ಕೋಲಾರ : ಕಳೆದ ಆಗಸ್ಟ್ 14 ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಮುಡಿಯನೂರು ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದ ದಿವ್ಯಶ್ರೀ ತಮ್ಮ ಮನೆಯಲ್ಲಿ ಮಗಳೊಂದಿಗೆ ಇದ್ದಾಗ ಮನೆಗೆ ನುಗ್ಗಿದ ಹಂತಕರು ಕುತ್ತಿಗೆ ಕುಯ್ದು ಹತ್ಯೆ ಮಾಡಿದ್ದರು. ಈ ಘಟನೆ ಇಡಿ ಮುಳಬಾಗಿಲನ್ನು ಬೆಚ್ಚಿಬೀಳಿಸಿತ್ತು. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಪೊಲೀಸರೇ ಹತ್ಯೆಗೆ ಕಾರಣ ತಿಳಿದು ಬೆಚ್ಚಿ ಬಿದ್ದಿದ್ದಾರೆ. ಹೌದು ಆಗಸ್ಟ್ 14ರ ಸಂಜೆ ಮುಳಬಾಗಿಲು ನಗರದ ಮುತ್ಯಾಲಪೇಟೆಯಲ್ಲಿರು ಮನೆಯಲ್ಲಿ ಅವರ ಮಗಳ ಮುಂದೆಯೇ ಶಿಕ್ಷಕಿ ದಿವ್ಯಶ್ರೀ (43) ಕೊಲೆ ನಡೆದಿತ್ತು. ಎ1 ಆರೋಪಿ ರಂಜಿತ್, ರಾಹುಲ್, ನಂದೀಶ್ ಸೇರಿದಂತೆ ಒಟ್ಟು 8 ಆರೋಪಿಗಳ ಬಂಧನ ಮಾಡಲಾಗಿದೆ. ಬಂಧಿತರು ಮುಳಬಾಗಿಲು ಮೂಲದವರಾಗಿದ್ದಾರೆ ಎಂದು ತಿಳಿಬಂದಿದೆ.
ಮುಳಬಾಗಿಲು ತಾಲ್ಲೂಕು ಮುಡಿಯನೂರು ಗ್ರಾಮದ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದ ದಿವ್ಯಶ್ರೀ ತಮ್ಮ ಮನೆಯಲ್ಲಿ ಮಗಳೊಂದಿಗೆ ಇದ್ದಾಗ ಮನೆಗೆ ನುಗ್ಗಿದ ಮೂರು ಜನ ಹಂತಕರು ಬೆದರಿಕೆ ಹಾಕಿ ಅವರು ವಾಸವಿದ್ದ ಮನೆ ಬರೆದುಕೊಡುವಂತೆ ಹೆದರಿಸಿದ್ದಾರೆ. ಇದೇ ವೇಳೆ ಚಾಕುವಿನಿಂದ ಕತ್ತು ಕೊಯ್ದು ದಿವ್ಯಶ್ರೀ ಹತ್ಯೆ ಮಾಡಿದ್ದಾರೆ ಕುತ್ತಿಗೆ ಕುಯ್ದು ಹತ್ಯೆ ಮಾಡಿದ್ದರು. ಮನೆಯ ಮಹಡಿ ಮೇಲೆ ಓದುತ್ತಾ ಕುಳಿತಿದ್ದ ಮಗಳನ್ನು ಹತ್ಯೆ ಮಾಡಲು ಯತ್ನಿಸಿದ್ದಾರೆ. ಆದರೂ ಆಕೆ ಕೂಡಲೇ ರೂಂ ಒಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಈ ವೇಳೆ ಹಂತಕರು ಪರಾರಿಯಾಗಿದ್ದರು.
ಕೂಡಲೇ ಮಗಳು ಮನೆಯಲ್ಲಿ ನಡೆದ ಘಟನೆಯನ್ನು ತಂದೆ ಪದ್ಮನಾಭ ಅವರಿಗೆ ಪೋನ್ ಮಾಡಿ ತಿಳಿಸಿದ ವೇಳೆ ಘಟನೆ ಬಯಲಾಗಿದೆ. ದಿವ್ಯಶ್ರೀ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದು, ಪತಿ ಪದ್ಮನಾಭ್ ಉದುಬತ್ತಿ ಬ್ಯುಸಿನೆಸ್ ಹಾಗೂ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು. ಇನ್ನು ಮಗಳು ನಿಶಾ ರೇವಾ ಯೂನಿವರ್ಸಿಟಿಯಲ್ಲಿ ಬಿಇ ಪದವಿ ಮಾಡುತ್ತಿದ್ದಾರೆ.
ಕೊಲೆಯಾದ ನಂತರ ಮನೆಯಲ್ಲಿ ಯಾವುದೇ ಒಡವೆ, ವಸ್ತ್ರ, ಹಣ ಯಾವುದೂ ಕಳುವಾಗಿಲ್ಲ ಹಾಗಾಗಿ ಇದು ಯಾರೋ ಉದ್ದೇಶಪೂರ್ವಕವಾಗಿ ಅಥವಾ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಬಗ್ಗೆ ಅನುಮಾನ ಮೂಡಿತ್ತು. ಇನ್ನು ಘಟನಾ ಸ್ಥಳಕ್ಕೆ ಮುಳಬಾಗಿಲು ಶಾಸಕ ಸಮೃದ್ದಿ ಮಂಜುನಾಥ್ ಕೂಡಾ ಭೇಟಿ ನೀಡಿದ್ದು ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದರು.ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.