ಬೆಂಗಳೂರು: ಮನೆ ಊಟ, ಹಾಸಿಗೆ, ಪುಸಕ್ತಕ್ಕೆ ಅವಕಾಶ ನೀಡುವಂತೆ ಬೆಂಗಳೂರು ಕೇಂದ್ರ ಕಾರಗೃಹದ ಅಧಿಕಾರಿಗಳಿಗೆ ನಿರ್ಧೇಶನ ನೀಡುವಂತೆ ಹೈಕೋರ್ಟ್ಗೆ ನಟ ದರ್ಶನ್ ಮನವಿ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಕೊಲೆ ಆರೋಪದ ಮೇಲೆ ಸದ್ಯ ಜೈಲಿನಲ್ಲಿರುವ ನಟ ದರ್ಶನ್ ಆರೋಗ್ಯದಲ್ಲಿ ಏರುಪೇರು ಉಂಟಾಗುತ್ತಿದ್ದು, ಅವರು ಜೈಲಿನ ಆಹಾರವನ್ನು ಸೇವನೆ ಮಾಡಿದರೆ ಅಜೀರ್ಣ ಮತ್ತು ವಾಂತಿಯಾಗುತ್ತಿದೆ ಎನ್ನಲಾಗಿದೆ. ಇದಲ್ಲದೇ ಜೈಲಿನ ವೈದ್ಯರು ಕೂಡ ಇದನ್ನೇ ಉಲ್ಲೇಖ ಮಾಡಿದ್ದು, ಇದನ್ನೆ ಆಧಾರವಾಗಿ ಇಟ್ಟುಕೊಂಡು ದರ್ಶನ್ ಪರ ವಕೀಲರು ರಿಟ್ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾರೆ ಎನ್ನಲಾಗಿದೆ. ಅರ್ಜಿ ವಿಚಾರಣೆ ನಾಳೆ ನ್ಯಾಯಾಧೀಶರ ಮುಂದೆ ಬರಲಿದೆ ಎನ್ನಲಾಗಿದೆ.