Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಪಾಕಿಸ್ತಾನಕ್ಕೆ ಮತ್ತೊಂದು ಬಿಗ್ ಶಾಕ್ : 25 ವರ್ಷಗಳ ನಂತರ `ಮೈಕ್ರೋಸಾಫ್ಟ್’ ಬಂದ್ | Microsoft

05/07/2025 12:15 PM

SHOCKING : ಬೆಳಗಾವಿಯಲ್ಲಿ ಘೋರ ಘಟನೆ : ಕರ್ತವ್ಯ ನಿರತ ‘ASI’ ‘ಹೃದಯಾಘಾತಕ್ಕೆ’ ಬಲಿ

05/07/2025 12:13 PM

BREAKING : ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ‘RSS’ ಬ್ಯಾನ್ ಫಿಕ್ಸ್ : ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

05/07/2025 12:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕೇಂದ್ರದ ‘OBC ಪಟ್ಟಿ’ಗೆ ‘ವೀರಶೈವ ಲಿಂಗಾಯತ ಸಮುದಾಯ’ ಸೇರ್ಪಡೆಗೆ ಪ್ರಯತ್ನ: ಸಂಸದ ಬೊಮಾಯಿ
KARNATAKA

ಕೇಂದ್ರದ ‘OBC ಪಟ್ಟಿ’ಗೆ ‘ವೀರಶೈವ ಲಿಂಗಾಯತ ಸಮುದಾಯ’ ಸೇರ್ಪಡೆಗೆ ಪ್ರಯತ್ನ: ಸಂಸದ ಬೊಮಾಯಿ

By kannadanewsnow0924/08/2024 5:48 PM

ಹಾವೇರಿ : ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಯಲ್ಲಿ ಸೇರಿಸಲು ವೀರಶೈವ ಲಿಂಗಾಯತ ಸಮುದಾಯದ ಬೇಡಿಕೆ ಇದ್ದು. ಸಂಸದನಾಗಿ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ರಾಜ್ಯ ಸರ್ಕಾರದ ಸಂಪೂರ್ಣ ಬೆಂಬಲ ಪಡೆದು ಅತ್ಯಂತ ಪ್ರಮಾಣಿಕವಾಗಿ ನಿಷ್ಟೆಯಿಂದ ಶ್ರಮವಹಿಸಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಅವರು ಇಂದು ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ಶ್ರೀಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಏರ್ಪಡಿಸಿದ ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನಾಗೇನಹಳ್ಳಿ ಏತ ನೀರಾವರಿ ಯೋಜನೆಯನ್ನು ಹತ್ತು ಹನ್ನೆರಡು ವರ್ಷಗಳ ಹಿಂದೆ ಮಾಡಿದ್ದೇವು. ನಮ್ಮ ನಾಯಕರಾಗಿದ್ದ ಸಿ.ಎಂ. ಉದಾಸಿಯವರು ಏತ ನೀರಾವರಿ ಯೋಜನೆಗಳನ್ನು ಮಾಡಬೇಕೆಂದು ಹೇಳಿದಾಗ ಹಾನಗಲ್‌ನಲ್ಲಿ ಮೂರು ಏತನೀರಾವರಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಸಿಎಂ ಉದಾಸಿಯವರ ಪ್ರಯತ್ನ, ಶದ್ದೆಯಿಂದ ಮಾಡಿದ್ದೇವೆ. ಅದಕ್ಕೆ ನನ್ನ ಸಂಪೂರ್ಣ ಸಹಕಾರ ಇತ್ತು. ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಶೀರ್ವಾದ ಇತ್ತು. ಹೀಗಾಗಿ ಹಾನಗಲ್ ತಾಲೂಕಿನ ಬಹುತೇಕ ಕೆರೆಗಳು ತುಂಬುವಂತಾಗಿದೆ. ಅದೇ ರೀತಿ ಧರ್ಮಾ ಕಾಲುವೆ ಆಧುನೀಕರಣಕ್ಕೆ ನಾನು ನೀರಾವರಿ ಸಚಿವನಾಗಿದ್ದಾಗ 49 ಕೋಟಿ ರೂ. ಕೊಟ್ಟಿದ್ದೇನೆ. ಕಳಸಾಪುರ ಎರಡನೇ ಹಂತದ ಏತ ನೀರಾವರಿ ಯೋಜನೆಗೆ ಹಣ ಕೊಟ್ಟು ಪಾರಂಭ ಮಾಡಿದ್ದೇವೆ. ತಿಳುವಳ್ಳಿ ಏತ ನೀರಾವರಿ ಯೋಜನೆ ಆರಂಭ ಮಾಡಿದ್ದೇವೆ. ಇದೇ ರೀತಿ ಎಲ್ಲರೂ ಸೇರಿ ಕೆಲಸ ಮಾಡಿದರೆ ರೈತನ ಬಾಳು ಹಸನಾಗುತ್ತದೆ. ಭೂಮಿ ತಾಯಿ ಹಸಿರು ಸೀರೆ ಉಟ್ಟು ಕಂಗೊಳಿಸುತ್ತಾಳೆ ಎಂದು ಹೇಳಿದರು.

