ಅಹ್ಮದಾಬಾದ್: ಭ್ರಷ್ಟ ಸರ್ಕಾರಿ ಅಧಿಕಾರಿಗಳು ಮತ್ತು ಅವರ ಮಧ್ಯವರ್ತಿಗಳು ಗುಜರಾತ್ನಲ್ಲಿ ಜನರಿಗೆ ಸುಲಭ ಕಂತುಗಳಲ್ಲಿ ಲಂಚ ಪಾವತಿಸುವ ಆಯ್ಕೆಯನ್ನು ನೀಡುತ್ತಿದ್ದಾರೆ ಎನ್ನಲಾಗಿದೆ. ಈ ವರ್ಷ ಇದುವರೆಗೆ ಕನಿಷ್ಠ 10 ಇಂತಹ ಪ್ರಕರಣಗಳು ವರದಿಯಾಗಿವೆ, ಆದರೆ ಈ ಅಭ್ಯಾಸದಲ್ಲಿ ಹೊಸದೇನೂ ಇಲ್ಲ ಎಂದು ಭ್ರಷ್ಟಾಚಾರ ನಿಗ್ರಹ ದಳ ಕೂಡ ಹೇಳಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಜರಾತ್ನಲ್ಲಿ ಈ ವರ್ಷ ಕನಿಷ್ಠ ಹತ್ತು ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಅವರ ಮಧ್ಯವರ್ತಿಗಳು ಕಂತುಗಳಲ್ಲಿ ಲಂಚದ ಹಣವನ್ನು ಬೇಡಿಕೆ ಇಟ್ಟಿದ್ದಾರೆ ಎಂದು ರಾಜ್ಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಎಸಿಬಿ ನಿರ್ದೇಶಕ ಶಂಶೇರ್ ಸಿಂಗ್ ಅವರ ಪ್ರಕಾರ, ಕಂತುಗಳಲ್ಲಿ ಲಂಚ ತೆಗೆದುಕೊಳ್ಳುವ ಈ ಅಭ್ಯಾಸವು ಹೊಸದಲ್ಲ ಮತ್ತು ಇದು ಬಹಳ ಸಮಯದಿಂದ ನಡೆಯುತ್ತಿದೆ ಹೇಳಿದ್ದಾರೆ. ದರಲ್ಲಿ ಹೊಸದೇನೂ ಇಲ್ಲ. ಸಾಮಾನ್ಯವಾಗಿ, ಬಲಿಪಶುವು ಕೆಲಸ ಮುಗಿಯುವ ಮೊದಲು ಮೊದಲ ಕಂತನ್ನು ನೀಡಲು ಒಪ್ಪುತ್ತಾನೆ ಮತ್ತು ನಂತರ ಕೆಲಸ ಮುಗಿದ ನಂತರ ಎರಡನೇ ಕಂತನ್ನು ನೀಡುತ್ತಾನೆ. ಆದರೆ ಕೆಲವೊಮ್ಮೆ, ಅವರು ತಮ್ಮ ಮನಸ್ಸನ್ನು ಬದಲಾಯಿಸುತ್ತಾರೆ ಮತ್ತು ಎರಡನೇ ಅಥವಾ ನಂತರದ ಯಾವುದೇ ಕಂತು ನೀಡುವ ಬದಲು ಎಸಿಬಿಯನ್ನು ಸಂಪರ್ಕಿಸುತ್ತಾರೆ ಅಂಥ ಹೇಳಿದ್ದಾರೆ.