ತುಮಕೂರು : ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಸಂಕಷ್ಟಕ್ಕೆ ಸಿಲುಕಿದ್ದು, ಅವರಿಗೆ ಸಂಪುಟದ ಎಲ್ಲಾ ಸಚಿವರು, ಶಾಸಕರು ಸೇರಿದಂತೆ ಹೈಕಮಾಂಡ್ ಕೂಡ ಬೆಂಬಲ ಸೂಚಿಸಿದ್ದು, ಇದೀಗ ಮಾಜಿ ಸಚಿವ ಸಿಎಂ ಇಬ್ರಾಹಿಂ ಕೂಡ ಸಿದ್ದರಾಮಯ್ಯ ಪರ ಬ್ಯಾಟಿಂಗ್ ಬಿಸಿದ್ದು ಸಿದ್ದರಾಮಯ್ಯ ಒಬ್ಬ ಪ್ರಾಮಾಣಿಕ ಮನುಷ್ಯ. ಸೈಕಲ್ ಮೇಲೆ ತಿರುಗಾಡಿ ಪಕ್ಷೇತರ ಶಾಸಕನಾಗಿದ್ದ ಎಂದು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಸಿಎಂ ಇಬ್ರಾಹಿಂ ಈ ಕುರಿತು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಯಾರು ಎಂದು ಇಡೀ ರಾಜ್ಯಕ್ಕೆ ಗುತ್ತಿಗೊತ್ತಿದೆ. ರಾಜ್ಯದ ಸಿಎಂ ಗೆ ಮೂರುವರೆ ಎಕರೆ ಜಮೀನು ದೊಡ್ಡದ? ಎಂದು ಪ್ರಶ್ನಿಸಿದರು.
ಪಾಪ ಸಿದ್ದರಾಮಯ್ಯ ಪ್ರಾಮಾಣಿಕ ಮನುಷ್ಯ ಸಿದ್ದರಾಮಯ್ಯ ನನಗೆ ಮೊದಲಿನಿಂದ ಗೊತ್ತು ಸೈಕಲ್ ನಲ್ಲಿ ತಿರುಗಾಡಿ ಪಕ್ಷೇತರ ಶಾಸಕನಾಗಿದ್ದ ಮನುಷ್ಯ ಸಿದ್ದರಾಮಯ್ಯ ಹಣ ಮಾಡಲಿಲ್ಲ ಆದರೆ ಜನ ಸಂಪಾದಿಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನನ್ನ ಸ್ನೇಹಿತರು ಸ್ನೇಹವೇ ಬೇರೆ ಪಕ್ಷವೇ ಬೇರೆ ಎಂದು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ಸೇಮೆ ಇಬ್ರಾಹಿಂ ಹೇಳಿಕೆ ನೀಡಿದರು.