನ್ನು ನೀಡುವುದು.

10. ಗಣಪತಿ ವಿಗ್ರಹ ಪ್ರತಿಷ್ಠಾಪನಾ ಸ್ಥಳದಲ್ಲಿ ಹಾಕಿರುವ ಪೆಂಡಾಲ್ | ಚಪ್ಪರಗಳಲ್ಲಿ ಕಡ್ಡಾಯವಾಗಿ Fire Extinguisher ಗಳನ್ನು ಅಳವಡಿಸಿಕೊಳ್ಳುವಂತೆ ಆಯೋಜಕರಿಗೆ ತಿಳಿಸುವುದು.

11. ಗಣಪತಿ ವಿಗ್ರಹ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಹಾಕಿರುವ Stage ಗಳ Stability ಬಗ್ಗೆ ಸಂಬಂಧಪಟ್ಟವರಿಂದ ದೃಢಪಡಿಸಿಕೊಂಡಿರುವ ಬಗ್ಗೆ ದೃಢೀಕರಣ ಪತ್ರವನ್ನು ಪಡೆದುಕೊಳ್ಳುವಂತೆ ಆಯೋಜಕರಿಗೆ ಸೂಚಿಸುವುದು. 12. ಗಣಪತಿ ವಿಗ್ರಹ ಪ್ರತಿಷ್ಠಾಪನಾ ಸ್ಥಳಗಳಲ್ಲಿ ಕನಿಷ್ಟ 5 ಸಿ.ಸಿ. ಟಿ.ವಿ.ಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಆಯೋಜಕರಿಗೆ ಸೂಚಿಸುವುದು.

13. ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆ ಮಾಡುವ ದಿನದಿಂದ ವಿಗ್ರಹಗಳ ವಿಸರ್ಜನೆ ಮುಗಿಯುವವರೆಗೂ ಸ್ಥಳೀಯ ಪೊಲೀಸರನ್ನು ಸಂಬಂಧಪಟ್ಟ ಸ್ಥಳಗಳಲ್ಲಿ ತಪ್ಪದೇ ನೇಮಿಸಲು ಅಗತ್ಯ ಕ್ರಮ ಕೈಗೊಳ್ಳಲು ಎಲ್ಲಾ ವಿಭಾಗೀಯ ಉಪ ಪೊಲೀಸ್ ಆಯುಕ್ತರುರವರುಗಳಿಗೆ ಸೂಚಿಸಲಾಗಿದೆ.

14. ಗಣಪತಿ ವಿಗ್ರಹ ವಿಸರ್ಜನೆಯ ಸಮಯ, ಮಾರ್ಗ ಮತ್ತು ಭಾಗವಹಿಸುವವರ ಸಂಖ್ಯೆಯನ್ನು ಮೊದಲೇ ತಿಳಿದುಕೊಂಡು, ಎಲ್ಲಾ ವಿಸರ್ಜನಾ ಮೆರವಣಿಗೆಗಳಿಗೂ ಸೂಕ್ತ ಭದ್ರತಾ ವ್ಯವಸ್ಥೆಯನ್ನು ಏರ್ಪಡಿಸತಕ್ಕದ್ದು. ಮೆರವಣಿಗೆ, ವಿಸರ್ಜನೆ ಹಾಗೂ ಆನಂತರವೂ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಮುನ್ನೆಚ್ಚರಿಕೆಯ ಕ್ರಮವನ್ನು ಕೈಗೊಳ್ಳತಕ್ಕದ್ದು, ಯಾವುದೇ ಕಾರಣಕ್ಕೂ ಇಂತಹ ವಿಸರ್ಜನಾ ಮೆರವಣಿಗೆಗಳು ರಾತ್ರಿ 10-00 ಗಂಟೆಯ ನಂತರ ನಡೆಯಲು ಅವಕಾಶ ಕೊಡಬಾರದು. ಮುಖ್ಯ ಉತ್ಸವಗಳಲ್ಲಿ ಹಿರಿಯ ಅಧಿಕಾರಿಗಳು ಖುದ್ದಾಗಿ ಹಾಜರಿದ್ದು, ಸೂಕ್ತ ಪೊಲೀಸ್ ಬಂದೋಬಸ್ತ್ ಮತ್ತು ಸಂಚಾರ ವ್ಯವಸ್ಥೆಯನ್ನು ಏರ್ಪಡಿಸಿ, ಉತ್ಸವದ ಬಂದೋಬಸ್ತ್ ಮೇಲ್ವಿಚಾರಣೆ ನೋಡಿಕೊಳ್ಳುವುದು.

