Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಭಾರೀ ಮಳೆ ಹಿನ್ನಲೆ: ನಾಳೆ ಚಿಕ್ಕಮಗಳೂರು ಜಿಲ್ಲೆಯ ಐದು ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಣೆ

02/07/2025 9:49 PM

BREAKING : ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆ-ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ

02/07/2025 9:47 PM

ಚಿತ್ರದುರ್ಗ: ವಚನ ಸಾಹಿತ್ಯ ಸಂಶೋಧನೆಗೆ ಜೀವನ ಮುಡುಪಿಟ್ಟವರು ಡಾ.ಫ.ಗು.ಹಳಕಟ್ಟಿ- ಡಾ.ಎನ್ ಮಮತಾ

02/07/2025 9:42 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಿಜೆಪಿಗರು ಸುಳ್ಳನ್ನ ಸತ್ಯ ಮಾಡುವಂತ ‘ಹಿಟ್ಲರ್’ ವಂಶಸ್ಥರಿಗೆ ಸೇರಿದವರು : ಸಿಎಂ ಸಿದ್ದರಾಮಯ್ಯ ವಾಗ್ದಾಳಿ
KARNATAKA

ಬಿಜೆಪಿಗರು ಸುಳ್ಳನ್ನ ಸತ್ಯ ಮಾಡುವಂತ ‘ಹಿಟ್ಲರ್’ ವಂಶಸ್ಥರಿಗೆ ಸೇರಿದವರು : ಸಿಎಂ ಸಿದ್ದರಾಮಯ್ಯ ವಾಗ್ದಾಳಿ

By kannadanewsnow0529/07/2024 2:22 PM

ಮಂಡ್ಯ : ಬಿಜೆಪಿಯವರಿಗೆ ಕೇವಲ ಸುಳ್ಳು ಹೇಳಿಕೊಂಡೆ ಬಂದಿರುವಂತಹ ಚಾಳಿ ಇದೆ. ಬಿಜೆಪಿಗರು ಸುಳ್ಳನ್ನ 100 ಸಾರಿ ಹೇಳಿ ಸತ್ಯ ಮಾಡಬೇಕು ಅನ್ನೋವಂತ ‘ಹಿಟ್ಲರ್’ ವಂಶಸ್ಥರು ಇವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ಕೆ ಆರ್ ಎಸ್ ಡ್ಯಾಮ್ ಗೆ ಬಾಗಿನ ಅರ್ಪಿಸಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಿಜೆಪಿಯವರಿಗೆ ಜೆಡಿಎಸ್ ನವರಿಗೆ ತಾಕತ್ತಿದ್ದರೆ ಬಡವರ ವಿರುದ್ಧ ಹೇಳಿಕೆ ಕೊಡಲಿ ನೋಡೋಣ. ಗ್ಯಾರಂಟಿಗಳನ್ನು ನಿಲ್ಲಿಸಿ ಅಂತ ನೇರವಾಗಿ ಹೇಳಲಿ ನೋಡೋಣ. ನಿಮಗೆ ದಮ್ ಇಲ್ಲ. ಈ ವರ್ಷದ ಬಜೆಟ್ಟು 3,71,000 ಕೋಟಿ ರೂಪಾಯಿ. ಯಾವ ಇಲಾಖೆಗೆ ದುಡ್ಡು ಕೊಟ್ಟಿಲ್ಲ ಹೇಳಿ ನೀರಾವರಿ ಕೊಟ್ಟಿಲ್ವಾ? ಸಮಾಜ ಕಲ್ಯಾಣ ಇಲಾಖೆ ಕೊಟ್ಟಿಲ್ವಾ? ಎಲ್ಲರಿಗೂ ಕೊಟ್ಟಿದ್ದೇವೆ ಸುಮ್ಮನೆ ಪ್ರಚಾರ ಮಾಡುವುದು ಸಿದ್ದರಾಮಯ್ಯ ದಲಿತರ ಬಗ್ಗೆ ಮಾತನಾಡುತ್ತಾರೆ ಆದರೆ ದಲಿತರ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಅಂತ ಅಪಪ್ರಚಾರ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ನಾವು ದಲಿತರಿಗೆ ಮಾಡಿರುವ ಕೆಲಸ ಬಿಜೆಪಿ ಅವರು ದಲಿತರ ದ್ರೋಹಿಗಳು ಬೇರೆ ಯಾವ ಸರ್ಕಾರ ಮಾಡಿಲ್ಲ. ಅವರು ನಮಗೆ ಪಾಠ ಹೇಳು ಕೊಡುವಂತ ಕೆಲಸ ಮಾಡುತ್ತಾರೆ ನಾನು ಕೇಳ್ತೀನಿ ಇವತ್ತು ನರೇಂದ್ರ ಮೋದಿಯವರಿಗೆ ಹಾಗೂ ರಾಜ್ಯ ಬಿಜೆಪಿ ನಾಯಕರಿಗೆ ಕೇಳುತ್ತೇನೆ ರಾಜ್ಯ ಬಿಜೆಪಿ ಎ ಸಿ ಪಿ ಟಿ ಎಸ್ ಪಿ ಕಾಯಿದೆ ಕರ್ನಾಟಕ ಬಿಟ್ಟರೆ ನಮ್ಮ ಸರ್ಕಾರ ಬಿಟ್ಟರೆ ಬಿಜೆಪಿ ಅಧಿಕಾರ ಇರುವಂತಹ ಯಾವ ರಾಜ್ಯಗಳಲ್ಲಿ ಇದೆ ಹೇಳಿ ನೋಡೋಣ? ಇವತ್ತು ಎಸಿಪಿ ಟಿಎಸ್ಪಿ ಕಾಯ್ದೆ ಐಡಿ 24% ದಲಿತರಿಗೆ 39,121 ಕೋಟಿಯನ್ನ ಕರ್ನಾಟಕ ಸರ್ಕಾರ ಖರ್ಚು ಮಾಡುತ್ತಿದೆ.

