ಬೆಂಗಳೂರು : ಅಂತಿಮ ದರ್ಶನಕ್ಕೆ ಎಂದು ಬಂದಿದ್ದ ವ್ಯಕ್ತಿಯೊಬ್ಬ ಸ್ನೇಹಿತನಿಂದಲೇ ಕೊಲೆಯಾಗಿರುವ ಘಟನೆ ಬೆಂಗಳೂರಿನ ಕಾಟನ್ ಪೇಟೆಯ ಅಂಜನಪ್ಪ ಗಾರ್ಡನ್ ನಲ್ಲಿ ಈ ಒಂದು ಘಟನೆ ನಡೆದಿದೆ.
ಹೌದು ಸ್ನೇಹಿತ ಶರತ್ ಗೆ ಚಾಕು ಇರಿದು ಆಟೋ ಚಾಲಕ ಶರತ್ ಎಂಬಾತ ಕೊಂದಿದ್ದಾನೆ. ಅಂಜನಪ್ಪ ಗಾರ್ಡನ್ ನಲ್ಲಿ ಅವರಿಬ್ಬರೂ ಸಾವಿನ ಮನೆಗೆ ಬಂದಿದ್ದರು. ಅಂತಿಮ ದರ್ಶನ ಪಡೆದು ಮುಂಜಾನೆ ತೆಳುವಾಗ ಶರತ್ ಬೈದಿದ್ದಾನೆ. ಯಾಕೆ ಬೈತಿಯಾ ಎಂದು ಪ್ರಶ್ನಿಸಿದ್ದಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದೆ.
ಈ ವೇಳೆ ಸ್ನೇಹಿತ ಗೆ ಆಟೋ ಚಾಲಕ ಶರತ್ ಚಾಕುವಿನಿಂದ ತನ್ನ ಸ್ನೇಹಿತ ಶರತ್ ಗೆ ಇರಿದಿದ್ದಾನೆ. ಗಾಯಳು ಶರತ್ ನನ್ನು ಕೂಡಲೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಕ್ಟೋರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಶರತ್ ಮೃತಪಟ್ಟಿದ್ದಾನೆ.ಇದೀಗ ಆಟೋ ಚಾಲಕ ಪರರೋಯಾಗಿದ್ದು, ಪೊಲೀಸರು ಆತನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.ಕಾಟನ್ ಪೇಟೆಯ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.