15. ಗಣೇಶ ವಿಗ್ರಹಗಳ ವಿಸರ್ಜನೆಯ ಸ್ಥಳದಲ್ಲಿ ಹಾಗೂ ವಿಸರ್ಜನಾ ಮೆರವಣಿಗೆಯಲ್ಲಿ ವ್ಯವಸ್ಥಾಪಕರು ಮುಂಜಾಗ್ರತಾ ಕ್ರಮವಾಗಿ ಸ್ವಯಂ ಸೇವಕರನ್ನು ನೇಮಿಸಿಕೊಂಡು, ಸ್ಥಳೀಯ ಪೊಲೀಸರ ಜೊತೆ ಸಹಕರಿಸಲು ಸಂಬಂಧಪಟ್ಟ ಗಣೇಶೋತ್ಸವ ಆಯೋಜಕರಿಗೆ ಸೂಚಿಸುವುದು. ವಿಸರ್ಜನಾ ಸ್ಥಳದಲ್ಲಿ ಅವಶ್ಯಕ ಕ್ರೇನ್‌ಗಳು ಮತ್ತು ಸಾಕಷ್ಟು ಸಂಖ್ಯೆಯ ಮುಳುಗು ತಜ್ಞರು ಇರುವ ಹಾಗೆ ಖಾತರಿಪಡಿಸಿಕೊಳ್ಳುವುದು, ವಿಸರ್ಜನಾ ಸ್ಥಳದಲ್ಲಿ ಅವಶ್ಯಕ ವಿದ್ಯುತ್‌ ದೀಪ / ಜನರೇಟರ್ ವ್ಯವಸ್ಥೆ ಹಾಗೂ ಧ್ವನಿವರ್ಧಕ ವ್ಯವಸ್ಥೆ ಇರುವ ಹಾಗೆ ಖಾತರಿ ಪಡಿಸಿಕೊಳ್ಳುವುದು.

16. ಗಣಪತಿ ವಿಸರ್ಜನಾ ಮೆರವಣಿಗೆಯು, ಧಾರ್ಮಿಕ ಸ್ಥಳಗಳ ಬಳಿ ಸಂಚರಿಸುವ ಸಮಯದಲ್ಲಿ, ಸ್ಥಳದಲ್ಲಿ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡು, ಸೂಕ್ತ ಪೊಲೀಸ್ ಬಂದೋಬಸ್ತ್ ಮತ್ತು ಸಂಚಾರ ವ್ಯವಸ್ಥೆಯನ್ನು ಏರ್ಪಡಿಸುವುದು. ಸಂಬಂಧಿಸಿದ ಮಸೀದಿ ಕಮಿಟಿ ಸದಸ್ಯರು ಸಹ ಮೆರವಣಿಗೆ ಸಂದರ್ಭದಲ್ಲಿ ಹಾಜರಿರಲು ತಿಳುವಳಿಕೆ ನೀಡುವುದು. ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಅಗತ್ಯವಿರುವ ಸಂಖ್ಯೆಯಲ್ಲಿ ಮಪ್ತಿಯಲ್ಲಿಯೂ ಸಹ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸುವುದು.

