ನವದೆಹಲಿ: ರಾಷ್ಟ್ರದ ಭದ್ರತೆ ವಿಚಾರದಲ್ಲಿ ಯಾವುದೇ ರಾಜಿ ಬೇಡ ಎಂದು ಪ್ರತಿಪಾದಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸರ್ಕಾರದ ಸಮಗ್ರ ದೃಷ್ಟಿಕೋಣವನ್ನು ಅಳವಡಿಸಿಕೊಂಡು ಭಯೋತ್ಪಾದಕ ಜಾಲಗಳನ್ನು ಮತ್ತು ಅವುಗಳ ಬೆಂಬಲಿತ ಪರಿಸರ ವ್ಯವಸ್ಥೆಯನ್ನು ಮಟ್ಟಹಾಕಲು ತನಿಖಾ ಸಂಸ್ಥೆಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಈ ವಿಚಾರದಲ್ಲಿ ಎಲ್ಲಾ ಸಂಸ್ಥೆಗಳ ನಡುವೆ ಸಮನ್ವಯ ಇರಬೇಕಿದೆ ಎಂಬ ಸಲಹೆಯನ್ನೂ ಅವರು ನೀಡಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ದೆಹಲಿಯಲ್ಲಿ ದೇಶದ ಭದ್ರತಾ ಸವಾಲುಗಳನ್ನು ನಿಭಾಯಿಸುವ ಹೊಣೆ ವಹಿಸಿರುವ ಗುಪ್ತಚರ ಇಲಾಖೆ (ಇಂಟೆಲಿಜೆನ್ಸ್ ಬ್ಯೂರೋ)ಯ ಮಲ್ಟಿ ಏಜೆನ್ಸಿ ಸೆಂಟರ್ (MAC) ನ ಕಾರ್ಯವನ್ನು ಪರಿಶೀಲಿಸಲು ವಿವಿಧ ಭದ್ರತಾ ಮತ್ತು ಕಾನೂನು ಅನುಷ್ಠಾನ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದರು. ನಕ್ಸಲ್ ಸಮಸ್ಯೆ, ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ಸಹಿತ ಸವಾಲುಗಳು ಎದುರಾಗಿರುವ ಸಂದರ್ಭದಲ್ಲೇ ವಿವಿಧ ತನಿಖಾ ಸಂಸ್ಥೆಗಳೊಂದಿಗೆ ಅವರು ನಡೆಸಿದ ಸಭೆ ಕುತೂಹಲದ ಕೇಂದ್ರಬಿಂದುವಾಯಿತು.
ತನಿಖಾ ಏಜೆನ್ಸಿಗಳ ಪ್ರಮುಖರನ್ನು ಹಾಗೂ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ದೇಶಾದ್ಯಂತದ ವಿವಿಧ ಭದ್ರತಾ ಸಂಸ್ಥೆಗಳ ಮುಖ್ಯಸ್ಥರು ಮತ್ತು ಇತರ ಗುಪ್ತಚರ ಮತ್ತು ಅನುಷ್ಠಾನ ಸಂಸ್ಥೆಗಳಿಗೆ ರಾಷ್ಟ್ರದ ಭದ್ರತೆಯತ್ತ ಸರಕಾರದ ಸಮಗ್ರ ದೃಷ್ಟಿಕೋಣವನ್ನು ಅಳವಡಿಸಿಕೊಳ್ಳುವಂತೆ ಸೂಚಿಸಿದರು. ಭಯೋತ್ಪಾದಕ ಜಾಲಗಳನ್ನು ಮತ್ತು ಅವುಗಳ ಬೆಂಬಲಿತ ವ್ಯವಸ್ಥೆಯನ್ನು ಮಟ್ಟಹಾಕಲು ಎಲ್ಲಾ ಸಂಸ್ಥೆಗಳ ನಡುವೆ ಹೆಚ್ಚು ಸಮನ್ವಯತೆಗೆ ಆದ್ಯತೆ ಇರಬೇಕು ಎಂದೂ ಸೂಚಿಸಿದರು.
