ಗದಗ : ಜಿಲ್ಲೆಯ ಗಜೇಂದ್ರಗಡ ತಾಲೂಕಿನ ದಿಂಡೂರು ಬಳಿ ಚಾಲಕನ ನಿರ್ಲಕ್ಷಕ್ಕೆ ಸರ್ಕಾರಿ ಬಸ್ ಒಂದು ಹರಿದು ಸುಮಾರು 4 ಲಕ್ಷಕ್ಕೂ ಅಧಿಕ ಮೌಲ್ಯದ ಸುಮಾರು 30 ಕುರಿಗಳು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಸ್ ಚಾಲಕನ ನಿರ್ಲಕ್ಷದಿಂದ ಈ ಒಂದು ಘಟನೆ ನಡೆದಿದೆ. ಬಸ್ ನೇರವಾಗಿ ಕುರಿ ಮಂದೆಯ ಮೇಲೆ ಹರಿದಿದೆ ಸರ್ಕಾರಿ ಬಸ್ ಚಾಲಕ ನಿರ್ಲಕ್ಷಕ್ಕೆ 30 ಕುರಿಗಳು ಇದೀಗ ಸಾವನಪ್ಪಿದ್ದವೇ. ಈ ಸರ್ಕಾರಿ ಬಸ್ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಡಿಪೋಗೆ ಸೇರಿದೆ ಎಂದು ತಿಳಿದು ಬಂದಿದೆ. 4.5 ಲಕ್ಷ ಮೌಲ್ಯದ ಕುರಿಗಳನ್ನು ಕಳೆದುಕೊಂಡು ಕುರಿಗಾಹಿ ಇದೀಗ ಕಣ್ಣೀರು ಇಡುತ್ತಿದ್ದಾನೆ.