17. ವಿಸರ್ಜನಾ ಮಾರ್ಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಸೈ-ಸೆಂಟ್ರಗಳನ್ನು ನೇಮಿಸಿ ಅವರುಗಳಿಂದ ಅಕ್ಕಪಕ್ಕದ ರಸ್ತೆಯಲ್ಲಿ ನಡೆಯುವ ವಿಶೇಷ ಬೆಳವಣಿಗೆಗಳ ಬಗ್ಗೆ ಪೂರ್ವ ಮಾಹಿತಿ ಸಂಗ್ರಹಿಸುವುದು ಹಾಗೂ ಸೈ-ಸೆಂಟ್ರಿ ರವರಿಗೆ ತಿಳುವಳಿಕೆ ನೀಡುವುದು ಹಾಗೂ ಕಡ್ಡಾಯವಾಗಿ ವಾಕಿಟಾಕಿ ನೀಡುವುದು.

18. ಮೆರವಣಿಗೆ ಸಂದರ್ಭದಲ್ಲಿ ಮೆರವಣಿಗೆ ಮಾರ್ಗ ಮತ್ತು ಅಕ್ಕಪಕ್ಕದ ರಸ್ತೆಗಳಲ್ಲಿ ವಿಡಿಯೋಗ್ರಫಿ ಏರ್ಪಡಿಸಿ ಎಲ್ಲಾ ಆಗುಹೋಗುಗಳನ್ನು ಚಿತ್ರೀಕರಿಸುವುದು ಮತ್ತು ಮಾರ್ಗದಲ್ಲಿ ಬರುವ ಖಾಸಗಿ ಒಡೆತನದ ಸಿ.ಸಿ.ಟಿ.ವಿ. ಕ್ಯಾಮೆರಗಳು ರಸ್ತೆ ಕಡೆ ಮುಖ ಮಾಡಿದ್ದಲ್ಲಿ ಅವುಗಳ ವಿಡಿಯೋ ಫೂಟೇಜ್ ಪಡೆಯಲು ಕ್ರಮ ವಹಿಸುವುದು.

19. ಮೆರವಣಿಗೆ ಸಂದರ್ಭದಲ್ಲಿ ಬದಲಿ ಚಾಲಕರನ್ನು ಹೆಚ್ಚುವರಿಯಾಗಿ ನೇಮಿಸಿಕೊಳ್ಳುವ ಬಗ್ಗೆ ಹಾಗೂ ಜನರೇಟರ್ ವ್ಯವಸ್ಥೆಯನ್ನು ಮಾಡಿಕೊಳ್ಳಲು ಸಂಘಟಕರಿಗೆ ಸೂಚನೆ ನೀಡಿ ಅವರು ಈ ವ್ಯವಸ್ಥೆಯನ್ನು ಮಾಡಿಕೊಂಡ ಬಗ್ಗೆ ಖಾತರಿಪಡಿಸಿಕೊಳ್ಳತಕ್ಕದ್ದು.

20. ಸಾಕಷ್ಟು ಸಂಖ್ಯೆಯಲ್ಲಿ ಟಾಚ್‌ಲೈಟ್, ಸರ್ಚ್ ಲೈಟ್ ಮತ್ತು ಆಸ್ಕಾ ಲೈಟ್‌ಗಳನ್ನು ವ್ಯವಸ್ಥೆ ಮಾಡಿಕೊಳ್ಳತಕ್ಕದ್ದು. 21. ಅಗ್ನಿಶಾಮಕ, ಆಂಬುಲೆನ್ಸ್ ಗಳನ್ನು ಸನ್ನದ್ದ ಸ್ಥಿತಿಯಲ್ಲಿರಿಸಿಕೊಳ್ಳುವುದು.

22.ವಿಸರ್ಜನಾ ಮೆರವಣಿಗೆ ಮಾರ್ಗದಲ್ಲಿ ಹಾಗೂ ವಿಸರ್ಜನಾ ಸ್ಥಳದಲ್ಲಿ ಕಡಿತವಿಲ್ಲದೇ ವಿದ್ಯುತ್ ಪೂರೈಕೆ ಬಗ್ಗೆ ಬೆಸ್ಕಾಂ ಉಸ್ತುವಾರಿ ಅಧಿಕಾರಿಗಳಿಗೆ ಲಿಖಿತವಾಗಿ ಕೋರಿಕೆ ಸಲ್ಲಿಸುವುದು.

23. ಗಣಪತಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ಇರುವಂತಹ ಪ್ಲೆಕ್ಸ್, ಬ್ಯಾರ್ಸ್ , ಬಂಟಿಂಗ್ಸ್‌ಗಳನ್ನು ತಪಾಸಣೆ ಮಾಡುವುದರ ಜೊತೆಗೆ, ಕಾನೂನು ಸುವ್ಯವಸ್ಥೆಗೆ ಭಂಗವಾಗದ ರೀತಿಯಲ್ಲಿ ಕ್ರಮ ಕೈಗೊಳ್ಳುವುದು. 24. ನಗರದ ಎಲ್ಲಾ ವಿಭಾಗಗಳ ಉಪ ಪೊಲೀಸ್ ಕಮೀಷನರ್‌ರವರುಗಳು ಎಲ್ಲಾ ಪೊಲೀಸ್ ಠಾಣೆಗಳಿಂದ ಮಾಹಿತಿಯನ್ನು ಪಡೆದು, ಕ್ರೂಢೀಕೃತ ವರದಿಯೊಂದಿಗೆ ಭದ್ರತಾ ವ್ಯವಸ್ಥೆಯ ಯೋಜನೆಯನ್ನು ನುಡಿ ತಂತ್ರಾಂಶದಲ್ಲಿ ತಯಾರಿಸಿ, ಈ-ಮೇಲ್ ableintbcp@ksp.gov.in ಗೆ ಹಾಗೂ ಉಪ ಪೊಲೀಸ್ ಆಯುಕ್ತರು, ಗುಪ್ತವಾರ್ತೆ, ಬೆಂಗಳೂರು ನಗರ ರವರ ಹೆಸರಿನ ಲಕೋಟೆಯಲ್ಲಿ ಒಂದು ಪ್ರತಿಯನ್ನು ದಿನಾಂಕ:30/08/2024 ರಂದು ಬೆಳಿಗ್ಗೆ ಗಂಟೆಯೊಳಗೆ ಮರು ಜ್ಞಾಪನಗಳಿಗೆ ಅವಕಾಶ ನೀಡದಂತೆ ತಪ್ಪದೇ ಕಳುಹಿಸಿಕೊಡಲು ಸೂಚಿಸಲಾಗಿದೆ.

ಮುಂದುವರೆದು 2024ನೇ ಸಾಲಿನ ಗಣೇಶ ಹಬ್ಬದ ಸಂಬಂಧ ಮಾಹಿತಿಯನ್ನು ಗೂಗಲ್‌ಶೀಟ್ ರಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಒದಗಿಸುವಂತೆ ಕೋರಲಾಗಿದೆ. 25. ಎಲ್ಲಾ ಠಾಣಾಧಿಕಾರಿಗಳು ತಮ್ಮ ತಮ್ಮ ಠಾಣಾ ವ್ಯಾಪ್ತಿಯಲ್ಲಿರುವ ರೌಡಿಗಳು (A, B & C) ಕೋಮು ಗಲಭೆಕೋರರು, ಗೂಂಡಾಗಳು, ಮತ್ತಿತರ ಸಮಾಜ ಘಾತುಕ ವ್ಯಕ್ತಿಗಳನ್ನು ಮುಂಜಾಗ್ರತಾ ಕ್ರಮವಾಗಿ ಬಂಧಿಸಲು ಕ್ರಮ ಕೈಗೊಳ್ಳತಕ್ಕದ್ದು. ಹೀಗೆ ಬಂಧಿಸಿದ ವ್ಯಕ್ತಿಯ ಹೆಸರು ಇನ್ನಿತರ ವಿವರಗಳನ್ನು ವಿಭಾಗವಾರು ಕ್ರೂಢೀಕರಿಸಿ, ಸಂಬಂಧಪಟ್ಟ ವಿಭಾಗೀಯ ಉಪ ಪೊಲೀಸ್ ಆಯುಕ್ತರುಗಳು ವರದಿಯನ್ನು ಆಯಾ ದಿನವೇ ಉಪ ಪೊಲೀಸ್ ಆಯುಕ್ತರು, ಗುಪ್ತವಾರ್ತೆ, ಬೆಂಗಳೂರು ನಗರ ರವರ ಹೆಸರಿನ ಲಕೋಟೆಯಲ್ಲಿ ತಪ್ಪದೆ ಕಳುಹಿಸಿಕೊಡತಕ್ಕದ್ದು ಹಾಗೂ ಈ-ಮೇಲ್ ableintbcp@ksp.gov.in ಗೆ ಕಳುಹಿಸುವುದು.