ಗುರುಗಳು ಆಜ್ಞೆ ಮಾಡಿದಂತೆ ಸಮುದಾಯ ಭವನ ನಿರ್ಮಾಣಕ್ಕೆ ಸಂಸದರ ನಿಧಿಯಿಂದ 25 ಲಕ್ಷ ರೂ. ಅನುದಾನ ನೀಡಲಾಗುವುದು. ಅಲ್ಲದೇ ನಮ್ಮ ಸ್ವಂತ ಟ್ರಸ್ಟ್‌ನಿಂದ ತಾವು ಮಾಡುವ ಕೆಲಸಕ್ಕೆ ಹಾವೇರಿ ಜಿಲ್ಲೆಯ ಯಾವ ತಾಲೂಕಿನಲ್ಲಿ ಪ್ರತಿ ತಾಲೂಕಿಗೂ ಗ್ರಾಮೀಣಾಭಿವೃದ್ಧಿ ಸಂಘಗಳಿಗೆ 10 ಲಕ್ಷ ರೂ. ನೀಡಲಾಗುವುದು ಎಂದು ಹೇಳಿದರು.

ಪುಷ್ಪಗಿರಿ ಸಂಸ್ಥೆಯ ಮೂರು ಜನ ಪರಮಪೂಜ್ಯರ ಆಶೀರ್ವಾದದಿಂದ ಸಮಾಜ ಕಟ್ಟಲು ಏನೇಲ್ಲ ಕಾರ್ಯಕ್ರಮ ಮಾಡುತ್ತಾರೆ. ಅದಕ್ಕೆ ನಿಮ್ಮ ಭಕ್ತನಾಗಿ ಸೇವೆ ಮಾಡಲು ನಾನು ಸದಾಸಿದ್ದನಿದ್ದೇನೆ. ನಾನು ಮುಖ್ಯಮಂತ್ರಿ ಇದ್ದಾಗ ಸ್ತ್ರೀ ಸಾಮರ್ಥ್ಯ ಯೋಜನೆ ಜಾರಿ ಮಾಡಿದ್ದೇನೆ. ಅದರಿಂದ ಪ್ರತಿ ಸಂಘಕ್ಕೆ 5 ಲಕ್ಷ ರೂ. ಕೊಡುವ ಕೆಲಸ ಮಾಡಿದೆ. ಕೇಂದ್ರದ ಸಂಜೀವಿನಿ ಯೋಜನೆ ಅಡಿಯಲ್ಲಿ 350 ಕೋಟಿಗೂ ಹೆಚ್ಚು ಅನುದಾನವನ್ನು ಪ್ರತಿ ಸಂಘಕ್ಕೂ ಒಂದು ಲಕ್ಷದಂತೆ ನೀಡಿದ್ದೇವೆ. ಮಹಿಳಾ ಸ್ವಸಹಾಯ ಸಂಘಕ್ಕೆ ಏನಾದರೂ ಸಹಾಯ ಬೇಕಾದರೆ ನಿಮ್ಮ ಒಬ್ಬ ಸಹೋದರ ನಿಮ್ಮ ಜೊತೆಗೆ ಇದ್ದಾನೆ ಎಂದು ಭಾವಿಸಿ ನಿಮ್ಮ ಕೆಲಸ ಮಾಡಿಸಿಕೊಳ್ಳಬಹುದು ಎಂದು ಹೇಳಿದರು.

ಈ ಸಂಧರ್ಭದಲ್ಲಿ ಪುಷ್ಪಗಿರಿ ಸಂಸ್ಥಾನ ಮಠದ ಪರಮಪೂಜ್ಯರಾದ ಶ್ರೀ ಡಾ. ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಜಿಯವರು, ಹೋತನಹಳ್ಳಿಯ ಸಿದ್ದಾರೂಢ ಮಠದ ಪರಮಪೂಜ್ಯರಾದ ಶ್ರೀ ಶಂಕರಾನಂದ ಮಹಾಸ್ವಾಮಿಗಳು ಹಾಗೂ ಹರಿಹರ ತಾಲೂಕಿನ ಸಿದ್ದಾಶ್ರಮದ ಪರಮಪೂಜ್ಯರಾದ ಶ್ರೀ ಯೋಗಾನಂದ ಮಹಾಸ್ವಾಮಿಗಳು ಸೇರಿದಂತೆ ಮಾಜಿ ಶಾಸಕರಾದ ಶಿವರಾಜ ಸಜ್ಜನ, ಮುಖಂಡರಾದ ಪದ್ಮನಾಭ ಕುಂದಾಪುರ, ಬಸವರಾಜ ಹಾದಿಮನಿ, ರಾಜಶೇಖರ ಕಟ್ಟೇಗೌಡ್ರ, ಶಿವಲಿಂಗಪ್ಪ ತಲ್ಲೂರ ಬಿ.ಎಸ್.ದಳವಾಯಿ ಸೇರಿದಂತೆ ಅನೇಕ ಮುಖಂಡರು ತಾಯಂದಿರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳ ಗಮನಕ್ಕೆ: ‘ಬಾಪೂಜಿ ಪ್ರಬಂಧ ಸ್ಪರ್ಧೆ’ಯಲ್ಲಿ ಬಾಗಿಯಾಗಿ, 31,000 ಬಹುಮಾನ ಗೆಲ್ಲಿ | Essay Competition

