ಬೆಂಗಳೂರು : ಮುಡಾ ಹಗರಣ ಸಂಬಂಧ ಸರ್ಕಾರ ಮತ್ತು ವಿಪಕ್ಷಗಳ ನಡುವೆ ಇದೀಗ ದೊಡ್ಡ ಸಮರವೆ ಏರ್ಪಟ್ಟಿದ್ದು, ಈ ಸಂಬಂಧ ನಿನ್ನೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ನೋಟಿಸ್ ವಾಪಾಸ್ ಪಡೆಯಬೇಕೆಂದು ಸಂಪುಟ ನಿರ್ಣಯ ತೆಗೆದುಕೊಂಡಿತ್ತು ಇದೀಗ ಸಂಪುಟ ತೆಗೆದುಕೊಂಡರೆ ನಡೆಯ ರಾಜಪಾಲರ ಅಂಗಳಕ್ಕೆ ತಲುಪಿದ್ದು ರಾಜ್ಯಪಾಲರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುವದರ ಮೇಲೆ ಸಿಎಂ ಸಿದ್ದರಾಮಯ್ಯ ಅವರ ಭವಿಷ್ಯ ನಿಂತಿದೆ.
ಹೌದು ಸಚಿವ ಸಂಪುಟದ ನಿರ್ಣಯ ರಾಜ್ಯಪಾಲರ ಅಂಗಳ ತಲುಪಿದ್ದು, ಸಲಹೆ ರೂಪದ 60 ಪುಟಗಳ ವಿವರಣೆ ರಾಜ್ಯಪಾಲರಿಗೆ ಇದೀಗ ರವಾನೆಯಾಗಿದೆ. ಸಂಪುಟ ನಿರ್ಣಯ ಆಧರಿಸಿ ರಾಜ್ಯಪಾಲರ ಮುಂದೆ 2 ಅವಕಾಶಗಳಿದ್ದು ಮೊದಲನೆಯದು ಸಂಪುಟದ ವಿವರಣೆಯನ್ನು ಗಂಭೀರವಾಗಿ ಪರಿಗಣಿಸಬಹುದು. ಎರಡನೆಯದು ರಾಜಕೀಯ ಒತ್ತಡಗಳು ಇಲ್ಲದಿದ್ದರೆ ಸಂಪುಟದ ಸಲಹೆಗೆ ಮಾನ್ಯತೆ ನೀಡಬಹುದು ಅಥವಾ ಸಂಪುಟ ನೀಡಿದ ಅಂಶಗಳ ಮೇಲೆ ಕಾನೂನು ಸಲಹೆ ಪಡೆಯುವುದು ಎಂದು ಹೇಳಲಾಗುತ್ತಿದೆ.
ಮುಡಾ ಪ್ರಕರಣದಲ್ಲಿ ಸಿಎಂ ವಿರುದ್ಧ ಯಾವ ಕೇಸ್ ದಾಖಲಾಗಿಲ್ಲ. ಯಾವುದೇ ತನಿಖಾ ವರದಿಗಳು ಕೂಡ ಸಿಎಂ ವಿರುದ್ಧವು ಇಲ್ಲ ಹೀಗಾಗಿ ರಾಜ್ಯಪಾಲರು ತನಿಖಾ ವರದಿಗಳಿಗಾಗಿ ಕಾಯಬಹುದು ಇಲ್ಲದಿದ್ದರೆ ಸಂಪುಟದ ಸಲಹೆ ಹಾಗೂ ನಿರ್ಣಯವನ್ನು ತಳಿಹಾಕೋ ಸಾಧ್ಯತೆ ಇದೆ. ಸಂಪುಟದ ನಿರ್ಣಯಕ್ಕೆ ಒತ್ತು ನೀಡದೆ ಪ್ರಾಸಿಕ್ಯೂಷನಿಗೆ ಅವಕಾಶವಿದೆ ಕಾನೂನು ಹೋರಾಟ ಆರಂಭಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಂದು ವೇಳೆ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದರೆ.ಆಗಸ್ಟ್ 5ರ ಬಳಿಕ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ಸಾಧ್ಯತೆ ಇದೆ. ಸಿದ್ದರಾಮಯ್ಯ ನೀಡುವ ದಾಖಲೆಯನ್ನು ಆಧರಿಸಿ ರಾಜ್ಯಪಾಲರು ಇದೀಗ ನಿರ್ಧಾರ ಕೈಗೊಳ್ಳಲಿದ್ದಾರೆ. ರಾಜ್ಯಪಾಲರ ನಿರ್ಧಾರದ ಕಡೆಗೆ ಇದೀಗ ಸಿದ್ದರಾಮಯ್ಯನವರ ಸಚಿವರ ತಂಡ ಗಮನಹರಿಸಿದೆ. ಈಗಾಗಲೇ ಕಾನೂನು ತಜ್ಞರ ಜೊತೆ ಸಿದ್ದರಾಮಯ್ಯ ಸಭೆ ನಡೆಸಿದ್ದಾರೆ. ವಿಚಾರಣೆಗೆ ಅನುಮತಿ ನೀಡಿದರೆ ಸಿದ್ದರಾಮಯ್ಯ ಕೋರ್ಟ್ ಮೊರೆ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.