Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : `ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ’ ಘಟಕ ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ | WATCH VIDEO

11/05/2025 1:23 PM

‘ಡುಮ್ಮ’ ಎಂದು ಗೇಲಿ ಮಾಡಿದ್ದಕ್ಕೆ ಸ್ನೇಹಿತರನ್ನೇ 20 ಕಿ.ಮೀ ಬೆನ್ನಟ್ಟಿ ಗುಂಡಿಕ್ಕಿ ಕೊಂದ ವ್ಯಕ್ತಿ

11/05/2025 1:14 PM

ಗಡಿ ನಿಯಂತ್ರಣ ರೇಖೆಗೆ ತೆರಳುತ್ತಿದ್ದ ಭಾರತೀಯ ಸೇನೆಯ ಯೋಧರ ಮೇಲೆ ಹೂಮಳೆ ಸುರಿಸಿದ ನಾಗರಿಕರು

11/05/2025 1:13 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » Good News: ಶೀಘ್ರವೇ ‘ಪತ್ರಕರ್ತ’ರಿಗೂ ‘ಆರೋಗ್ಯ ವಿಮೆ’ ಜಾರಿ: ಸಿಎಂ ಮಾಧ್ಯಮ ಸಲಹೆಗಾರ ‘ಕೆ.ವಿ ಪ್ರಭಾಕರ್’
KARNATAKA

Good News: ಶೀಘ್ರವೇ ‘ಪತ್ರಕರ್ತ’ರಿಗೂ ‘ಆರೋಗ್ಯ ವಿಮೆ’ ಜಾರಿ: ಸಿಎಂ ಮಾಧ್ಯಮ ಸಲಹೆಗಾರ ‘ಕೆ.ವಿ ಪ್ರಭಾಕರ್’

By kannadanewsnow0927/07/2024 3:08 PM

ಶಿವಮೊಗ್ಗ: ಇವತ್ತಿನ ಪತ್ರಕರ್ತರೆಲ್ಲರೂ ಬಹುತೇಕ ರೈತ-ಕಾರ್ಮಿಕ-ಶ್ರಮಿಕ ಕುಟುಂಬದಿಂದ ಬಂದವರು. ಆದರೆ ಇವರೆಲ್ಲಾ ತಮ್ಮ ಶ್ರಮಿಕ‌ ಸಮುದಾಯಗಳನ್ನು ಮರೆತು ಕಾರ್ಪೊರೇಟ್ ಕಷ್ಟಗಳಿಗೆ ಮಿಡಿಯುವಂತಾಗಿರುವುದು ಬೇಸರದ ಸಂಗತಿ. ಶೀಘ್ರವೇ ಪತ್ರಕರ್ತರಿಗೂ ಆರೋಗ್ಯ ವಿಮೆ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಭರವಸೆ ನೀಡಿದರು.

ವಾರ್ತಾ ಇಲಾಖೆ, ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ‌ ಮಾತನಾಡಿದರು.

ಇವತ್ತಿನ ಪತ್ರಕರ್ತರಿಗೆ, ಮಾಧ್ಯಮಗಳಿಗೆ ಕಾರ್ಪೋರೇಟ್ ಜಗತ್ತಿನ ಸಮಸ್ಯೆಗಳೇ ದೊಡ್ಡದಾಗಿ ಕಾಣುತ್ತಿವೆ. ನಾವೆಲ್ಲಾ ರೈತರ, ಕಾರ್ಮಿಕರ ಮತ್ತು ಶ್ರಮಿಕರ ಮಕ್ಕಳು. ನಮ್ಮ ಸಮುದಾಯಗಳು ಏನೆಲ್ಲಾ ಸಂಕಷ್ಟಗಳನ್ನು ಎದುರಿಸುತ್ತಿವೆ ಎನ್ನುವುದು ನಮಗೆ ಮುಖ್ಯವಾಗುತ್ತಿಲ್ಲ. ನಮ್ಮ ಬೇರುಗಳನ್ನು, ನಮ್ಮ ಹಿನ್ನೆಲೆಯನ್ನು ಮರೆತಿರುವುದೇ ಇದಕ್ಕೆ ಕಾರಣ ಎಂದರು.

ಶಿವಮೊಗ್ಗ ಚಳವಳಿಗಳ ತವರೂರು. ಸಮಾಜವಾದಿ, ಗೇಣಿ ಹೋರಾಟ, ರೈತ-ದಲಿತ ಹೋರಾಟಗಳ ಜೊತೆಗೆ ಪತ್ರಿಕಾ ಚಳವಳಿಗೂ ಹೆಸರಾದ ಜಿಲ್ಲೆ ಎನ್ನುತ್ತಾ ಪತ್ರಿಕೋದ್ಯಮಕ್ಕೆ ಲಂಕೇಶ್ ಅವರ ಕೊಡುಗೆಗಳನ್ನು ಉಲ್ಲೇಖಿಸಿದರು.

