ಮುಂಬೈ: ಹದಿಹರೆಯದ ಹುಡುಗ ಚಲಾಯಿಸುತ್ತಿದ್ದ ಎಸ್ ಯುವಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ 24 ವರ್ಷದ ಹಾಲು ಮಾರಾಟಗಾರ ಸಾವನ್ನಪ್ಪಿದ ಘಟನೆ ಮುಂಬೈನ ಗೋರೆಗಾಂವ್ ಪ್ರದೇಶದಲ್ಲಿ ಗುರುವಾರ ನಡೆದಿದೆ
17 ವರ್ಷದ ಹದಿಹರೆಯದವನು ಚಾಲನೆ ಮಾಡುತ್ತಿದ್ದ ಎಸ್ ಯುವಿ ಬೈಕಿಗೆ ಡಿಕ್ಕಿ ಹೊಡೆದಾಗ ತಪ್ಪು ದಿಕ್ಕಿನಲ್ಲಿ ಹೋಗುತ್ತಿತ್ತು ಎಂದು ಆರೋಪಿಸಲಾಗಿದೆ. ನವೀನ್ ವೈಷ್ಣವ್ ದ್ವಿಚಕ್ರ ವಾಹನ ಓಡಿಸುತ್ತಿದ್ದು ಮೃತಪಟ್ಟಿದ್ದಾನೆ.
ಅಪಘಾತಕ್ಕೆ ಕಾರಣವಾದ ಎಸ್ ವಿಯು ಚಾಲನೆ ಮಾಡುತ್ತಿದ್ದ ಅಪ್ರಾಪ್ತ ವಯಸ್ಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಚಾಲಕನಿಗೆ 17 ವರ್ಷ ವಯಸ್ಸಾಗಿರುವುದರಿಂದ, ಎಸ್ ಯುವಿ ಮಾಲೀಕ ಇಕ್ಬಾಲ್ ಜೀವನಿ (48) ಮತ್ತು ಅವರ ಮಗ ಮೊಹಮ್ಮದ್ ಫಜ್ ಇಕ್ಬಾಲ್ ಜೀವನಿ (21) ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಆರೋಪಿಯು ಎಸ್ ಯುವಿ ಮಾಲೀಕರ ಮಗನ ಸ್ನೇಹಿತನಾಗಿದ್ದು, ಅಪಘಾತದ ಸಮಯದಲ್ಲಿ ವಾಹನದಲ್ಲಿ ಇದ್ದನು ಎಂದು ವರದಿಯಾಗಿದೆ. ಹದಿಹರೆಯದ ಚಾಲಕ ಅಪಘಾತದ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದನು, ಆದರೆ ಅವನು ಗಾಯಗೊಂಡು ಪೊಲೀಸರಿಗೆ ಸಿಕ್ಕಿಬಿದ್ದನು.
ಪೊಲೀಸರ ಪ್ರಕಾರ, ಮಲಾಡ್ ನಿವಾಸಿ ವೈಷ್ಣವ್ ಗುರುವಾರ ಮುಂಜಾನೆ ಹಾಲು ವಿತರಣೆಗಾಗಿ ಅಂಧೇರಿ ಕಡೆಗೆ ಹೋಗುತ್ತಿದ್ದಾಗ ಗೋರೆಗಾಂವ್ (ಪೂರ್ವ) ನ ಆರೆ ರಸ್ತೆಯಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಡಿಕ್ಕಿ ಹೊಡೆದಿದೆ.
ಪೊಲೀಸರ ಪ್ರಕಾರ, ಮಲಾಡ್ ನಿವಾಸಿ 24 ವರ್ಷದ ಹಾಲು ಮಾರಾಟಗಾರ ನವೀನ್ ವೈಷ್ಣವ್ ಗುರುವಾರ ಮುಂಜಾನೆ ಹಾಲು ಮಾರಾಟ ಮಾಡಲು ಅಂಧೇರಿಗೆ ತೆರಳುತ್ತಿದ್ದರು