ಬೆಂಗಳೂರು : ಮುಡಾ ಸೈಟ್ ಹಂಚಿಕೆ ಖಂಡಿಸಿ ಇಂದು ಬೆಂಗಳೂರಿನಲ್ಲಿ ಬಿಜೆಪಿ ಜೆಡಿಎಸ್ ನಾಯಕರು ಮೈಸೂರು ಜಿಲ್ಲಾ ಪಾದಯಾತ್ರೆಗೆ ಚಾಲನೆ ನೀಡಿದರು. ಸಮಾವೇಶದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಹುಶಹ ಸಿದ್ದರಾಮಯ್ಯ ಪಾದಯಾತ್ರೆ ಅರ್ಧದಲ್ಲಿ ಇರುವಾಗಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮನೆಗೆ ಹೋಗುವುದು ನಿಶ್ಚಿತ ಎಂದು ತಿಳಿಸಿದರು.
ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡುತ್ತಿದ್ದೇವೆ. ಬಿಜೆಪಿ ಜೆಡಿಎಸ್ ಮೈಸೂರು ಜಿಲ್ಲಾ ಸಮಾವೇಶಕ್ಕೆ ಚಾಲನೆ ನೀಡಿ ಪಾದಯಾತ್ರೆ ಮುಗಿಯುವಷ್ಟರಲ್ಲಿ ಸಿಎಂ ರಾಜೀನಾಮೆ ಕೊಡಬೇಕು. ಸಿಎಂ ಸಿದ್ದರಾಮಯ್ಯ ಮಾಡಿದ ಭ್ರಷ್ಟಾಚಾರ ಬಯಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.
ಸದ್ಯ ಸಿದ್ದರಾಮಯ್ಯ ಹಗಲುದರೊಡೆ, ಭ್ರಷ್ಟಾಚಾರದಲ್ಲಿ ನಿರತರಗಿದ್ದು, ಗೌರವತವಾಗಿ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಸ್ನೇಹಿತರುಗಳು ವಿಶೇಷವಾಗಿ ಕೇಂದ್ರ ಸಚಿವರಾಗಿ ಇಡೀ ರಾಜಕ್ಕೆ ಮಾರ್ಗದರ್ಶನ ಮಾಡುತ್ತಿರುವಂತಹ ಕುಮಾರಸ್ವಾಮಿ ಬಂದಿರುವಂತಹ ನಮಗೆ ದೊಡ್ಡ ಶಕ್ತಿ ತಂದಂತಾಗಿದೆ. ಬಿಜೆಪಿ ಜೆಡಿಎಸ್ ನೇತೃತ್ವದಲ್ಲಿ ಈ ಪಾದಯಾತ್ರೆ ಯಶಸ್ವಿಯಾಗುವುದರ ನಿಶ್ಚಿತ. ಪಾದಯಾತ್ರೆ ಮುಗಿಯುವುದರಳಗಾಗಿ ಗೌರವಯುತವಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ತಪ್ಪು ಮಾಡಿಲ್ಲ ಅಂದರೆ ರಾಜ್ಯ ಪಾಲರನ್ನು ಪ್ರಶ್ನೆ ಮಾಡುತ್ತೀರಾ? ನಾನು ನಿಮಗೆ ಕೇಳುತ್ತೇನೆ ಯಡಿಯೂರಪ್ಪನವರ ಮುಖ್ಯಮಂತ್ರಿ ಆಗಿದ್ದರು. ಆಗ ಯಾರೋ ಖಾಸಿಗೆ ದೂರು ಕೊಟ್ಟರು. ರಾಜ್ಯಪಾಲರು ಯಾಕೆ ಅನುಮತಿ ಕೊಟ್ಟರು? ಅವರನ್ನು ಯಾಕೆ ಬಂಧಿಸಿದರು. ಅಂದು ರಾಜಭವನದಲ್ಲಿದಿದ್ದು ಅಂಬೇಡ್ಕರ ಸಂವಿಧಾನನೆ ಇಂದು ರಾಜ್ಯಭವನದಲ್ಲಿ ಇರುವುದು ಅಂಬೇಡ್ಕರ್ ಸಂವಿಧಾನನೇ. ಕೇವಲ ನೋಟಿಸ್ ಕೊಟ್ಟಿದ್ದಕ್ಕೆ ಗಡಗಡ ಅಂತ ನಡುಗುತ್ತಿದ್ದಾರೆ. ಇನ್ನು ಅನುಮತಿ ಕೊಟ್ಟರೆ ನಿಮ್ಮ ಗತಿ ಏನಾಗಬೇಡ ಎಂದು ವಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದರು.