ಬೆಂಗಳೂರು : ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಶಾಸಕರೊಬ್ಬರ ಕಾರು ಚಾಲಕನಿಗೆ ಎಸ್ ಐಟಿ ನೋಟಿಸ್ ನೀಡಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪ್ರದೋಶ್ ಗೆ ಪಿಕಪ್ ಮಾಡಿದ್ದ ಆರೋಪ ಸಂಬಂಧ ಶಾಸಕರೊಬ್ಬರ ಕಾರು ಚಾಲಕರಾಗಿರುವ ಕಾರ್ತಿಕ್ ಪುರೋಹಿತ್ ಗೆ ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ ನೋಟಿಸ್ ನೀಡಿದ್ದಾರೆ.
ಪ್ರಕರಣ ಆರೋಪಿ ಪ್ರದೋಶ್ ನನ್ನು ತನ್ನ ಕಾರಿನಲ್ಲೇ ಗಿರಿನಗರಕ್ಕೆ ಕಾರ್ತಿಕ್ ಪುರೋಹಿತ್ ಕರೆತಂದಿದ್ದ ಎನ್ನಲಾಗಿದ್ದು, ಅಂದು ಏನಾಯ್ತು ಎಂಬುದರ ಕುರಿತು ಮಾಹಿತಿ ಪಡೆಯಲು ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ ನೋಟಿಸ್ ನೀಡಿದೆ.