ಸರ್ಕಾರ ಪತ್ರಕರ್ತ ಸಮುದಾಯದ ಸಮಸ್ಯೆಗಳಿಗೆ ಗರಿಷ್ಠ ಮಟ್ಟದಲ್ಲಿ ಸ್ಪಂದಿಸುತ್ತಿದೆ ಎಂದು ತಿಳಿಸಿದ ಅವರು ಶಿವಮೊಗ್ಗ ಪ್ರೆಸ್ ಟ್ರಸ್ಟ್ ಮತ್ತು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪದಾಧಿಕಾರಿಗಳು ಮುಂದಿಟ್ಟಿರುವ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.‌

ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ ಕೊಡುವ ಯೋಜನೆ ಜಾರಿಯಾಗುತ್ತಿದೆ. ಒಂದು ತಿಂಗಳಲ್ಲಿ ಅವರ ಕೈ ಸೇರಲಿದೆ. ಪತ್ರಕರ್ತರು ಚಿಕಿತ್ಸೆಗೆ ಹಣವಿಲ್ಲದೆ ಸಾವನ್ಬಪಿರುವ ಘಟನೆ ನಡೆದಿದೆ. ಆರೋಗ್ಯ ವಿಮೆ ಯೋಜನೆ ಜಾರಿ ತರಲು ವಿಳಂಬವಾಗುತ್ತಿದೆ. ಅದನ್ನು ಶೀಘ್ರವೇ ಜಾರಿಗೆ ತರಲಾಗುತ್ತದೆ ಎಂಬುದಾಗಿ ಭರವಸೆ ನೀಡಿದರು.

10 ಕೋಟಿ ಹಣವಿದೆ. ಅದಕ್ಕೆ ಗೈಡ್ ಲೈನ್ಸ್ ಬರ್ತಾಇದೆ. ಬಿಪಿಎಲ್ ಕಾರ್ಡ್ ದಾರ ಪತ್ರಕರ್ತರಿಗೆ ಯೋಜನೆ ಇದೆ ಅದನ್ನ ಸಡಿಲಗೊಳಿಸಲಾಗಿವುದು. ಸಮಾಜದ ಬಗ್ಗೆ ಚಿಂತಿಸುವ ಪತ್ರಕರ್ತರು ಕುಟುಂಬಕ್ಕೂ ಹೆಚ್ಚು ಸಮಯ ನೀಡಿ ಎಂದು ಸಲಹೆ ಮಾಡಿದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಕೆ.ವಿ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಋಷಿಕೇಶ್ ಬಹುದ್ದೂರ್ ದೇಸಾಯಿ ವಿಶೇಷ ಉಪನ್ಯಾಸ ನೀಡಿದರು.

ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರು, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಾಕ್ಷರಿ ಸಿ.ಎಸ್, ಪ್ರೆಸ್ ಟ್ರಸ್ಟ್ ಅಧ್ಯಕ್ಷರಾದ ಮಂಜುನಾಥ್, ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಮದನ್ ಗೌಡರು, ರವಿ ಕುಮಾರ್ ಟೆಲೆಕ್ಸ್ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.‌

‘ಒಲಿಂಪಿಕ್ ಚಿನ್ನದ ಪದಕ’ವನ್ನು ತಯಾರಿಸಲು ಎಷ್ಟು ಚಿನ್ನ ಬಳಸುತ್ತಾರೆ? ಅದರ ಮೌಲ್ಯವೇನು? ಇಲ್ಲಿದೆ ಡೀಟೆಲ್ಸ್ | Olympic gold medal

ಉತ್ತರ ಕ್ಯಾಲಿಫೋರ್ನಿಯಾದಲ್ಲಿ 1,78,000 ಎಕರೆ ಪ್ರದೇಶಕ್ಕೆ ಬೆಂಕಿ:134 ಕಟ್ಟಡಗಳು ನಾಶ

ಸಾರ್ವಜನಿಕರ ಗಮನಕ್ಕೆ: ‘ಮುತ್ತತ್ತಿ ಪ್ರವಾಸಿ ತಾಣ’ಕ್ಕೆ ಪ್ರವಾಸಿಗರ ಭೇಟಿಗೆ ನಿಷೇಧ

Share. Facebook Twitter LinkedIn WhatsApp Email

Related Posts

BREAKING : ದೆಹಲಿ-ಬೆಂಗಳೂರು ಕೆಕೆ ಎಕ್ಸ್ ಪ್ರೆಸ್ ರೈಲಿಗೆ ಹುಸಿ ಬಾಂಬ್ ಕರೆ : ಆರೋಪಿ ಅರೆಸ್ಟ್

