ಬೆಂಗಳೂರು : ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಾಜಿಕ್ಯೂಷನ್ ಗೆ ಅನುಮತಿ ನೀಡಿರುವ ವಿಚಾರವಾಗಿ ಇಡೀ ಸಂಪುಟದ ಸಚಿವರು ನೀವು ಎದೆಗುಂದಬೇಡಿ ನಾವೆಲ್ಲ ನಿಮ್ಮ ಜೊತೆಗೆ ಇದ್ದೇವೆ ಎಂದು ಆತ್ಮಸ್ಥೈರ್ಯ ತುಂಬಿದ್ದಾರೆ.
ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಎಲ್ಲ ಸಚಿವರು ರಾಜ್ಯಪಾಲರ ನಿರ್ಧಾರಕ್ಕೆ ಅಸಮಾಧಾನ ಹೊರ ಹಾಕಿದರು. ಈ ವೇಳೆ ನೀವು ಎದೆಗುಂದಬೇಡಿ ನಾವೆಲ್ಲ ನಿಮ್ಮ ಜೊತೆಗೆ ಇದ್ದೇವೆ ಎಂದು ಸಂಪುಟದ ಸಹೋದ್ಯೋಗಿಗಳು ನೈತಿಕ ಸ್ಥೈರ್ಯ ತುಂಬಿದರು.
ಇಂದು ನಡೆದ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯಗೆ ಎಲ್ಲ ಸಚಿವರು ಆತ್ಮಸ್ಥೈರ್ಯ ತುಂಬಿದ್ದರು.ನೀವು ಯಾವುದೇ ಕಾರಣಕ್ಕೂ ರಾಜೀನಾಮೆಯನ್ನು ಕೊಡಬೇಡಿ. ನೈತಿಕ ಹೊಣೆ ಹೊತ್ತು ನೀವು ರಾಜೀನಾಮೆ ಕೊಡುವುದು ಬೇಡ.ಅಂತಹ ಯಾವ ಕಾನೂನುಬಾಹಿರ ಕೆಲಸವನ್ನು ನೀವು ಮಾಡಿಲ್ಲ. ಈ ಪ್ರಕರಣದಲ್ಲಿ ಪ್ರತ್ಯಕ್ಷ ಪರೋಕ್ಷವಾಗಿ ನಿಮ್ಮ ಪಾತ್ರ ಇಲ್ಲ ಎಂದು ಧೈರ್ಯ ತುಂಬಿದರು.
ನೀವು ತಪ್ಪು ಮಾಡದಿದ್ದರೂ ಅಪರಾಧಿಯ ಮುಂದೆ ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ ನೀವು ಯಾವುದೇ ಕಾರಣಕ್ಕೂ ಎದೆಗುಂದಬೇಡಿ ಧೈರ್ಯವಾಗಿರಿ ಮುಂದೆ ಕಾನೂನು ಹೋರಾಟ ನಡೆಸೋಣ. ಬಿಜೆಪಿ ಜೆಡಿಎಸ್ ನವರ ಷಡ್ಯಂತರ ಜನರ ಮುಂದೆ ಇಡೋಣ ನಿಮ್ಮ ಜೊತೆ ಎಂದಿಗೂ ನಾವು ಇರುತ್ತೇವೆ ಎಂದು ಸಿಎಂ ಸಿದ್ದರಾಮಯ್ಯಗೆ ಸಂಪುಟ ಸಭೆಯಲ್ಲಿ ಸಚಿವರು ಧೈರ್ಯ ತುಂಬಿದರು.