ಯಾದಗಿರಿ : ಯಾದಗಿರಿಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, 2 ತಿಂಗಳ ಮಗುವನ್ನು ಬಾವಿಗೆ ಎಸೆದ ಅಪ್ರಾಪ್ತ ಬಾಲಕಿ ಕೊಲೆ ಮಾಡಿರುವ ಘಟನೆ ನಡೆದಿದೆ.
ಯಾದಗಿರಿಯ ಅಂಬೇಡ್ಕರ್ ನಗರದ ನಾಗೇಶ ಹಾಗೂ ಚಿಟ್ಟೆಮ್ಮ ದಂಪತಿಯ ಮಗಳಾದ ಮೀನಾಕ್ಷಿ (2ತಿಂಗಳು)ಯನ್ನು ಪೋಸ್ಟ್ ಆಫೀಸ್ ಹಿಂದೆಯಿರುವ ಬಾವಿಯಲ್ಲಿ ಎಸೆದು ಅಪ್ರಾಪ್ತೆ ಬಾಲಕಿ ಕೊಲೆ ಮಾಡಿದ್ದಳು, ಘಟನೆ ಬಗ್ಗೆ ಶನಿವಾರ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಬಾಲಕಿಯು ಮಗುವಿನ ಚಿಕ್ಕಪ್ಪನನ್ನು ಪ್ರೀತಿಸುತ್ತಿದ್ದಳು. ಆದರೆ, ಸಂಬಂಧದಲ್ಲಿ ತಂಗಿಯಾಗಿದ್ದ ಆರೋಪಿಯನ್ನು ಪ್ರೀತಿಸದ ಯುವಕ ಬೇರೆ ಯುವತಿಯನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ. ಹೀಗಾಗಿ ಯುವಕನನ್ನು ಜೈಲಿಗೆ ಕಳುಹಿಸಲು ಬಾಲಕಿಯೇ ಎರಡು ತಿಂಗಳ ಮಗುವನ್ನು ಕೊಲೆ ಮಾಡಿದ್ದಾಳೆ ಎಂದು ಯಾದಗಿರಿ ಪೋಲಿಸರು ತಿಳಿಸಿದ್ದಾರೆ.