ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್, ಇತ್ತೀಚಿಗೆ ಮನೆ ಊಟಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಇದೀಗ ಜೈಲಿನ ಒಳಗಡೆ ಇರುವ ವ್ಯವಸ್ಥೆ ಬೆಚ್ಚಿ ಬೀಳಿಸಿದೆ. ಹೌದು ದರ್ಶನ್ ಸಿಗರೇಟ್ ಸೇದುತ್ತಾ ಕುಳಿತಿರುವ ಫೋಟೋ ವೈರಲ್ ಆದ ಬೆನ್ನಲ್ಲೇ, ಮತ್ತೊಂದು ಸ್ಫೋಟ ವಾದಂತಹ ಮಾಹಿತಿ ಬಹಿರಂಗವಾಗಿದ್ದು, ಅಲ್ಲಿನ ಜೈಲು ಸಿಬ್ಬಂದಿಗಳೇ ಅವರಿಗೆ ಬೇಕು ಬೇಡವಾದಂತಹ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ
ಹೌದು ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಹೆಸರಿಗಷ್ಟೇ ನಟ ದರ್ಶನ್ ಜೈಲಿನಲ್ಲಿ ಇದ್ದಾರೆ. ಆದರೆ ಜೈಲಾಧಿಕಾರಿಗಳು, ರೌಡಿಗಳಿಂದಲೇ ದರ್ಶನ್ಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಸಿಗರೇಟ್ ಮಾತ್ರವಲ್ಲದೆ ಬೇಕಾದ ಎಲ್ಲಾ ವಸ್ತುಗಳು ಅವರಿಗೆ ಸಿಗುತ್ತಿವೆ. ಯಾವ ವಸ್ತು ಬೇಕು? ಯಾವ ಊಟ ಬೇಕು ಹಾಗೂ ಯಾವ ಹೋಟೆಲ್ನಿಂದ ಬೇಕು ಎನ್ನುವುದರ ಕುರಿತು ಎಲ್ಲವೂ ಅವರಿಗೆ ವ್ಯವಸ್ಥೆ ಮಾಡಲಾಗಿದೆ.
ಅಲ್ಲದೆ ಬನಶಂಕರಿ ಶಿವಾಜಿ ಮಿಲಿಟರಿ ಹೋಟೆಲ್ ನಿಂದಲೇ ಬಿರಿಯಾನಿ ಸಪ್ಲೈ ಆಗುತ್ತದೆ. ಜೊತೆಗೆ ಜೈಲಲ್ಲಿ ಇರೋ ನಟೋರಿಯಸ್ ಗಳ ಜೊತೆ ದರ್ಶನ್ ಎಣ್ಣೆ ಪಾರ್ಟಿ ಮಾಡುತ್ತಿದ್ದಾರೆ. ದರ್ಶನ್ ಇರು ಹೈ ಸೆಕ್ಯೂರಿಟಿ ಬ್ಯಾರಕ್ ನಲ್ಲಿ ಈ ಒಂದು ಪಾರ್ಟಿ ನಡಿತಿದೆ ಎಂದು ಕರಾಳತೆ ಇದೀಗ ಬಹಿರಂಗವಾಗಿದೆ.
ಇನ್ನು ನಿನ್ನೆ ದರ್ಶನ್ ಅವರು ರೌಡಿ ಶೀಟರ್ ವಿಲ್ಸನ್ ಗಾರ್ಡನ್ ನಾಗ ಹಾಗೂ ಪ್ರಕರಣದ 11ನೇ ಆರೋಪಿ ಆಗಿರುವ ದರ್ಶನ್ ಮ್ಯಾನೇಜರ್ ನಾಗರಾಜ್ ಹಾಗು ಕುಳ್ಳ ಸೀನ ಎನ್ನುವವರ ಜೊತೆ ದರ್ಶನ್ ಕುಳಿತುಕೊಂಡು ಸಿಗರೇಟ್ ಸೇದುತ್ತಾ ಕುಳಿತಿರುವ ಫೋಟೋ ವೈರಲ್ ಆಗಿತ್ತು. ಅದಾದ ಬಳಿಕ ಕೆಲವೇ ಗಂಟೆಗಳಲ್ಲಿ ವಿಡಿಯೋ ಕಾಲ್ ನಲ್ಲಿ ಮಾತನಾಡಿರುವ ವಿಡಿಯೋ ಕೂಡ ವೈರಲ್ ಆಗಿತ್ತು