ಬೆಂಗಳೂರು : ಹಿರಿಯ ರೈತ ನಾಯಕ ಕಾಂ.ಭೀಮಸಿ ಕಲಾದಗಿ ಅವರು ನಿಧನರಾಗಿದ್ದು, ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.
ಹಿರಿಯ ರೈತ ನಾಯಕ ಕಾಂ.ಭೀಮಸಿ ಕಲಾದಗಿ ಅವರ ನಿಧನವಾರ್ತೆ ನೋವುಂಟುಮಾಡಿದೆ. ಸುದೀರ್ಘ 5 ದಶಕಗಳ ಕಾಲ ನಾಡಿನ ರೈತ ಚಳವಳಿಯನ್ನು ಮುನ್ನಡೆಸಿದ್ದ ಭೀಮಸಿ ಕಲಾದಗಿ ಅವರ ಅಗಲಿಕೆಯಿಂದ ನಾಡು ಬಡವಾಗಿದೆ ಎಂದು ಹೇಳಿದ್ದಾರೆ.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬವರ್ಗ ಮತ್ತು ಹೋರಾಟದ ಸಂಗಾತಿಗಳಿಗೆ ನೋವು ಭರಿಸುವ ಶಕ್ತಿ ದೊರಕಲಿ ಎಂದು ಸಂತಾಪ ಸೂಚಿಸಿದ್ದಾರೆ.