ಶಿವಮೊಗ್ಗ: ರಾಜ್ಯದಲ್ಲಿ ಬರಗಾಲದ ನಂತ್ರ ಮುಂಗಾರು ಮಳೆ ಆರಂಭಗೊಂಡಿದೆ. ರೈತಲು ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ. ಈ ರೈತರಿಗೆ ರಾಜ್ಯ ಸರ್ಕಾರ ಭಿತ್ತನೆ ಬೀಜ, ರಸಗೊಬ್ಬರವನ್ನು ಉಚಿತವಾಗಿ ವಿತರಿಸಬೇಕು ಅಂತ ಕರ್ನಾಟಕ ರಾಜ್ಯ ರೈತ ಸಂಘದ ವರಿಷ್ಠರಾದಂತ ಕೆ.ಟಿ ಗಂಗಾಧರ ಗೌಡ ಹೇಳಿದ್ದಾರೆ.
ಇಂದು ಸಾಗರ ನಗರದ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಆರೋಗ್ಯವನ್ನು ವಿಚಾರಿಸಿದರು. ಅಲ್ಲದೇ ಅವರಿಗೆ ಶಾಲು ಹೊದಿಸಿ, ಫಲತಾಂಬೂಲ ನೀಡಿ ಸನ್ಮಾನಿಸಿದರು. ಆ ಬಳಿಕ ಅವರೊಂದಿಗೆ ಚರ್ಚೆಯ ವೇಳೆಯಲ್ಲಿ ಕರ್ನಾಟಕ ರೈತ ಸಂಘದ ವರಿಷ್ಠರಾದಂತ ಕೆ.ಟಿ ಗಂಗಾಧರ ಗೌಡ ಅವರು ಕೃಷಿಯ ಬಗ್ಗೆ ಮಾಹಿತಿ, ಒಲವಿನ ಬಗ್ಗೆ ಅರಿವು ಮೂಡಿಸೋ ಕೆಲಸ ಮಾಡಲಾಗುತ್ತಿದ್ದೇನೆ. ಸ್ವಾತಂತ್ರ್ಯ ಪೂರ್ವದಲ್ಲಿ ಕಾನೂನು ವಿರುದ್ಧ ಹೋರಾಟ ಮಾಡಲಾಗುತ್ತಿತ್ತು. ಈಗ ರೈತರ ವಿರುದ್ಧದ ಕಾನೂನು ಜಾರಿಗೊಳಿಸಲಾಗುತ್ತಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದಂತ ಕಾಗೋಡು ತಿಮ್ಮಪ್ಪನವರು, ಬದುಕಿನಲ್ಲಿ ಬದಲಾವಣೆ ಕಾಣೋದು ಅನಿವಾರ್ಯ. ಅದು ಇದ್ದೇ ಇದೆ. ಸಮಾಜ ಬದಲಾಗುತ್ತಿದೆ. ಬೆಳೆಯುತ್ತಿದೆ. ನಾವು ಅ ಬದಲಾವಣೆಯನ್ನು ನೋಡಿಕೊಂಡು ಬದಲಾಗಬೇಕಿದೆ. ನಾನು ಹಳ್ಳಿಯಿಂದ ಹೋರಾಟ ಶುರು ಮಾಡಿದವನು. ಗೇಣಿದಾರರಿಗೆ ಭೂಮಿ ಕೊಡಿಸುವ ಕೆಲಸ ಮಾಡಲಾಯ್ತು ಎಂದರು.
ಈ ಬಳಿಕ ಮಾತನಾಡಿದಂತ ಕೆ.ಟಿ ಗಂಗಾಧರ ಗೌಡ ಅವರು, ಬರಗಾದ ತೀವ್ರವಾಗಿ ಕಾಡಿದೆ. ರೈತರು ಹೇಗೆ ಎದುರಿಸಿದ್ದಾರೆ ಎಂಬುದು ಗಮನಿಸಬೇಕು. ರೈತರ ಸಾಲ ಮರುಪಾವತಿಗೆ ಜಪ್ತಿ, ಹರಾಜು ಮಾಡುತ್ತಿದೆ ಎಂದರು.
ಬರಗಾಲದ ವೇಳೆಯಲ್ಲಿ ರೈತರಿಗೆ ಭಿತ್ತನೆ ಬೀಜ, ಗೊಬ್ಬರ ಉಚಿತವಾಗಿ ಸರಬರಾಜು ಮಾಡಬೇಕು. ರಾಜ್ಯದ ಸರ್ಕಾರ ತೈಲಬೆಲೆ ಏರಿಕೆ ಮಾಡಿರೋದು ರೈತರ ಉತ್ಪಾದನಾ ವೆಚ್ಚದ ಮೇಲೆ ಪರಿಣಾಮ ಬೀರಲಿದೆ. ಕೃಷಿ ಉತ್ಪನ್ನಗಳಿಗೆ ಬಳಸುವ ಯಂತ್ರೋಪಕರಣಗಳಿಗೆ ಸಬ್ಸಿಡಿ ದರದಲ್ಲಿ ತೈಲವನ್ನು ಸರಬರಾಜು ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲಾ ಅಧ್ಯಕ್ಷರಾದ ಹಾಲಪ್ಪ ಗೌಡ, ಕಾರ್ಯಾಧ್ಯಕ್ಷ ಸೇನಾಪತಿ ಗೌಡ, ಗೌರವಾಧ್ಯಕ್ಷ ಈರಣ್ಣ ಪ್ಯಾಟಿ, ಕಾರ್ಯದರ್ಶಿ ಜಗದೀಶ್ ನಾಯಕ್, ಹಸಿರು ಸೇನೆ ಭದ್ರಾವತಿ ತಾಲ್ಲೂಕು ಅಧ್ಯಕ್ಷರಾದ ಬಸವರಾಜು, ಯೋಗೀಶ್, ಗಾಮಪ್ಪ ಸೂರನಗದ್ದೆ ರೈತಸಂಘ ಸಾಗರ ತಾಲ್ಲೂಕು ಕಾರ್ಯದರ್ಶಿ, ಅರುಣ್ ಕುಮಾರ್ ಕಸ್ವೆ ತಾಲ್ಲೂಕು ಅಧ್ಯಕ್ಷರು ಸೇರಿದಂತೆ ಮತ್ತಿತರರು ಹಾಜರಿದ್ದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING: ICSE, ISC ಸುಧಾರಣಾ ಪರೀಕ್ಷೆ 2024ರ ವೇಳಾಪಟ್ಟಿ ಪ್ರಕಟ | ICSE, ISC improvement exam 2024