ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಎಂ ಸಿದ್ದರಾಮಯ್ಯ ಅವರಿಗೆ ತೀವ್ರ ಸಂಕಷ್ಟ ಎದುರಾಗಿದ್ದು, ಅಲ್ಲದೆ ಇನ್ನೊಂದು ಕಡೆ ಗಣಿ ಹಗರಣದ ಸಂಬಂಧ HD ಕುಮಾರಸ್ವಾಮಿ ವಿರುದ್ಧ ಸಾಮಾಜಿಕ ಜಾಲತಾಣ ಟ್ವೀಟ್ ನಲ್ಲಿ ಕಾಂಗ್ರೆಸ್ ವಾಗ್ದಾಳಿ ನಡೆಸಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ವಿರುದ್ಧ JDS ಟ್ವೀಟ್ ಮೂಲಕ ತಿರುಗೇಟು ನೀಡಿದೆ.
ಟ್ವೀಟ್ ನಲ್ಲಿ ಕುಂಬಳಕಾಯಿ ಕಳ್ಳ ಎಂದರೆ, ಹೆಗಲು ಮುಟ್ಟಿ” ನೋಡುವ ಸಿದ್ದರಾಮಯ್ಯ ಗೌರವಾನ್ವಿತ ರಾಜ್ಯಪಾಲರು ಮುಡಾ ಸ್ಕ್ಯಾಮ್ ಬಗ್ಗೆ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದೇ ತಡ “ಸುಳ್ಳು”ರಾಮಯ್ಯಗೆ ನಡುಕ ಶುರುವಾಗಿದೆ.”ಕಪ್ಪು ಚುಕ್ಕೆ” ಮೇಲೆ “ವೈಟ್ನರ್ ಹಾಕಿ” ಸಾಕ್ಷ್ಯ ನಾಶದಲ್ಲಿ “ಸಿದ್ಧಹಸ್ತ”ರಾದವರು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲು “ಸಿದ್ಧ”ರಾಗಿ ಎಂದು ಜೆಡಿಎಸ್ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದೆ.
ಹಾಗಾದ್ರೆ ಕಾಂಗ್ರೆಸ್ ಹೇಳಿದ್ದೇನು?
ಕಳ್ಳನ ಮನಸು ಉಳ್ಳುಳ್ಳಗೆ! ಗಣಿ ಹಗರಣದ ತನಿಖೆಗೆ ಅನುಮತಿ ಕೋರಿದ ಮತ್ತೊಂದು ಪತ್ರ ರಾಜ್ಯಪಾಲರ ಟೇಬಲ್ HD ಕುಮಾರಸ್ವಾಮಿ ಅವರಲ್ಲಿ ಉದ್ವೇಗ, ಆತಂಕ ಮಿತಿ ಮೀರಿದೆ.ಆ ಆತಂಕದಲ್ಲೇ ಓಡೋಡಿ ಬಂದು ಮಾಧ್ಯಮಗಳ ಮುಂದೆ ಮನಬಂದಂತೆ ಮಾತಾಡುತ್ತಿದ್ದಾರೆ,
ನನ್ನನ್ನು ಬಂಧಿಸಲು ಸಾಧ್ಯವೇ ಇಲ್ಲ ಎಂದು ಕಾನೂನಿಗೆ ಸವಾಲು ಹಾಕುತ್ತಿದ್ದಾರೆ.ಕುಮಾರಸ್ವಾಮಿಯವರೇ, ಉಪ್ಪು ತಿಂದವರು ನೀರು ಕುಡಿಯಲೇಬೇಕು, ನೀವು ಉಪ್ಪು ತಿಂದಾಗಿದೆ ನೀರು ಕುಡಿಯುವ ಸಮಯ ಸಮೀಪಿಸುತ್ತಿದೆ. ತಯಾರಾಗಿರಿ ಎಂದು ವಾಗ್ದಾಳಿ ನಡೆಸಿತ್ತು.
"ಕುಂಬಳಕಾಯಿ ಕಳ್ಳ ಎಂದರೆ, ಹೆಗಲು ಮುಟ್ಟಿ" ನೋಡುವ ಸಿದ್ದರಾಮಯ್ಯ
ಗೌರವಾನ್ವಿತ ರಾಜ್ಯಪಾಲರು ಮುಡಾ ಸ್ಕ್ಯಾಮ್ ಬಗ್ಗೆ ಪ್ರಾಸಿಕ್ಯೂಷನ್ಗೆ ಅನುಮತಿ ಕೊಟ್ಟಿದ್ದೇ ತಡ "ಸುಳ್ಳು"ರಾಮಯ್ಯಗೆ ನಡುಕ ಶುರುವಾಗಿದೆ.
"ಕಪ್ಪು ಚುಕ್ಕೆ" ಮೇಲೆ "ವೈಟ್ನರ್ ಹಾಕಿ" ಸಾಕ್ಷ್ಯ ನಾಶದಲ್ಲಿ “ಸಿದ್ಧಹಸ್ತ”ರಾದವರು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲು… pic.twitter.com/qVF5m2TFiq
— Janata Dal Secular (@JanataDal_S) August 21, 2024