ಕೇಂದ್ರ ಸರ್ಕಾರದವರು ಮೊನ್ನೆ ಬಜೆಟ್ 48 ಕೋಟಿ ಲಕ್ಷ ಬಜೆಟ್ ಮಂಡನೆ ಮಾಡಿದರು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಇಟ್ಟಂತಹ ಹಣ ಕೇವಲ 65000 ಕೋಟಿ ರೂಪಾಯಿ. ಆ 48 ಲಕ್ಷ ದಲ್ಲಿ 65,000 ಕೋಟಿ ಮಾತ್ರ ಇಟ್ಟಿದ್ದಾರೆ. ಜನಸಂಖ್ಯೆಗೆ ಅನುಗುಣವಾಗಿ ಇಡಬೇಕು ತಾನೆ? ನಿಮಗೆ ದಲಿತರ ಬಗ್ಗೆ ಮಾತನಾಡುವಂತಹ ನೈತಿಕತೆ ಇದೆಯಾ? ಹಿಂದುಳಿದವರ ಬಗ್ಗೆ ಮಾತನಾಡುವ ಕುರಿತು ನೈತಿಕತೆ ಇದೆಯ? ಅಲ್ಪಸಂಖ್ಯಾತರ ಬಗ್ಗೆ ಮಾತನಾಡುವ ನೈತಿಕತೆ ಇದೆಯಾ?

ನೀವು ಯಾವಾಗಲೂ ಸಾಮಾಜಿಕ ನ್ಯಾಯದ ವಿರುದ್ಧ ವಿರುದ್ಧವಾದವರು. ಸಮ ಸಮಾಜ ನಿರ್ಮಾಣ ಮಾಡಬಾರದು ಅಂತ ಇರುವವರು ಇವರು. ಬಸವಣ್ಣನವರ ವಿಚಾರಗಳು, ಅಂಬೇಡ್ಕರ್ ಅವರ ವಿಚಾರಗಳು, ಗಾಂಧೀಜಿ ಅವರ ವಿಚಾರಗಳು, ಇದಕ್ಕೆ ವಿರುದ್ಧವಾಗಿದ್ದವರು ಇವರು. ಇವರಿಂದ ನಾವು ಪಾಠ ಕಲಿಯುವ ಅಗತ್ಯತೆ ನಮಗೆ ಇಲ್ಲ. ಈ ರಾಜ್ಯದ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ನಾವು ಎಲ್ಲ ಜಾತಿಯ ಬಡವರು ಎಲ್ಲಾ ಧರ್ಮದ ಬಡವರಿಗೆ ಆರ್ಥಿಕ ಸಾಮಾಜಿಕ ತುಂಬುವಂತಹ ಪ್ರಯತ್ನ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಮಾಡುತ್ತಿದೆ.