26. ಗಣಪತಿ ವಿಗ್ರಹಗಳ ಪ್ರತಿಷ್ಟಾಪನೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮೆರವಣಿಗೆ, ವಿಸರ್ಜನೆ ಸ್ಥಳಗಳಲ್ಲಿ ಸಂಬಂಧಪಟ್ಟ ಸಂಚಾರಿ ವಿಭಾಗದ ಉಪ ಪೊಲೀಸ್‌ ಆಯುಕ್ತರುಗಳು, ಸೂಕ್ತ ಸಂಚಾರ ವ್ಯವಸ್ಥೆಯನ್ನು ಏರ್ಪಡಿಸಲು ಸೂಚಿಸಲಾಗಿದೆ ಹಾಗೂ ಏರ್ಪಡಿಸಿದ ಬಂದೋಬಸ್ತ್ ಯೋಜನೆಯನ್ನು ಮೇಲೆ ನಮೂದಿಸಿರುವ ಇ-ಮೇಲ್‌ ಕಳುಹಿಸಲು ಸೂಚಿಸಲಾಗಿದೆ.

27.ಗಣಪತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆಯ ಸ್ಥಳದಲ್ಲಿ ಯಾವುದೇ ವಿವಾದಗಳಿದ್ದಲ್ಲಿ ಅಥವಾ ಈ ಹಿಂದೆ ಯಾವುದಾದರೂ ವಿವಾದಕ್ಕೆ ಸಂಬಂಧಪಟ್ಟಂತೆ ಗಲಭೆ, ಅಸಮಾಧಾನ ಉಂಟಾಗಿದ್ದರೆ ಇಂತಹ ಸ್ಥಳಗಳನ್ನು ಗುರುತಿಸಿ, ಸಂಬಂಧಪಟ್ಟ ಉಪ ಪೊಲೀಸ್ ಆಯುಕ್ತರುಗಳು ಖುದ್ದಾಗಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಂಡು ವರದಿಯನ್ನು ಉಪ ಪೊಲೀಸ್ ಆಯುಕ್ತರು, ಗುಪ್ತವಾರ್ತೆ, ಬೆಂಗಳೂರು ನಗರ ರವರಿಗೆ ಕಳುಹಿಸಲು ಸೂಚಿಸಲಾಗಿದೆ.

28. ಸಾಮೂಹಿಕ ಗಣೇಶೋತ್ಸವದ ಮೆರವಣಿಗೆ ಹಾಗೂ ವಿಸರ್ಜನೆಯ ಬಗ್ಗೆ ಮುಂಚಿತವಾಗಿ ಕಾರ್ಯಕ್ರಮ ನಡೆಸುವ ಆಯೋಜಕರಿಂದ ತಿಳಿದುಕೊಂಡು, ತಮಗೆ ಬೇಕಾಗುವ ಅಧಿಕಾರಿ ಹಾಗೂ ಸಿಬ್ಬಂದಿಗಳ ಬಗ್ಗೆ ವಿವರವನ್ನು 5 ದಿನ ಮುಂಚಿತವಾಗಿಯೇ, ಈ ಕಛೇರಿಗೆ ಮನವಿ ಸಲ್ಲಿಸುವುದು.