11/05/2025 11:48 AM1 Min Read

BIG NEWS: ಶಾಲಾ ಪರೀಕ್ಷಾ ಮಂಡಳಿ ಮಹಾ ಎಡವಟ್ಟು: SSLC ಉತ್ತರ ಪತ್ರಿಕೆ ಸ್ಕ್ಯಾನ್ ಮಾಡದೇ ಮೊಬೈಲ್ ಪೋಟೋ ಅಪ್ ಲೋಡ್, ವಿದ್ಯಾರ್ಥಿಗಳು ಹೈರಾಣು

11/05/2025 11:24 AM1 Min Read

BIG NEWS : `CUET’ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ : ಈ ರೀತಿ ಡೌನ್‌ಲೋಡ್ ಮಾಡಿಕೊಳ್ಳಿ

11/05/2025 10:58 AM2 Mins Read
Recent News

BREAKING : `ಬ್ರಹ್ಮೋಸ್ ಸೂಪರ್ ಸಾನಿಕ್ ಕ್ರೂಸ್ ಕ್ಷಿಪಣಿ’ ಘಟಕ ಉದ್ಘಾಟಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ | WATCH VIDEO

11/05/2025 1:23 PM

‘ಡುಮ್ಮ’ ಎಂದು ಗೇಲಿ ಮಾಡಿದ್ದಕ್ಕೆ ಸ್ನೇಹಿತರನ್ನೇ 20 ಕಿ.ಮೀ ಬೆನ್ನಟ್ಟಿ ಗುಂಡಿಕ್ಕಿ ಕೊಂದ ವ್ಯಕ್ತಿ

11/05/2025 1:14 PM

ಗಡಿ ನಿಯಂತ್ರಣ ರೇಖೆಗೆ ತೆರಳುತ್ತಿದ್ದ ಭಾರತೀಯ ಸೇನೆಯ ಯೋಧರ ಮೇಲೆ ಹೂಮಳೆ ಸುರಿಸಿದ ನಾಗರಿಕರು

11/05/2025 1:13 PM

ವಿದ್ಯಾರ್ಥಿಗಳೇ ಗಮನಿಸಿ : `CBSE’ 10, 12 ನೇ ತರಗತಿ ಫಲಿತಾಂಶದ ಬಗ್ಗೆ ಇಲ್ಲಿದೆ ಮುಖ್ಯ ಮಾಹಿತಿ

11/05/2025 1:06 PM
State News
KARNATAKA

BREAKING : ದೆಹಲಿ-ಬೆಂಗಳೂರು ಕೆಕೆ ಎಕ್ಸ್ ಪ್ರೆಸ್ ರೈಲಿಗೆ ಹುಸಿ ಬಾಂಬ್ ಕರೆ : ಆರೋಪಿ ಅರೆಸ್ಟ್

By kannadanewsnow5711/05/2025 11:48 AM KARNATAKA 1 Min Read

ಬೆಂಗಳೂರು: ದೆಹಲಿಯಿಂದ ಬೆಂಗಳೂರಿಗೆ ಆಗಮಿಸುವ ಕೆಕೆ ಎಕ್ಸ್ ಪ್ರೆಸ್ ರೈಲಿನಲ್ಲಿ ಹುಸಿ ಬಾಂಬ್ ಕರೆ ಬಂದಿದ್ದು, ಕೂಡಲೇ ಪೊಲೀಸರು ತನಿಖೆ…

BIG NEWS: ಶಾಲಾ ಪರೀಕ್ಷಾ ಮಂಡಳಿ ಮಹಾ ಎಡವಟ್ಟು: SSLC ಉತ್ತರ ಪತ್ರಿಕೆ ಸ್ಕ್ಯಾನ್ ಮಾಡದೇ ಮೊಬೈಲ್ ಪೋಟೋ ಅಪ್ ಲೋಡ್, ವಿದ್ಯಾರ್ಥಿಗಳು ಹೈರಾಣು

11/05/2025 11:24 AM

BIG NEWS : `CUET’ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ : ಈ ರೀತಿ ಡೌನ್‌ಲೋಡ್ ಮಾಡಿಕೊಳ್ಳಿ

11/05/2025 10:58 AM

ಜೀವನದಲ್ಲಿ ಅದೆಷ್ಟೇ ಕಷ್ಟವಿದ್ರು ಈ ಶಕ್ತಿಶಾಲಿ ನರಸಿಂಹ ಸ್ವಾಮಿ ಶ್ಲೋಕವನ್ನು ನಿತ್ಯ ಪಠಿಸಿ.!

11/05/2025 10:53 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.