ತುಮಕೂರು : ತಡೆಗೋಡೆ ಇಲ್ಲದ ಪರಿಣಾಮವಾಗಿ ಕಾರು ಮೂರು ಪಲ್ಟಿಯಾಗಿದ್ದರು ಸಹ ಕಾರಿನಲ್ಲಿದ್ದ ನಾಲ್ವರಿಗೆ ಗಂಭೀರವಾದ ಗಾಯಗಳಾಗಿದ್ದು ಅದೃಷ್ಟ ವರ್ಷ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತುಮಕೂರು ಜಿಲ್ಲೆಯ ಶೀರಾ ತಾಲೂಕಿನ ಚಿಕ್ಕನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.
ಹೌದು ಅಪಘಾತದ ವೇಳೆ ಕಾರು ತಡೆಗೋಡೆ ಇಲ್ಲದ್ದರಿಂದ ಮೂರು ಬಾರಿ ಪಲ್ಟಿ ಹೊಡೆದಿದೆ. ಜ್ ಈ ವೇಳೆ ಕಾರಿನಲ್ಲಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ.ತಕ್ಷಣ ಅವರನ್ನು ಶೀರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನಲ್ಲಿ ಬೆಂಗಳೂರಿನಿಂದ ಬಳ್ಳಾರಿ ಕಡೆಗೆ ಕುಟುಂಬ ಒಂದು ಹೊರಟಿತ್ತು. ತಡೆಗೋಡೆ ಇಲ್ಲದೆ ಕಾರು 3 ಪಲ್ಟಿ ಹೊಡೆದಿದೆ.
ಈ ವೇಳೆ ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರವಾದ ಗಾಯಗಳಾಗಿದ್ದು, ಇನ್ನಿಬ್ಬರಿಗೆ ಕೈ ಕಾಲು ಮುರಿದಿದೆ. ಶೀರಾ ತಾಲೂಕಿನ ಆಸ್ಪತ್ರೆಯಲ್ಲಿ ಗಯಾಳುಗಳನ್ನು ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಪದೇ-ಪದೇ ಅಪಘಾತಗಳು ಸಂಭವಿಸುತ್ತಲೇ ಇವೆ. ಈ ರೀತಿ ಅಪಘಾತಗಳಿಂದ ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.
ಈ ವೇಳೆ ಸ್ಥಳೀಯ ನಿವಾಸಿಗಳು ಕೆಲಕಾಲ ರಸ್ತೆ ತಡೆದು ಆಕ್ರೋಶ ಅವರ ಹಾಕಿದರು. ಅವೈಜ್ಞಾನಿಕ ಕಾಮಗಾರಿ ಅಪಘಾತಗಳಿಗೆ ಕಾರಣ ಆಗಿದೆ.ಇದೆ ಸ್ಥಳದಲ್ಲಿ ಇದುವರೆಗೂ ನೂರಕ್ಕೂ ಅಧಿಕ ಜನರು ಮೃತಾಪಟ್ಟಿದ್ದಾರೆ ಎಂದು ನಿರಂತರ ಅಪಘಾತದ ಬಗ್ಗೆ ಚಿಕ್ಕನಹಳ್ಳಿ ನಿವಾಸಿಗಳು ಆರೋಪಿಸಿದ್ದಾರೆ.