29. ಸಭೆ ಮೆರವಣಿಗೆಗಳ ಭದ್ರತಾ ವ್ಯವಸ್ಥೆಗೆ ಬೇಕಾಗುವ ಗೃಹ ರಕ್ಷಕ ದಳ, ಕೆ.ಎಸ್.ಆರ್.ಪಿ | ಸಿ.ಎ.ಆರ್. ತುಕಡಿಗಳು, ಫೈರ್‌ಟೆಂಡರ್, ಆಂಬುಲೆನ್ಸ್ ವಾಹನಗಳ ಬೇಡಿಕೆಯನ್ನು, ಸಾಕಷ್ಟು ಮುಂಚಿತವಾಗಿ ನಗರ ನಿಯಂತ್ರಣ ಕೋಣೆಗೆ ಕಳುಹಿಸಿ, ಪಡೆದುಕೊಳ್ಳುವ ವ್ಯವಸ್ಥೆಯನ್ನು ಸಂಬಂಧಪಟ್ಟ ವಿಭಾಗೀಯ ಉಪ ಪೊಲೀಸ್ ಆಯುಕ್ತರುಗಳು ಮಾಡಿಕೊಳ್ಳತಕ್ಕದ್ದು.

30. ನಗರದ ಎಲ್ಲಾ ವಿಭಾಗಗಳ ಉಪ ಪೊಲೀಸ್ ಆಯುಕ್ತರುಗಳು, ಮೇಲಿನ ಸೂಚನೆಗಳನ್ನು ಎಲ್ಲಾ ಪೊಲೀಸ್ ಠಾಣೆಗಳ ಠಾಣಾಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಕ್ತ ನಿರ್ದೇಶನವನ್ನು ನೀಡುವುದು. ನಾಗರೀಕ ಸಮಿತಿ, ಮೊಹಲ್ಲಾ ಸಮಿತಿ, ನೆರೆಹೊರೆ ಕಾವಲು ಸಮಿತಿ ಹಾಗೂ ಇನ್ನಿತರ ಎಲ್ಲಾ ಕೋಮಿನ ಸಂಘ ಸಂಸ್ಥೆಗಳ ಮುಖಂಡರ ಮುಖ್ಯವಾದ ಸಭೆಯನ್ನು ಏರ್ಪಡಿಸಿ, ನೀವು ಸಹ ಹಾಜರಾಗಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಸಲುವಾಗಿ ಸಲಹೆ ಸೂಚನೆಗಳನ್ನು ನೀಡತಕ್ಕದ್ದು ಹಾಗೂ ಸಭೆಯನ್ನು ನಡೆಸಿದ ಬಗ್ಗೆ ಪಾಲನಾ ವರದಿಯನ್ನು ಈ ಕಛೇರಿಗೆ ಸಲ್ಲಿಸಲು ಕೋರಲಾಗಿದೆ.

BIG NEWS : ಗೌರಿ-ಗಣೇಶ ಹಬ್ಬಕ್ಕೆ ಪೊಲೀಸ್ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ : ಈ ನಿಯಮಗಳ ಪಾಲನೆ ಕಡ್ಡಾಯ BIG NEWS: Police issues guidelines for Gauri-Ganesh festival: Adherence to these rules is mandatory
Share. Facebook Twitter LinkedIn WhatsApp Email

Related Posts

BREAKING : ರೇಣುಕಾಸ್ವಾಮಿ ಹತ್ಯೆ ಕೇಸ್ : ಸುಪ್ರೀಂಕೋರ್ಟ್ ನಲ್ಲಿ ನಟ ದರ್ಶನ್ ಜಾಮೀನು ರದ್ದು ಅರ್ಜಿ ವಿಚಾರಣೆ ಮುಂದೂಡಿಕೆ.!

21/05/2025 11:02 AM1 Min Read

BREAKING : ಮನೆಯಲ್ಲಿ `ಸಿಲಿಂಡರ್’ ಬದಲಾಯಿಸುವಾಗ ಇರಲಿ ಎಚ್ಚರ : ಗ್ಯಾಸ್ ಲೀಕ್ ಆಗಿ ಇಬ್ಬರು ಮಹಿಳೆಯರು ಸಾವು.!