ದೇಶದ ಒಳಗಿನ ಭದ್ರತಾ ಪರಿಸ್ಥಿತಿಯನ್ನು ಮತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟ ಮುಂದುವರಿಯುತ್ತಲೇ ಇರುತ್ತದೆ. ಈ ಕಾರ್ಯದಲ್ಲಿ ಭಾಗಿಯಾಗಿರುವ ಇಲಾಖೆಗಳು ಮಲ್ಟಿ ಏಜೆನ್ಸಿ ಸೆಂಟರ್ ನಲ್ಲಿ ನಿರಂತರವಾಗಿ ತೊಡಗಿಕೊಳ್ಳಲು ಮತ್ತು ಕಾನೂನು ಅನುಷ್ಠಾನ ಸಂಸ್ಥೆಗಳು, ಮಾದಕ ವಸ್ತು ನಿಗ್ರಹ ಪಡೆಗಳು, ಸೈಬರ್ ಭದ್ರತಾ ಮತ್ತು ಗುಪ್ತಚರ ಸಂಸ್ಥೆಗಳನ್ನು ತ್ವರಿತ ಮತ್ತು ನಿರ್ಣಾಯಕ ಕ್ರಮಕ್ಕಾಗಿ ಒಟ್ಟಿಗೆ ತರಲು ಸಮಗ್ರ ಕಾರ್ಯಸೂಚಿ ರೂಪಿಸಬೇಕೆಂದು ಅಧಿಕಾರಿಗಳಿಗೆ ಶಾ ಕರೆ ನೀಡಿದರು.
MAC ತನ್ನ ಸದಸ್ಯರ ನಂಬಿಕೆಯನ್ನು ಗಳಿಸಿದೆ ಮತ್ತು ವಿವಿಧ ವಿಭಾಗಗಳಲ್ಲಿ ಸಹಭಾಗಿಗಳಾಗಿರುವ ಕ್ರಿಯಾಶೀಲರ ಕ್ರಿಯಾತ್ಮಕ ಮತ್ತು ರಿಯಲ್ ಟೈಮ್ ಮಾಹಿತಿ ಹಂಚಿಕೆಗೆ ವೇದಿಕೆಯಾಗಿ 24X7 ಕೆಲಸ ಮಾಡಬೇಕಿದೆ ಎಂದ ಗೃಹ ಸಚಿವರು ರಾಷ್ಟ್ರದ ಭದ್ರತಾ ಸವಾಲುಗಳನ್ನು ನಿರ್ವಹಿಸಲು ಎಲ್ಲಾ ಸಂಸ್ಥೆಗಳಿಂದ ತಾಂತ್ರಿಕವಾಗಿ ತಜ್ಞರು ಮತ್ತು ಉತ್ಸಾಹಿ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಲು ನಿರ್ದೇಶನ ನೀಡಿದರು. ಬಿಗ್ ಡೇಟಾ ಮತ್ತು AI/ML ಚಾಲಿತ ವಿಶ್ಲೇಷಣೆ ಮತ್ತು ತಾಂತ್ರಿಕ ಸಾಂದರ್ಭಿಕಗಳನ್ನು ಬಳಸಿಕೊಂಡು ಭಯೋತ್ಪಾದಕ ಪರಿಸರ ವ್ಯವಸ್ಥೆಯನ್ನು ಮುರಿಯಬೇಕಿದೆ ಎಂದು ಅವರು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ MAC ರೂಪರೇಷೆಗೆ ತಾಂತ್ರಿಕ ಮತ್ತು ಕಾರ್ಯಾಚರಣಾ ಕ್ರಮ ಭಾರೀ ದೊಡ್ಡಮಟ್ಟದಲ್ಲಿ ಪರಿವರ್ತನೆಯಾಗುತ್ತಿದೆ ಮತ್ತು ಸುಧಾರಣಾ ರೂಪ ಪಡೆಯುತ್ತಿದೆ. ಸವಾಲುಗಳನ್ನು ನಿಭಾಯಿಸುವ ಪ್ರತಿಕ್ರಿಯೆಗಳಲ್ಲಿ ಒಂದೆಮ್ಮೆ ಮುಂಚೂಣಿಯಲ್ಲೇ ಇರಬೇಕಿದೆ ಎಂದು ಅಮಿತ್ ಶಾ ಸಲಹೆ ಮಾಡಿದರು.