ಬೆಂಗಳೂರು : ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾವು ಹೆಚ್ಚು ಸ್ಥಾನ ಗೆದ್ದಿದ್ದಕ್ಕೆ ರಾಜಕೀಯ ಪ್ರೇರಿತ ಹೇಳಿಕೆ ನೀಡುತ್ತಿದ್ದಾರೆ. ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಮಸಿ ಬೆಳೆಯಲು ಪ್ರಯತ್ನ ಮಾಡುತ್ತಿದ್ದಾರೆ. ಬಿಜೆಪಿಗೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದಿದ್ದು ಸಹಿಸಲು ಆಗುತ್ತಿಲ್ಲ. ಮತ್ತೆ ನಾನು ಸಿಎಂ ಆಗಿರುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ವಿಧಾನಸೌಧದಲ್ಲಿ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ ವಾಗ್ದಾಳಿ ನಡೆಸಿದರು.
ಬೆಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮುಡಾ ಹಗರಣದ ಕುರಿತಂತೆ ದಾಖಲೆಗಳ ಸಮೇತ ಮಾತನಾಡಿದ ಅವರು, 1983 ರಲ್ಲಿ ಶಾಸಕನಾದೆ 1984 ರಲ್ಲಿ ನಾನು ಮಂತ್ರಿಯಾದವನು. ನಾನು ಮಂತ್ರಿಯಾಗಿ 40 ವರ್ಷ ಆಯ್ತು. ಇವತ್ತಿನವರೆಗೂ ನನ್ನ ವಿರುದ್ಧ ಒಂದು ಕಪ್ಪು ಚುಕ್ಕೆ ಕೂಡ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ ಬಿಜೆಪಿ ಜೆಡಿಎಸ್ ನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿ ಜೆಡಿಎಸ್ ನವರು ಜನರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ ಎಂದು ವಿಧಾನಸೌಧದಲ್ಲಿ ಬಿಜೆಪಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು
ಎರಡು ವಾರಗಳ ಕಾಲ ಮುಂಗಾರು ಅಧಿವೇಶನವನ್ನು ಕರೆದಿದ್ದೇವೆ. ರಾಜ್ಯದ ಸಮಸ್ಯೆಗಳ ಬಗ್ಗೆ ವಿಪಕ್ಷದವರು ಸದನದಲ್ಲಿ ಚಕಾರ ಎತ್ತಲಿಲ್ಲ. ರಾಜ್ಯದ ಪ್ರವಾಹದ ಬಗ್ಗೆ ವಿಪಕ್ಷದವರು ಯಾವುದೇ ಚರ್ಚೆ ಮಾಡಲಿಲ್ಲ. ಸರ್ಕಾರಕ್ಕೆ ಮಸಿ ಬಳಿಯಲು ಧರಣಿ ಮಾಡಿದ್ದಾರೆಂದು ಇದರಿಂದ ಗೊತ್ತಾಗುತ್ತದೆ.40 ವರ್ಷದ ನನ್ನ ರಾಜಕಾರಣದಲ್ಲಿ ನನ್ನ ಮೇಲೆ ಯಾವುದೇ ಕಪ್ಪು ಚುಕ್ಕೆ ಬಂದಿಲ್ಲ ಎಂದರು.
ಅವರು ವಿರೋಧ ಪಕ್ಷದ ಕೆಲಸವನ್ನು ಮಾಡುತ್ತಿಲ್ಲ. ದ್ವೇಷದ ಸೇಡಿನ ರಾಜಕಾರಣಕ್ಕೆ ಅಧಿವೇಶನ ಬಳಸಿಕೊಂಡಿದ್ದಾರೆ. ಮುಡಾ ಸರ್ವೇ ನಂಬರ್ 464 ರಲ್ಲಿ 3 ಎಕರೆ 16 ಗುಂಟೆ ಪಡೆದಿದ್ದಾರೆ. ಬಿಎ ಮಂಜುನಾಥ ಸ್ವಾಮಿ ಎಂಬಾತ ಭೂಮಿಯನ್ನು ಕ್ರಯಕ್ಕೆ ಪಡೆದರು. ಇದು ಪ್ರಿತ್ರಾರ್ಜಿತ ಆಸ್ತಿ ಜಮೀನಿನ ಪೂರ್ವ ಮಾಲೀಕ ನಿಂಗ ಬಿನ್ ಜವರ. 1935 ರಲ್ಲಿ ಮೈಸೂರು ತಾಲೂಕು ಕಚೇರಿಗೆ ಅರ್ಜಿ ಹಾಕಲಾಗಿತ್ತು. ಹರಾಜಿನಲ್ಲಿ 3 ಕೋಟಿ ಕೊಟ್ಟು ಕ್ರಯ ಮಾಡಲಾಗಿತ್ತು. ಹರಾಜು ಕೂಗಿದಾಗ ನಿಂಗ ಎಂಬವರಿಗೆ ಜಮೀನು ಕ್ರಯ ಆಗುತ್ತದೆ. ಯಾವ ಕಾರಣಕ್ಕು ಕೂಡ ಪಿಟಿಸಿಎಲ್ ಕಾಯ್ದೆ ಅಟ್ರಾಕ್ಟ್ ಆಗಲ್ಲ ಎಂದು ತಿಳಿಸಿದರು.
ಬಿಜೆಪಿಯವರು ಜನರ ವಿಶ್ವಾಸ ಗಳಿಸಲು ವಾಮಮಾರ್ಗ ಹುಡುಕುತ್ತಿದ್ದಾರೆ. ಬಿಜೆಪಿ ಜೆಡಿಎಸ್ ನವರು ತಪ್ಪು ಮಾಹಿತಿಯನ್ನು ಜನರಿಗೆ ಕೊಡುತ್ತಿದ್ದಾರೆ. ಬಿಜೆಪಿ ಜೆಡಿಎಸ್ ನವರು ಕುಟೀಲ ಸಾಹಸ ಹರಸಾಹಸ ಮಾಡುತ್ತಿದ್ದಾರೆ. ಮುಡಾ ಜಾಗದ ವಂಶವೃಕ್ಷ ತೋರಿಸಿದ ಸಿದ್ದರಾಮಯ್ಯ. 2019ರಲ್ಲಿ 1 ಸ್ಥಾನ ಗೆದ್ದಿದ್ದೆವು ಈಗ 9 ಸ್ಥಾನ ಗೆದ್ದಿದ್ದೇವೆ. ಇದರಿಂದ ಬಿಜೆಪಿ ಜೆಡಿಎಸ್ ನವರು ಹತಾಶರಾಗಿದ್ದಾರೆ.ಬಿಜೆಪಿಯವರು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿಲ್ಲ. ದ್ವೇಷದ ರಾಜಕಾರಣ ಮಾಡಲು ವಿಧಾನಸೌಧ ಬಳಸಿಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.