ಹೇಳಿದ್ದೇ ಸುಳ್ಳು ಹೇಳಿ ಎಷ್ಟು ದಿನ ಜನರ ದಾರಿ ತಪ್ಪಿಸುತ್ತೀರಿ? ಸುಳ್ಳೇನೂರು ಸಾರಿ ಹೇಳಿ ಸತ್ಯಮಾಡಬೇಕು ಅಂತ ಹಿಟ್ಲರ್ ನ ವಂಶಸ್ತರು ಇವರೆಲ್ಲ. ಇವರಿಂದ ನಾವು ಏನು ಪಾಠ ಕಲಿಯಬೇಕಾದಂತಹ ಅಗತ್ಯತೆ ಇಲ್ಲ. ನಾನು ಕಾವೇರಿ ಮಾತೆಯಲ್ಲಿ ಪ್ರಾರ್ಥನೆ ಮಾಡುತ್ತೇನೆ. ತಾಯಿ ಕಾವೇರಿ ಪ್ರತಿ ವರ್ಷ ಕನ್ನಂಬಾಡಿ ಕಟ್ಟೆಯನ್ನು ತುಂಬಿಸಮ್ಮ ಎಂದು ಪ್ರಾರ್ಥಿಸುತ್ತೇನೆ ಎಂದರು.

ಇವತ್ತು ನಾಡಿನ ಸಮೃದ್ಧಿ ಆಗಬೇಕಾದರೆ ಒಳ್ಳೆ ಮಳೆ ಬಿದ್ದರೆ ಮಾತ್ರ ಒಳ್ಳೆ ಬೆಳೆ ಬೆಳೆದಾಗ ಮಾತ್ರ ರೈತರ ಸಮೃದ್ಧಿಯಾಗುತ್ತದೆ. ರೈತರ ಮುಖದಲ್ಲಿ ಹರ್ಷವನ್ನು ಕಾಣಲಿಕ್ಕೆ ಸಾಧ್ಯವಾಗುತ್ತದೆ. ಬಿಜೆಪಿ ಹಾಗೂ ಜೆಡಿಎಸ್ ನವರ ಮಾತು ಕೇಳಿ ನಮ್ಮ ಮೇಲೆ ಅನುಮಾನ ಪಟ್ಟು ಕೊಳ್ಳುವಂತಹ ಕೆಲಸಮಾಡಬೇಡಿ. ಅವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಸಿದ್ದರಾಮ ಸರಕಾರವನ್ನ ದುರ್ಬಲಗೊಳಿಸಬೇಕು ಹತ್ತಿರಗೊಳಿಸಬೇಕು ಅಂತ ಪ್ರಯತ್ನ ಮಾಡುತ್ತಿದ್ದಾರೆ. ನಾನು ಅನೇಕ ಕಡೆಗಳಲ್ಲಿ ನೋಡಿದ್ದೇನೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಬಿಜೆಪಿ ಸರ್ಕಾರ ಬಂದ ಮೇಲೆ 121 ಈಡಿ ಪ್ರಕರಣಗಳು ಆಗಿವೆ. 121 ರಲ್ಲಿ 115 ಪ್ರಕರಣಗಳು ವಿರೋಧ ಪಕ್ಷದ ಮೇಲೆ ದಾಳಿಯಾಗಿವೆ ಎಂದು ತಿಳಿಸಿದರು.