21/05/2025 10:58 AM1 Min Read

BREAKING : ಗೃಹಸಚಿವ ಡಾ.ಜಿ.ಪರಮೇಶ್ವರ್ ಒಡೆತನದ  `ಸಿದ್ಧಾರ್ಥ ಶಿಕ್ಷಣ ಸಂಸ್ಥೆ’ ಮೇಲೆ `ED’ ದಾಳಿ | E.D Raid

21/05/2025 10:43 AM1 Min Read
Recent News

BREAKING : ರೇಣುಕಾಸ್ವಾಮಿ ಹತ್ಯೆ ಕೇಸ್ : ಸುಪ್ರೀಂಕೋರ್ಟ್ ನಲ್ಲಿ ನಟ ದರ್ಶನ್ ಜಾಮೀನು ರದ್ದು ಅರ್ಜಿ ವಿಚಾರಣೆ ಮುಂದೂಡಿಕೆ.!

21/05/2025 11:02 AM

BREAKING : ಮನೆಯಲ್ಲಿ `ಸಿಲಿಂಡರ್’ ಬದಲಾಯಿಸುವಾಗ ಇರಲಿ ಎಚ್ಚರ : ಗ್ಯಾಸ್ ಲೀಕ್ ಆಗಿ ಇಬ್ಬರು ಮಹಿಳೆಯರು ಸಾವು.!

21/05/2025 10:58 AM

ಭಾರತೀಯರು ಸುಳ್ಳು ಸುದ್ದಿ, ತಪ್ಪು ಮಾಹಿತಿಗೆ ಹೆಚ್ಚು ಒಳಗಾಗುತ್ತಾರೆ: ಅಧ್ಯಯನ

21/05/2025 10:48 AM

BREAKING : ಗೃಹಸಚಿವ ಡಾ.ಜಿ.ಪರಮೇಶ್ವರ್ ಒಡೆತನದ  `ಸಿದ್ಧಾರ್ಥ ಶಿಕ್ಷಣ ಸಂಸ್ಥೆ’ ಮೇಲೆ `ED’ ದಾಳಿ | E.D Raid

21/05/2025 10:43 AM
State News
KARNATAKA

BREAKING : ರೇಣುಕಾಸ್ವಾಮಿ ಹತ್ಯೆ ಕೇಸ್ : ಸುಪ್ರೀಂಕೋರ್ಟ್ ನಲ್ಲಿ ನಟ ದರ್ಶನ್ ಜಾಮೀನು ರದ್ದು ಅರ್ಜಿ ವಿಚಾರಣೆ ಮುಂದೂಡಿಕೆ.!

By kannadanewsnow5721/05/2025 11:02 AM KARNATAKA 1 Min Read

ನವದೆಹಲಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯ…

BREAKING : ಮನೆಯಲ್ಲಿ `ಸಿಲಿಂಡರ್’ ಬದಲಾಯಿಸುವಾಗ ಇರಲಿ ಎಚ್ಚರ : ಗ್ಯಾಸ್ ಲೀಕ್ ಆಗಿ ಇಬ್ಬರು ಮಹಿಳೆಯರು ಸಾವು.!

21/05/2025 10:58 AM

BREAKING : ಗೃಹಸಚಿವ ಡಾ.ಜಿ.ಪರಮೇಶ್ವರ್ ಒಡೆತನದ  `ಸಿದ್ಧಾರ್ಥ ಶಿಕ್ಷಣ ಸಂಸ್ಥೆ’ ಮೇಲೆ `ED’ ದಾಳಿ | E.D Raid

21/05/2025 10:43 AM

ALERT : ಸಾರ್ವಜನಿಕರೇ ಎಚ್ಚರ : `ಆಧಾರ್ ಕಾರ್ಡ್’ ನಲ್ಲಿ ಈ ತಪ್ಪು ಮಾಡಿದ್ರೆ 3 ವರ್ಷ ಜೈಲು, 1 ಲಕ್ಷ ರೂ.ದಂಡ ಫಿಕ್ಸ್.!

21/05/2025 10:36 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.