ಬೆಂಗಳೂರಿಗರೇ ಗಮನಿಸಿ: ‘ಗಣೇಶ ಪ್ರತಿಷ್ಠಾಪನೆ’ಗೆ ಅನುಮತಿ ನೀಡಲು ’63 ಏಕಗವಾಕ್ಷಿ ಕೇಂದ್ರ’ ಓಪನ್

SSC ಸಿಜಿಎಲ್ 2024 ಶ್ರೇಣಿ-1ರ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ | SSC CGL 2024 Tier 1 admit card

‘ಪ್ರೌಢಶಾಲಾ ವಿದ್ಯಾರ್ಥಿ’ಗಳ ಗಮನಕ್ಕೆ: ಈ ‘ರಸಪ್ರಶ್ನೆ ಸ್ಪರ್ಧೆ’ಯಲ್ಲಿ ಭಾಗಿಯಾಗಿ, ‘40,000 ಬಹುಮಾನ’ ಗೆಲ್ಲಿ | Science Quiz Competition

Share. Facebook Twitter LinkedIn WhatsApp Email

Related Posts

SHOCKING : ಬೆಳಗಾವಿಯಲ್ಲಿ ಘೋರ ಘಟನೆ : ಕರ್ತವ್ಯ ನಿರತ ‘ASI’ ‘ಹೃದಯಾಘಾತಕ್ಕೆ’ ಬಲಿ

05/07/2025 12:13 PM1 Min Read

BREAKING : ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ‘RSS’ ಬ್ಯಾನ್ ಫಿಕ್ಸ್ : ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

05/07/2025 12:09 PM1 Min Read

‘ಗ್ರಾಮ ಒನ್ ಕೇಂದ್ರ’ಗಳನ್ನು ಸ್ಥಾಪಿಸಲು ಆನ್‌ಲೈನ್ ಅರ್ಜಿ ಆಹ್ವಾನ.!

05/07/2025 12:09 PM1 Min Read
Recent News

BIG NEWS : ಪಾಕಿಸ್ತಾನಕ್ಕೆ ಮತ್ತೊಂದು ಬಿಗ್ ಶಾಕ್ : 25 ವರ್ಷಗಳ ನಂತರ `ಮೈಕ್ರೋಸಾಫ್ಟ್’ ಬಂದ್ | Microsoft

05/07/2025 12:15 PM

SHOCKING : ಬೆಳಗಾವಿಯಲ್ಲಿ ಘೋರ ಘಟನೆ : ಕರ್ತವ್ಯ ನಿರತ ‘ASI’ ‘ಹೃದಯಾಘಾತಕ್ಕೆ’ ಬಲಿ

05/07/2025 12:13 PM

BREAKING : ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ‘RSS’ ಬ್ಯಾನ್ ಫಿಕ್ಸ್ : ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

05/07/2025 12:09 PM

‘ಗ್ರಾಮ ಒನ್ ಕೇಂದ್ರ’ಗಳನ್ನು ಸ್ಥಾಪಿಸಲು ಆನ್‌ಲೈನ್ ಅರ್ಜಿ ಆಹ್ವಾನ.!

05/07/2025 12:09 PM
State News
KARNATAKA

SHOCKING : ಬೆಳಗಾವಿಯಲ್ಲಿ ಘೋರ ಘಟನೆ : ಕರ್ತವ್ಯ ನಿರತ ‘ASI’ ‘ಹೃದಯಾಘಾತಕ್ಕೆ’ ಬಲಿ

By kannadanewsnow0505/07/2025 12:13 PM KARNATAKA 1 Min Read

ಬೆಳಗಾವಿ : ಜಾತ್ರೆಗೆ ಬಂದೋಬಸ್ತ್ ಬಂದಿದ್ದ ASI ಒಬ್ಬರು ಹೃದಯಘಾತದಿಂದ ಸಾವನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲಿ ನಡೆದಿದೆ.…

BREAKING : ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ‘RSS’ ಬ್ಯಾನ್ ಫಿಕ್ಸ್ : ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

05/07/2025 12:09 PM

‘ಗ್ರಾಮ ಒನ್ ಕೇಂದ್ರ’ಗಳನ್ನು ಸ್ಥಾಪಿಸಲು ಆನ್‌ಲೈನ್ ಅರ್ಜಿ ಆಹ್ವಾನ.!

05/07/2025 12:09 PM

BIG NEWS : ರಾಜ್ಯದ ವಿದ್ಯಾರ್ಥಿಗಳಿಗೆ ಮುಖ್ಯ ಮಾಹಿತಿ : ವಿದ್ಯಾರ್ಥಿ ವೇತನಕ್ಕೆ ‘OTR’ ಸಂಖ್ಯೆ ಕಡ್ಡಾಯ

05/07/2025 12:07 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.