Share. Facebook Twitter LinkedIn WhatsApp Email

Related Posts

BREAKING: ಭಾರೀ ಮಳೆ ಹಿನ್ನಲೆ: ನಾಳೆ ಚಿಕ್ಕಮಗಳೂರು ಜಿಲ್ಲೆಯ ಐದು ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಣೆ

02/07/2025 9:49 PM1 Min Read

ಚಿತ್ರದುರ್ಗ: ವಚನ ಸಾಹಿತ್ಯ ಸಂಶೋಧನೆಗೆ ಜೀವನ ಮುಡುಪಿಟ್ಟವರು ಡಾ.ಫ.ಗು.ಹಳಕಟ್ಟಿ- ಡಾ.ಎನ್ ಮಮತಾ

02/07/2025 9:42 PM2 Mins Read

‘KSOU’ನಿಂದ ‘ವಿವಿಧ ಕೋರ್ಸ್’ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

02/07/2025 9:27 PM2 Mins Read
Recent News

BREAKING: ಭಾರೀ ಮಳೆ ಹಿನ್ನಲೆ: ನಾಳೆ ಚಿಕ್ಕಮಗಳೂರು ಜಿಲ್ಲೆಯ ಐದು ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಣೆ

02/07/2025 9:49 PM

BREAKING : ಜಮ್ಮು-ಕಾಶ್ಮೀರದಲ್ಲಿ ಭದ್ರತಾ ಪಡೆ-ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ

02/07/2025 9:47 PM

ಚಿತ್ರದುರ್ಗ: ವಚನ ಸಾಹಿತ್ಯ ಸಂಶೋಧನೆಗೆ ಜೀವನ ಮುಡುಪಿಟ್ಟವರು ಡಾ.ಫ.ಗು.ಹಳಕಟ್ಟಿ- ಡಾ.ಎನ್ ಮಮತಾ

02/07/2025 9:42 PM

ಬೆಂಗಳೂರು-ಚಿಕ್ಕಮಗಳೂರು ಹೆದ್ದಾರಿಯಲ್ಲಿ 5ಜಿ ಸ್ಪೀಡ್ ಚಾರ್ಟ್‌ನಲ್ಲಿ ಜಿಯೋಗೆ ಅಗ್ರಸ್ಥಾನ: ಟ್ರಾಯ್ ಡ್ರೈವ್ ಟೆಸ್ಟ್ ರಿಪೋರ್ಟ್

02/07/2025 9:30 PM
State News
KARNATAKA

BREAKING: ಭಾರೀ ಮಳೆ ಹಿನ್ನಲೆ: ನಾಳೆ ಚಿಕ್ಕಮಗಳೂರು ಜಿಲ್ಲೆಯ ಐದು ತಾಲ್ಲೂಕಿನ ಶಾಲೆಗಳಿಗೆ ರಜೆ ಘೋಷಣೆ

By kannadanewsnow0902/07/2025 9:49 PM KARNATAKA 1 Min Read

ಚಿಕ್ಕಮಗಳೂರು: ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ನಾಳೆಯೂ ಮಳೆಯಾಗು ಮುನ್ಸೂಚನೆಯಿದೆ. ಈ ಹಿನ್ನಲೆಯಲ್ಲಿ ನಾಳೆ ಚಿಕ್ಕಮಗಳೂರು ಜಿಲ್ಲೆಯ ಐದು ತಾಲ್ಲೂಕಿನ ಶಾಲೆಗಳಿಗೆ…

ಚಿತ್ರದುರ್ಗ: ವಚನ ಸಾಹಿತ್ಯ ಸಂಶೋಧನೆಗೆ ಜೀವನ ಮುಡುಪಿಟ್ಟವರು ಡಾ.ಫ.ಗು.ಹಳಕಟ್ಟಿ- ಡಾ.ಎನ್ ಮಮತಾ

02/07/2025 9:42 PM

‘KSOU’ನಿಂದ ‘ವಿವಿಧ ಕೋರ್ಸ್’ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

02/07/2025 9:27 PM

ರಾಜ್ಯದ ‘ವಸತಿ ರಹಿತ’ರಿಗೆ ಗುಡ್ ನ್ಯೂಸ್: ‘ಪಿಎಂ ಅವಾಸ್ ಯೋಜನೆ’ಯಡಿ ನಿವೇಶನಕ್ಕೆ ಅರ್ಜಿ ಆಹ್ವಾನ

02/07/2025 9:23 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.