ಬೆಂಗಳೂರು: ನಟ ದರ್ಶನ್ ಜೈಲುಪಾಲಾಗಿದ್ದಕ್ಕೆ ಆತನ ಗೆಳತಿ ಪವಿತ್ರಗೌಡ ಜೈಲಿನಲ್ಲಿ ಕಣ್ಣೀರಿಟ್ಟಿದ್ದಾರೆ ಎನ್ನಲಾಗಿದೆ. ಇಂದು ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ಆಗಮಿಸಿದ ಸುದ್ದಿ ಕೇಳಿದ ಪವಿತ್ರಗೌಡ ಎಂತಹ ಕೆಲಸ ಆಯ್ತು ತನ್ನಿಂದಲೇ ಈ ಕೆಲಸ ಆಗಿದೆ ಅಂಥ ಕಣ್ಣಿರಿಟ್ಟಿದ್ದಾರೆ ಎನ್ನಲಾಗಿದೆ.
ಜೈಲಿನ ಡಿ ಬಾರಕ್ ನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪವಿತ್ರಗೌಡಳನ್ನು ನಿನ್ನೆಯಿಂದ ಆಕೆಯ ಸಂಬಂಧಿಕರು ಮಾತನಾಡಸಲು ಆಗಮಿಸಿದ್ದರು ಎನ್ನಲಾಗಿದೆ. ಮತ್ತೊಂದೆಡೆ ಜೈಲು ಪಾಲಾಗಿರುವ ನಟ ದರ್ಶನ್ ಕೂಡ ಜೈಲಿನ ಬ್ಯಾರಕ್ ಒಳಗೆ ಹೋಗುತ್ತಿದ್ದ ಹಾಗೇ ಮೌನಕ್ಕೆ ಶರಣಾಗಿದ್ದು, ತಮ್ಮ ಸಹಚರರ ಬಳಿ ಯಾವುದೇ ಮಾತನಾಡಲು ಮುಂದಾಗಿಲ್ಲ ಎನ್ನಲಾಗಿದೆ.
ದರ್ಶನ್ 6106, ಧನರಾಜ್ 6107, ವಿನಯ್ 6108, ಪ್ರದೋಶ್ 6109 ಸಂಖ್ಯೆಯನ್ನು ನೀಡಲಾಗಿದೆ.ಭದ್ರತಾ ದೃಷ್ಟಿಯಿಂದ ದರ್ಶನ್ ಅವರನ್ನು ವಿಶೇಷ ಬ್ಯಾರಕ್ ನಲ್ಲಿ ಇರಿಸಲಾಗಿದ್ದು, ದರ್ಶನ್ರನ್ನು ತುಮಕೂರು ಜೈಲಿಗೆ ಕಳುಹಿಸುವ ಬಗ್ಗೆ ಕೂಡ ಶೀಘ್ರದಲ್ಲಿ ನ್ಯಾಯಾಲಯದಲ್ಲಿ ಆದೇಶ ಹೊರ ಬೀಳುವ ಸಾಧ್ಯತೆ ಇದ್ದು, ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ಸೋಮವಾರ ನಡೆಯಲಿದೆ.